ETV Bharat / state

ವಿಜಯಪುರ: ಕೋವಿಡ್​​ ನಿಯಮ ಉಲ್ಲಂಘಿಸಿ ಅದ್ಧೂರಿ ಜಾತ್ರೆ

ಕೋವಿಡ್ ನಿಯಮ ಉಲ್ಲಂಘಿಸಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಲಾಗಿದೆ.

author img

By

Published : Jan 18, 2022, 10:14 AM IST

Covid rules break in Neelagangambike fair
ಬಳಗಾನೂರ ಗ್ರಾಮದಲ್ಲಿ ಅದ್ದೂರಿ ಜಾತ್ರೆ

ವಿಜಯಪುರ: ಬನದ ಹುಣ್ಣಿಮೆ ನಿಮಿತ್ತ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರೆ ನೆರವೇರಿತು. ಕೋವಿಡ್ ನಿಯಮ ಗಾಳಿ ತೂರಿ ಸಾವಿರಾರು ಭಕ್ತರು ಸೇರಿ ರಥೋತ್ಸವ ಆಚರಿಸಿದರು. ಬಳಗಾನೂರ ಗ್ರಾಮದ ನೀಲಗಂಗಾಂಬಿಕೆ ದೇವಿ ಜಾತ್ರೆ ಹಿನ್ನೆಲೆ ಗುಂಪು - ಗುಂಪಾಗಿ ಸೇರಿ ತೇರು ಎಳೆದು, ಸಾಮಾಜಿಕ ಅಂತರ ಮರೆತು ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಳಗಾನೂರು ಗ್ರಾಮದಲ್ಲಿ ಅದ್ಧೂರಿ ಜಾತ್ರೆ

ಕೋವಿಡ್​​ನಿಂದಾಗಿ ಜಿಲ್ಲೆಯ ಎಲ್ಲ ಜಾತ್ರೆಗಳನ್ನು ಜಿಲ್ಲಾಡಳಿತ ಈಗಾಗಲೇ ರದ್ದು ಮಾಡಿ ಆದೇಶ ಹೊರಡಿಸಿದೆ. ಆದರೆ, ಗ್ರಾಮಸ್ಥರು ನಿಷೇಧದ ಮಧ್ಯೆಯೂ ರಥೋತ್ಸವ ನೆರವೇರಿಸಿದ್ದಾರೆ. ಜಾತ್ರಾ ಕಮಿಟಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ

ವಿಜಯಪುರ: ಬನದ ಹುಣ್ಣಿಮೆ ನಿಮಿತ್ತ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರೆ ನೆರವೇರಿತು. ಕೋವಿಡ್ ನಿಯಮ ಗಾಳಿ ತೂರಿ ಸಾವಿರಾರು ಭಕ್ತರು ಸೇರಿ ರಥೋತ್ಸವ ಆಚರಿಸಿದರು. ಬಳಗಾನೂರ ಗ್ರಾಮದ ನೀಲಗಂಗಾಂಬಿಕೆ ದೇವಿ ಜಾತ್ರೆ ಹಿನ್ನೆಲೆ ಗುಂಪು - ಗುಂಪಾಗಿ ಸೇರಿ ತೇರು ಎಳೆದು, ಸಾಮಾಜಿಕ ಅಂತರ ಮರೆತು ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಳಗಾನೂರು ಗ್ರಾಮದಲ್ಲಿ ಅದ್ಧೂರಿ ಜಾತ್ರೆ

ಕೋವಿಡ್​​ನಿಂದಾಗಿ ಜಿಲ್ಲೆಯ ಎಲ್ಲ ಜಾತ್ರೆಗಳನ್ನು ಜಿಲ್ಲಾಡಳಿತ ಈಗಾಗಲೇ ರದ್ದು ಮಾಡಿ ಆದೇಶ ಹೊರಡಿಸಿದೆ. ಆದರೆ, ಗ್ರಾಮಸ್ಥರು ನಿಷೇಧದ ಮಧ್ಯೆಯೂ ರಥೋತ್ಸವ ನೆರವೇರಿಸಿದ್ದಾರೆ. ಜಾತ್ರಾ ಕಮಿಟಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.