ETV Bharat / state

ಕಾಂಗ್ರೆಸ್​ನವರ ಬಳಿ ಹೇಳಲು ಏನೂ ಇಲ್ಲ, ಅದ್ಕೆ ಏನಾದ್ರೂ ಹೇಳಿಕೆ ಕೊಡ್ತಾರೆ: ಕಾರಜೋಳ

author img

By

Published : Dec 25, 2019, 10:52 PM IST

ಮಂಗಳೂರು ಗಲಭೆ ಕುರಿತಾಗಿ ಮಾಧ್ಯಮಗಳಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ. ಜನ ಕೂಡ ನೋಡಿದ್ದಾರೆ. ಕಾಂಗ್ರೆಸ್​​ನವರಿಗೆ ಹೇಳಲು ಏನು ಇಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.

DCM Govinda Karajola
ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ : ಕಾರಜೋಳ

ವಿಜಯಪುರ: ಮಂಗಳೂರು ಗಲಭೆ ಕುರಿತಾಗಿ ಮಾಧ್ಯಮಗಳಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ. ಜನ ಕೂಡ ನೋಡಿದ್ದಾರೆ. ಕಾಂಗ್ರೆಸ್​​ನವರಿಗೆ ಹೇಳಲು ಏನು ಇಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.

ವಿಜಯಪುರ ತಾಲೂಕಿನಲ್ಲಿದೆ ಬುರಣಾಪುರದ ವಿಮಾನ ನಿಲ್ದಾಣ ಜಾಗವನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ. ಈ ಕಾನೂನನ್ನು 130 ಕೋಟಿ ಜನ ಸ್ವಾಗತಿಸಬೇಕು ಎಂದರು.

ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ: ಕಾರಜೋಳ

ಪೌರತ್ವ ಕಾಯ್ದೆಯಿಂದ ಭಾರತೀಯರಿಗೆ ಅನ್ಯಾಯವಾಗುವುದಿಲ್ಲ. ಹೊರ ದೇಶದಿಂದ ಭಾರತಕ್ಕೆ ನುಸುಳಿ ಬಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ಯಾರು ತೊಡಗಿದ್ದಾರೆ‌ಯೋ, ಯಾರು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾರೆಯೋ ಅವರಿಗೆ ತೊಂದರೆಯಾಗುತ್ತೆ ಎಂದರು. ಇನ್ನು ಸಿಎಂ ಯಡಿಯೂರಪ್ಪಗೆ ಕೇಳರದಲ್ಲಿ ಘೇರಾವ್ ಕುರಿತು, ಒಂದು ರಾಜ್ಯದ ಮುಖ್ಯಮಂತ್ರಿ ಅಲ್ಲಿಗೆ ಹೋದಾಗ ಭದ್ರತೆ ಒದಗಿಸಲಾದಷ್ಟು ಅಸಹಾಯಕ ಸ್ಥಿತಿಯಲ್ಲಿರುವ ಸರ್ಕಾರ ಅಲ್ಲಿ ಆಡಳಿತ ನಡೆಸುತ್ತಿದೆ ಎಂದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣದ ವಿಚಾರವಾಗಿ ಮಾತನಾಡಿದ ಅವರು, ಜಾಗ ಲೆವಲಿಂಗ್ ಮಾಡಲು 54 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ. ಹೀಗಾಗಿ ಅಧಿಕಾರಿಗಳೊಂದಿಗೆ ಬಂದು ಜಾಗವನ್ನು ಪರಿಶೀಲನೆ ಮಾಡಿದ್ದೇನಿ‌. ನಮ್ಮ ಅಧಿಕಾರಾವಧಿಯಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ ಮಾಡಬೇಕು ಎಂಬುದು ನಮ್ಮ ಅಸೆ. ಇನ್ನು ಎರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಗಮನಕ್ಕೆ ತರಲಾಗುವುದು ಎಂದರು.

ವಿಜಯಪುರ: ಮಂಗಳೂರು ಗಲಭೆ ಕುರಿತಾಗಿ ಮಾಧ್ಯಮಗಳಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ. ಜನ ಕೂಡ ನೋಡಿದ್ದಾರೆ. ಕಾಂಗ್ರೆಸ್​​ನವರಿಗೆ ಹೇಳಲು ಏನು ಇಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.

