ETV Bharat / state

ಮತದಾರರ ಮನೆ ಎದುರು ಮಂತ್ರಿಸಿದ ಅಕ್ಕಿ, ಕುಂಕುಮ: ಗ್ರಾಮಸ್ಥರ ಆಕ್ರೋಶ - ಮತದಾನ ಬಹಿಷ್ಕರಿಸುವ ಎಚ್ಚರಿಕೆ ಮುದ್ದೇಬಿಹಾಳ

ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮತದಾರ
ಮತದಾರ
author img

By

Published : Dec 21, 2020, 2:54 PM IST

ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

outrage-by-the-villagers-against-the-candidates-contesting-the-gram-panchayat-elections
ಮತದಾರರ ಮನೆ ಎದುರಿಗೆ ಮಂತ್ರಿಸಿದ ಅಕ್ಕಿ, ಕುಂಕುಮ

ಹಡಲಗೇರಿ ಗ್ರಾಮದ ಎರಡನೇ ವಾರ್ಡ್​ನಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿ ಯಾರಾದರೂ ಹೀಗೆ ಮಾಟ ಮಂತ್ರ ಮಾಡಿಸಿ‌ ಕುಂಕುಮ ಎರಚಿರಬಹುದಾಗಿದ್ದು, ಇದರ ಸತ್ಯ ಬಹಿರಂಗಗೊಳ್ಳಬೇಕು ಎಂದಿರುವ ಗ್ರಾಮಸ್ಥರು, ಏಳೂ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಪಿಎಸ್​ಐ ಭೇಟಿ:

ವಿಷಯ ತಿಳಿದ ತಕ್ಷಣ ಹಡಲಗೇರಿ ಗ್ರಾಮಕ್ಕೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

outrage-by-the-villagers-against-the-candidates-contesting-the-gram-panchayat-elections
ಮತದಾರರ ಮನೆ ಎದುರಿಗೆ ಮಂತ್ರಿಸಿದ ಅಕ್ಕಿ, ಕುಂಕುಮ

ಹಡಲಗೇರಿ ಗ್ರಾಮದ ಎರಡನೇ ವಾರ್ಡ್​ನಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿ ಯಾರಾದರೂ ಹೀಗೆ ಮಾಟ ಮಂತ್ರ ಮಾಡಿಸಿ‌ ಕುಂಕುಮ ಎರಚಿರಬಹುದಾಗಿದ್ದು, ಇದರ ಸತ್ಯ ಬಹಿರಂಗಗೊಳ್ಳಬೇಕು ಎಂದಿರುವ ಗ್ರಾಮಸ್ಥರು, ಏಳೂ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಪಿಎಸ್​ಐ ಭೇಟಿ:

ವಿಷಯ ತಿಳಿದ ತಕ್ಷಣ ಹಡಲಗೇರಿ ಗ್ರಾಮಕ್ಕೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.