ETV Bharat / state

ಕೋವಿಡ್​-19 ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ ಡಿಸಿಸಿ ಬ್ಯಾಂಕ್​ನಿಂದ 1 ಕೋಟಿ ರೂ. ನೆರವು​

ಜಿಲ್ಲೆಯಲ್ಲಿ ಸಾರ್ವಜನಿಕ ವಲಯಗಳು ಬಂದ್ ಆಗಿವೆ. ಹೀಗಾಗಿ ಕೋವಿಡ್ 19 ವೈರಸ್ ಭೀತಿ ಹೆಚ್ಚಾಗಿರುವುದರಿಂದ ಜನ ತತ್ತರಿಸುತ್ತಿದ್ದಾರೆ. ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಸಿಎಂ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಪಾಟೀಲ್​ ತಿಳಿಸಿದರು.

author img

By

Published : Apr 20, 2020, 4:40 PM IST

DCC Bank
ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಪಾಟೀಲ

ವಿಜಯಪುರ: ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಒಂದು ಕೋಟಿ ರೂಪಾಯಿ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇವೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್​ ತಿಳಿಸಿದರು.

ನಗರದ ಕೇಂದ್ರ ಡಿಸಿಸಿ ಬ್ಯಾಂಕ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕೊರೊನಾ ಭೀತಿ ಎದುರಾಗಿದ್ದರಿಂದ ಎಲ್ಲಾ ಸಾರ್ವಜನಿಕ ವಲಯಗಳು ಬಂದ್ ಆಗಿವೆ. ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಸಿಎಂ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ಹಣ ನೀಡಲಾಗುವುದು. ಸಹಕಾರ ಸಚಿವರ ಜೊತೆ ಮಾತನಾಡಿ ನೇರವಾಗಿ ಸಿಎಂ ಭೇಟಿ‌ ಮಾಡಿ ಚೆಕ್ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಪಾಟೀಲ

ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ ಈಗಾಗಲೇ 58 ಲಕ್ಷ ಹಣವನ್ನು ಸಿಎಂಗೆ ಪರಿಹಾರ ನಿಧಿಗೆ ತಲುಪಿಸಲಾಗಿದೆ. ದೇಶಕ್ಕೆ ಆಪತ್ತು ಬಂದಾಗ ಡಿಸಿಸಿ ಬ್ಯಾಂಕ್ ಸರ್ಕಾರದ ನೆರವಿಗೆ ನಿಲ್ಲುತ್ತೆ ಎಂದರು.

ವಿಜಯಪುರ: ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಒಂದು ಕೋಟಿ ರೂಪಾಯಿ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇವೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್​ ತಿಳಿಸಿದರು.

ನಗರದ ಕೇಂದ್ರ ಡಿಸಿಸಿ ಬ್ಯಾಂಕ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕೊರೊನಾ ಭೀತಿ ಎದುರಾಗಿದ್ದರಿಂದ ಎಲ್ಲಾ ಸಾರ್ವಜನಿಕ ವಲಯಗಳು ಬಂದ್ ಆಗಿವೆ. ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಸಿಎಂ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ಹಣ ನೀಡಲಾಗುವುದು. ಸಹಕಾರ ಸಚಿವರ ಜೊತೆ ಮಾತನಾಡಿ ನೇರವಾಗಿ ಸಿಎಂ ಭೇಟಿ‌ ಮಾಡಿ ಚೆಕ್ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಾನಂದ ಪಾಟೀಲ

ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ ಈಗಾಗಲೇ 58 ಲಕ್ಷ ಹಣವನ್ನು ಸಿಎಂಗೆ ಪರಿಹಾರ ನಿಧಿಗೆ ತಲುಪಿಸಲಾಗಿದೆ. ದೇಶಕ್ಕೆ ಆಪತ್ತು ಬಂದಾಗ ಡಿಸಿಸಿ ಬ್ಯಾಂಕ್ ಸರ್ಕಾರದ ನೆರವಿಗೆ ನಿಲ್ಲುತ್ತೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.