ವಿಜಯಪುರ ತಾಲೂಕಿನಲ್ಲಿದೆ ಬುರಣಾಪುರದ ವಿಮಾನ ನಿಲ್ದಾಣ ಜಾಗವನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ. ಈ ಕಾನೂನನ್ನು 130 ಕೋಟಿ ಜನ ಸ್ವಾಗತಿಸಬೇಕು ಎಂದರು.

ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ: ಕಾರಜೋಳ

ಪೌರತ್ವ ಕಾಯ್ದೆಯಿಂದ ಭಾರತೀಯರಿಗೆ ಅನ್ಯಾಯವಾಗುವುದಿಲ್ಲ. ಹೊರ ದೇಶದಿಂದ ಭಾರತಕ್ಕೆ ನುಸುಳಿ ಬಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ಯಾರು ತೊಡಗಿದ್ದಾರೆ‌ಯೋ, ಯಾರು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾರೆಯೋ ಅವರಿಗೆ ತೊಂದರೆಯಾಗುತ್ತೆ ಎಂದರು. ಇನ್ನು ಸಿಎಂ ಯಡಿಯೂರಪ್ಪಗೆ ಕೇಳರದಲ್ಲಿ ಘೇರಾವ್ ಕುರಿತು, ಒಂದು ರಾಜ್ಯದ ಮುಖ್ಯಮಂತ್ರಿ ಅಲ್ಲಿಗೆ ಹೋದಾಗ ಭದ್ರತೆ ಒದಗಿಸಲಾದಷ್ಟು ಅಸಹಾಯಕ ಸ್ಥಿತಿಯಲ್ಲಿರುವ ಸರ್ಕಾರ ಅಲ್ಲಿ ಆಡಳಿತ ನಡೆಸುತ್ತಿದೆ ಎಂದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣದ ವಿಚಾರವಾಗಿ ಮಾತನಾಡಿದ ಅವರು, ಜಾಗ ಲೆವಲಿಂಗ್ ಮಾಡಲು 54 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ. ಹೀಗಾಗಿ ಅಧಿಕಾರಿಗಳೊಂದಿಗೆ ಬಂದು ಜಾಗವನ್ನು ಪರಿಶೀಲನೆ ಮಾಡಿದ್ದೇನಿ‌. ನಮ್ಮ ಅಧಿಕಾರಾವಧಿಯಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ ಮಾಡಬೇಕು ಎಂಬುದು ನಮ್ಮ ಅಸೆ. ಇನ್ನು ಎರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಗಮನಕ್ಕೆ ತರಲಾಗುವುದು ಎಂದರು.

