ETV Bharat / state

ಲಾಕ್‌ಡೌನ್‌ ಎಫೆಕ್ಟ್​​: ಉಳುಮೆಗೆ ಎತ್ತುಗಳಿಲ್ಲದೇ ರೈತರ ಪರದಾಟ

author img

By

Published : Jun 4, 2020, 4:04 PM IST

ಕೊರೊನಾ ತಡೆಯುವ ಸಲುವಾಗಿ ಸರ್ಕಾರ ಮಾಡಿದ್ದ ಲಾಕ್​ಡೌನ್​​ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿದೆ. ವಿಜಯಪುರದ ಮುದ್ದೇಬಿಹಾಳದ ರೈತರು ಉಳುಮೆಗೆ ಎತ್ತುಗಳು ಸಿಗದೇ ಪರದಾಡುತ್ತಿದ್ದಾರೆ.

ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ
ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ

ಮುದ್ದೇಬಿಹಾಳ (ವಿಜಯಪುರ): ಲಾಕ್​ಡೌನ್ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿದ್ದು, ಮುಂಗಾರು ಆರಂಭಗೊಂಡಿದೆ. ಆದರೆ ರೈತರು ಉಳುಮೆಗೆ ಎತ್ತುಗಳನ್ನು ಹುಡುಕಾಡಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ

ಲಾಕ್‌ಡೌನ್ ಘೋಷಣೆಯಾಗುತ್ತಲೇ ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲ ರೀತಿಯ ಸಂತೆಗಳನ್ನು ನಿಲ್ಲಿಸಲಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ಜಾನುವಾರು ಸಂತೆಯನ್ನು ನಿಲ್ಲಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆ ಆಗಿದ್ದರೂ ಜಾನುವಾರು ಸಂತೆ ನಡೆಯುತ್ತಿಲ್ಲ. ಇದರಿಂದಾಗಿ ರೈತರು ಉಳುಮೆ ಮಾಡಲು ಎತ್ತುಗಳನ್ನು ಹುಡುಕಾಡುವ ದುಃಸ್ಥಿತಿ ಎದುರಾಗಿದೆ.

ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ
ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ

ಜಾನುವಾರು ಸಂತೆಗೆ ಅವಕಾಶ ಕಲ್ಪಿಸಿ:

ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಪಕ್ಕದಲ್ಲಿ ಮುಂಚೆ ಜಾನುವಾರು ಸಂತೆ ನಡೆಯುತ್ತಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಆಗಿದ್ದು, ಪುನಃ ಜಾನುವಾರು ಸಂತೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ರೈತಾಪಿ ವರ್ಗದಿಂದ ಕೇಳಿ ಬಂದಿದೆ.

ಮುದ್ದೇಬಿಹಾಳ (ವಿಜಯಪುರ): ಲಾಕ್​ಡೌನ್ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿದ್ದು, ಮುಂಗಾರು ಆರಂಭಗೊಂಡಿದೆ. ಆದರೆ ರೈತರು ಉಳುಮೆಗೆ ಎತ್ತುಗಳನ್ನು ಹುಡುಕಾಡಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ

ಲಾಕ್‌ಡೌನ್ ಘೋಷಣೆಯಾಗುತ್ತಲೇ ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲ ರೀತಿಯ ಸಂತೆಗಳನ್ನು ನಿಲ್ಲಿಸಲಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ಜಾನುವಾರು ಸಂತೆಯನ್ನು ನಿಲ್ಲಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆ ಆಗಿದ್ದರೂ ಜಾನುವಾರು ಸಂತೆ ನಡೆಯುತ್ತಿಲ್ಲ. ಇದರಿಂದಾಗಿ ರೈತರು ಉಳುಮೆ ಮಾಡಲು ಎತ್ತುಗಳನ್ನು ಹುಡುಕಾಡುವ ದುಃಸ್ಥಿತಿ ಎದುರಾಗಿದೆ.

ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ
ಉಳುಮೆಗೆ ಎತ್ತುಗಳು ಸಿಗದೇ ರೈತರ ಪರದಾಟ

ಜಾನುವಾರು ಸಂತೆಗೆ ಅವಕಾಶ ಕಲ್ಪಿಸಿ:

ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಪಕ್ಕದಲ್ಲಿ ಮುಂಚೆ ಜಾನುವಾರು ಸಂತೆ ನಡೆಯುತ್ತಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಆಗಿದ್ದು, ಪುನಃ ಜಾನುವಾರು ಸಂತೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ರೈತಾಪಿ ವರ್ಗದಿಂದ ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.