ವಿಜಯಪುರ: ವೆಲ್ಡಿಂಗ್ ಮಾಡುವಾಗ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ರೈಲ್ವೆ ನಿಲ್ದಾಣದ ಬಳಿಯ ನಾಡಗೌಡ ರೋಡಲೈನ್ಸ್ನಲ್ಲಿ ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ. ವೀರೇಂದ್ರ ಪ್ರಜಾಪತಿ ಹಾಗೂ ರಾಜೀನಾಮೆ ಗಿಡ್ಡೆ ಮೃತ ಕಾರ್ಮಿಕರು. ಘಟನೆಯಲ್ಲಿ ಪ್ರಕಾಶ ಶಿರೋಳ, ವಿಶ್ವನಾಥ ಬಡಿಗೇರ ಹಾಗೂ, ಬಸವರಾಜ್ ಡೊಣೂರ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಎಥೆನಾಲ್ ಖಾಲಿ ಮಾಡಿದ ಬಳಿಕ ಗ್ಯಾರೇಜ್ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಭಾರೀ ಸ್ಪೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.