ವಿಜಯಪುರ: ಸಾಲ ಬಾಧೆ ತಾಳದೆ ರೈತ ನೇಣಿಗೆ ಶರಣಾದ ಘಟನೆ ವಿಜಯಪುರ ತಾಲೂಕಿನ ಹೆಗಡ್ಯಾಳ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ಪಾಂಡಪ್ಪ ಅಳಲದಿನ್ನಿ (50) ನೇಣಿಗೆ ಶರಣಾದ ರೈತ. ಇವರು ಬ್ಯಾಂಕ್ ಆಪ್ ಬರೋಡಾ, ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕೈಗಡವಾಗಿ ಸುಮಾರು 15 ಲಕ್ಷ ರೂ ಗಳಷ್ಟು ಸಾಲ ಮಾಡಿಕೊಂಡಿದ್ದರು ಎನ್ನ ಲಾಗುತ್ತಿದ್ದು, ಭೀಕರ ಬರದ ಹಿನ್ನೆಲೆ ಸಾಲಕ್ಕೆ ಹೆದರಿ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.