ವಿಜಯಪುರ: ಪೌರಾಣಿಕ ಕಥೆಯಾಧಾರಿತ ನಾಟಕೋತ್ಸವವನ್ನು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸೇವಾ ಕಲಾ ಸಂಘದ ಸಹಯೋಗದಲ್ಲಿ ಈ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಕೊನೆಯ ಪ್ರದರ್ಶನವಾಗಿ ಮಹಾದೇವತಾ ಕಲಾ ಸಂಘ ಹಂದ್ಯಾಳ ಅವರಿಂದ ರಕ್ತ ರಾತ್ರಿ ಎಂಬ ಮಹಾಭಾರತದಿಂದ ಆಯ್ದೆ ಭಾಗವನ್ನು ಪ್ರದರ್ಶಿಸಲಾಯಿತು.
ಈ ವೇಳೆ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ನಾಟಕವನ್ನ ವೀಕ್ಷಿಸಿದರು. ಅಕ್ಕ ಮಹಾದೇವಿ, ರಕ್ತ ರಾತ್ರಿ ಸೇರಿದಂತೆ ಅನೇಕ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.