Intro:ವಿಜಯಪುರ: ಮಂಗಳೂರು ಗಲಭೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ, ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್‌ನವರು ಇದೇ ಗಿಮಿಕ್ ಮಾಡಿ ದೇಶದಲ್ಲಿ ಎಪ್ಪತ್ತು ವರ್ಷ ಉಳಿದಿದ್ರು, ಈಗ ಜನ್ರಿಗೆ ಗೊತ್ತಾಗಿದೆ. ಸತ್ಯಾಸತ್ಯೆ ಬಗ್ಗೆ, ಗಲಭೆ ಕುರಿತಾಗಿ ಮಾಧ್ಯಮದಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ ಜನ್ರು ಕೂಡ ನೋಡಿದ್ದಾರೆ. ಅವ್ರಿಗೆ ಹೇಳಿಕೆ ಏನು ಇಲ್ಲ.ಅವ್ರು ಕೂಡ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಕುಂತಿರ್ತಾರೆ. ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.Body:ವಿಜಯಪುರ ತಾಲೂಕಿನಲ್ಲಿದೆ ಬುರಣಾಪುರದ ವಿಮಾನ ನಿಲ್ದಾಣ ಜಾಗವನ್ನು ವೀಕ್ಷಣೆ ಮಾಡಿ ಮಾತನಾಡಿದ ಡಿಸಿಎಂ ಕಾರಜೋಳ ಪೌರತ್ವ ಕಾಯ್ದೆಯನ್ನದೇಶದ ಭದ್ರತೆಗೊಸ್ಕರ ಬಂದ ಕಾನೂನಾಗಿದೆ ೧೩೦ ಕೋಟಿ ಜನ ಸ್ವಾಗತಿಸಬೇಕು ಪೌರತ್ವ ಕಾಯ್ದೆ ಭಾರತೀಯರಿಗೆ ಅನ್ಯಾಯವಾಗುವುದಿಲ್ಲ ಹೊರ ದೇಶದಿಂದ ಭಾರತಕ್ಕೆ ನುಸಿಳಿ ಬಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ‌. ಯಾರು ಭಯೋತ್ಪಾದ ಕೃತ್ಯದಲ್ಲಿ ತೊಡಗಿದ್ದಾರೆ. ಅವ್ರಿಗೆ ತೊಂದ್ರೆಯಾಗುತ್ತೆ ವಿನಃ ದೇಶ ಸಾಮಾನ್ಯ ಪ್ರಜೆಗೆ ಯಾವುದೆ ತೊಂದರೆ ಇಲ್ಲ. ಇನ್ನೂ ಸಿಎಂ ಯಡಿಯೂರಪ್ಪಗೆ ಕೇಳರದಲ್ಲಿ ಘೇರಾವ್ ಕುರಿತು ಹೇಳಿದ ಡಿಸಿಎಂ, ಒಂದು ರಾಜ್ಯದ ಮುಖ್ಯಮಂತ್ರಿ ಅಲ್ಲಿಗೆ ಹೋದಾಗ ಭದ್ರತೆ ಒದಗಿಸಲಾದಷ್ಟು ಅಸಾಯಕ ಸ್ಥಿತಿಯಲ್ಲಿರು ಸರ್ಕಾರ ಅಲ್ಲಿ ಆಡಳಿತ ನಡೆಸುತ್ತಿದೆ. ಅದನ್ನ ನಾವು ಖಂಡಿಸಬೇಕಾಗುತ್ತದೆ.
Conclusion:ಇನ್ನೂ ವಿಜಯಪುರದಲ್ಲಿ ವಿಮಾನ ನಿಲ್ದಾಣದ ವಿಚಾರವಾಗಿ ಹೇಳಿದ ಡಿಸಿಎಂ ಕಾರಜೋಳ ನಿಲ್ದಾಣ ಜಾಗ ಲೇವಲಿಂಗ್ ಮಾಡಲು ೫೪ ಕೋಟಿ ಹೆಚ್ಚಾಗುತ್ತದೆ. ಹೀಗಾಗಿ ಅಧಿಕಾರಿಗಳೊಂದಿಗೆ ಬಂದು ಜಾಗವನ್ನು ಪರಿಶೀಲನೆ ಮಾಡಿದ್ದೇನಿ‌ ಅನಿವಾರ್ಯ ಎಟಿಆರ್ ೭೨ ಸಣ್ಣ ಪೈಟ್ ಹಾಕಲು ನೀಲ ನಕ್ಷೆ ತಯಾರಿಸಲಾಗಿದೆ ೨೨೦ ಕೋಟಿ ವೆಚ್ಚದಲ್ಲಿ ಮುಂದೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕಾಮಗಾರಿಯನ್ನು ಯಾರಿಗೆ ವಹಿಸಬೇಕು ಎಂದು ನಿರ್ಧಾರ ಸರ್ಕಾರ ಮಾಡುತ್ತದೆ. ನಮ್ಮ ಅಧಿಕಾರ ಅವಧಿಯಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ ಮಾಡಬೇಕು ಎಂಬುದು ನಮ್ಗೂ ಅಸೆ ಇದೆ ಇನ್ನೂ ಎರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಗಮನಕ್ಕೆ ತರಲಾಗುವುದು ಎಂದು ಡಿಸಿಂ ಗೋವಿಂದ ಕಾರಜೋಳ ಮಾಧ್ಯಮಗಳಿಗೆ ಹೇಳಿದರು‌...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.