ETV Bharat / state

ಸಾರಿಗೆ ಬಸ್ ಕೊರತೆ: ಏಣಿ ಮೂಲಕ ಬಸ್ ಟಾಪ್‌ ಹತ್ತಿ ವಿದ್ಯಾರ್ಥಿಗಳ ಪ್ರಯಾಣ

ಗುಂಡಕರ್ಜಗಿ ಗ್ರಾಮದಲ್ಲಿ ಬಸ್ಸಿನ ಅಭಾವವಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಅವಸರದಲ್ಲಿ ಏಣಿ ಸಹಾಯದಿಂದ ಬಸ್​ನ ಟಾಪ್​ ಏರಿ ಪ್ರಯಾಣ ಮಾಡಿರುವ ದೃಶ್ಯ ವೈರಲ್​ ಆಗಿದೆ.

author img

By

Published : Jun 28, 2022, 2:52 PM IST

Updated : Jun 28, 2022, 5:36 PM IST

ಸಾರಿಗೆ ಬಸ್ ಕೊರತೆ: ಏಣಿ ಮೂಲಕ ಬಸ್ ಟಾಪ್‌ ಹತ್ತಿ ವಿದ್ಯಾರ್ಥಿಗಳ ಪ್ರಯಾಣ
ಸಾರಿಗೆ ಬಸ್ ಕೊರತೆ: ಏಣಿ ಮೂಲಕ ಬಸ್ ಟಾಪ್‌ ಹತ್ತಿ ವಿದ್ಯಾರ್ಥಿಗಳ ಪ್ರಯಾಣ

ವಿಜಯಪುರ: ಸೂಕ್ತ ಬಸ್ ಸೌಲಭ್ಯವಿಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಜಿಲ್ಲೆಯ ‌ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ನಡೆದಿದೆ. ಕಾಲೇಜಿಗೆ ಹೋಗುವ ಅವಸರದಲ್ಲಿ ವಿದ್ಯಾರ್ಥಿಗಳು ಏಣಿಯ ಸಹಾಯದಿಂದ ಬಸ್‌ನ ಟಾಪ್ ಏರಿ ಪ್ರಯಾಣಿಸಿದ್ದಾರೆ.

ಹೆಚ್ಚಿನ ಬಸ್ಸುಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮಾಡಿರುವ ಮನವಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿ ಏಣಿ ಏರಿ ಪ್ರಯಾಣ ಮಾಡಿದ್ದಾರೆ.‌

ಏಣಿ ಮೂಲಕ ಬಸ್ ಏರಿದ ವಿದ್ಯಾರ್ಥಿಗಳು

ಒಂದೇ ಬಸ್ಸಿನಲ್ಲಿ ನೂರಕ್ಕೂ ಅಧಿಕ ಜನರು ಪ್ರಯಾಣ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನಾದರೂ ಅನಾಹುತವಾದರೆ ಸಾರಿಗೆ ಇಲಾಖೆ ಅಧಿಕಾರಿಗಳೇ ಹೊಣೆಯೆಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಯಾದಗಿರಿ: ಬಸ್‌ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ

ವಿಜಯಪುರ: ಸೂಕ್ತ ಬಸ್ ಸೌಲಭ್ಯವಿಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಜಿಲ್ಲೆಯ ‌ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ನಡೆದಿದೆ. ಕಾಲೇಜಿಗೆ ಹೋಗುವ ಅವಸರದಲ್ಲಿ ವಿದ್ಯಾರ್ಥಿಗಳು ಏಣಿಯ ಸಹಾಯದಿಂದ ಬಸ್‌ನ ಟಾಪ್ ಏರಿ ಪ್ರಯಾಣಿಸಿದ್ದಾರೆ.

ಹೆಚ್ಚಿನ ಬಸ್ಸುಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮಾಡಿರುವ ಮನವಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿ ಏಣಿ ಏರಿ ಪ್ರಯಾಣ ಮಾಡಿದ್ದಾರೆ.‌

ಏಣಿ ಮೂಲಕ ಬಸ್ ಏರಿದ ವಿದ್ಯಾರ್ಥಿಗಳು

ಒಂದೇ ಬಸ್ಸಿನಲ್ಲಿ ನೂರಕ್ಕೂ ಅಧಿಕ ಜನರು ಪ್ರಯಾಣ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನಾದರೂ ಅನಾಹುತವಾದರೆ ಸಾರಿಗೆ ಇಲಾಖೆ ಅಧಿಕಾರಿಗಳೇ ಹೊಣೆಯೆಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಯಾದಗಿರಿ: ಬಸ್‌ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ

Last Updated : Jun 28, 2022, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.