ETV Bharat / state

ಒಣದ್ರಾಕ್ಷಿ ಮಾರುಕಟ್ಟೆಗೂ ತಟ್ಟಿದ ಕೊರೊನಾ ಲಾಕ್‌ಡೌನ್‌ ಬಿಸಿ..ಕಂಗಾಲಾದ ಬೆಳೆಗಾರ

author img

By

Published : Jun 4, 2020, 6:15 PM IST

ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗಲಿ ಎಂದು ವಿಜಯಪುರ ಜಿಲ್ಲಾಡಳಿತ ಇ - ಮಾರುಕಟ್ಟೆಯನ್ನು ಆರಂಭಿಸಿತ್ತು. ಆದ್ರೆ ಸಾಮಾನ್ಯ ಮಾರುಕಟ್ಟೆಗಿಂತ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

covid-19-effect-dry-grapes-price-down-in-vijayapura
ಒಣದ್ರಾಕ್ಷಿ ಮಾರುಕಟ್ಟೆಗೂ ತಟ್ಟಿದ ಕೊರೊನಾ ಲಾಕ್‌ಡೌನ್‌

ವಿಜಯಪುರ: ರೈತರು ದಲ್ಲಾಳಿಗಳಿಂದ ಮೊಸ ಹೋಗಬಾರದು, ಒಣ ದ್ರಾಕ್ಷಿ ಬೆಂಬಲ ಬೆಲೆ ಸಿಗುವಂತಾಗಲಿ ಎಂದು ವಿಜಯಪುರದಲ್ಲಿ ಆನ್‌ಲೈನ್ ಮಾರುಕಟ್ಟೆಯನ್ನ ಕಳದೆ 4 ತಿಂಗಳ ಹಿಂದೆ ಆರಂಭಿಸಲಾಗಿದೆ. ಇನ್ನೇನು ಲಾಕ್‌ಡೌನ್ ಸಡಿಲಿಕೆ‌ಯಾಯಿತು. ಒಣ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತದೆ, ಮಾಡಿದ ಸಾಲ‌ ದೂರವಾಗುತ್ತದೆ ಅಂತ ಅಂದುಕೊಂಡಿದ ದ್ರಾಕ್ಷಿ ಬೆಳೆಗಾರರಿಗೆ ನಿರಾಸೆಯಾಗಿದೆ.

ಒಣದ್ರಾಕ್ಷಿ ಮಾರುಕಟ್ಟೆಗೂ ತಟ್ಟಿದ ಕೊರೊನಾ ಲಾಕ್‌ಡೌನ್‌

ವಿಜಯಪುರ ಜಿಲ್ಲೆಯಲ್ಲಿ 13,500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ರೈತರಿಗೆ ಅನುಕೂಲವಾಗಲಿ ಎಂದು ಜಿಲ್ಲಾಡಳಿತ ಆನ್‌ಲೈನ್ ಇ- ಟೆಂಡರ್‌ ಆರಂಭಿಸಿದೆ. ಲಾಕ್‌ಡೌನ್ ಪರಿಣಾಮದಿಂದ ಎರಡು ತಿಂಗಳ ಮಾರುಕಟ್ಟೆ ಬಂದ್ ಆಗಿತು. ಇದರಿಂದ ಈ ವರ್ಷ ಜಿಲ್ಲೆಯಲ್ಲಿ 1.20 ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಪ್ರತಿ ಕೆ‌.ಜಿ 350 ರೂ‌‌. ಮಾರಾಟವಾಗುವ ಒಣ ದ್ರಾಕ್ಷಿ ಆನ್‌ಲೈನ್‌ನಲ್ಲಿ 150 ರೂ. ಮಾರಾಟವಾಗುತ್ತಿದೆ. ಇದು ದ್ರಾಕ್ಷಿ ಬೆಳೆಗಾರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 14 ಕೋಲ್ಡ್ ಸ್ಟೋರೇಜ್‌ಗಳಿದ್ದು, ಇವುಗಳ ಸಾಮರ್ಥ್ಯ ಕೂಡ 22 ಸಾವಿರ ಮೆಟ್ರಿಕ್ ಟನ್ ಇದೆ. ರೈತರು 1 ಟನ್ ಒಣ ದ್ರಾಕ್ಷಿಯನ್ನು ಸ್ಟೋರೇಜ್ ಮಾಡಬೇಕೆಂದರೂ ಒಂದು ದಿನಕ್ಕೆ 500 ರೂ. ಬಾಡಿಗೆ ನೀಡಬೇಕು. ಹೆಚ್ಚಾಗಿ ರೈತರು ಒಣ ದ್ರಾಕ್ಷಿ ಸ್ಟೋರೇಜ್‌ಗೆ ಮಹಾರಾಷ್ಟ್ರವನ್ನೇ ಆಧರಿಸಿದ್ದಾರೆ.

ಸದ್ಯ ಕೊರೊನಾ ಸಂಕಷ್ಟ ಆನ್‌ಲೈನ್‌ ಮಾರುಕಟ್ಟೆಗೂ ತಟ್ಟಿದ್ದು, ಕೆ.ಜಿ ಒಣ ದ್ರಾಕ್ಷಿ ಬೆಲೆ 200 ಗಡಿ ತಲುಪದಿರೋದು ರೈತರ ನಿದ್ದೆಗೆಡಿಸಿದೆ. ಈ ಮಾರುಕಟ್ಟೆ ಶನಿವಾರ ಮಾತ್ರ ಆರಂಭವಾಗುತ್ತೆ. ಮೇ 21ರಂದು ಆರಂಭವಾಗಿರುವ ಮಾರುಕಟ್ಟೆಯಲ್ಲಿ 96,126 ಬಾಕ್ಸ್ ಮಾತ್ರ ಸೇಲ್ ಆಗಿದೆ.‌ ಕಳೆದ ವಾರದ ಮಾರುಕಟ್ಟೆಯಲ್ಲಿ 16.50 ಕೋಟಿ ವಹಿವಾಟು ಆಗಿದೆ. ಪ್ರತಿ ಕೆಜಿಗೆ ಕನಿಷ್ಠ 115 ರೂ. ಹಾಗೂ ಗರಿಷ್ಠ 190 ರೂ. ನಿಗದಿಯಾಗಿದೆ.

ಕೊರೊನಾ‌ ಭೀತಿಯಿಂದ ಮಾರುಕಟ್ಟೆಗೆ ಖರೀದಿದಾರರ ಕೊರತೆ ಹಾಗೂ ಸಭೆ ಸಮಾರಂಭ, ಹೋಟೆಲ್‌ ಉದ್ಯಮ ಬಂದ್ ಆಗಿರುವ ಕಾರಣ ಒಣದ್ರಾಕ್ಷಿ ಬೆಲೆ ಕುಸಿತವಾಗಿದೆ. ಮುಂದಿನ‌ ದಿನಗಳಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿರುವುದಾಗಿ ಎಪಿಎಂಸಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಲಾಕ್‌ಡೌನ ಬಳಿಕ ಒಣ ದ್ರಾಕ್ಷಿ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಖರೀದಿದಾರರ ಕೊರತೆಯಿಂದ‌ ಒಣದ್ರಾಕ್ಷಿ ಬೆಲೆ ಇಳಿಕೆಗೊಂಡು ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದ್ರೂ ಸರ್ಕಾರ, ದ್ರಾಕ್ಷಿ ಬೆಳೆಗಾರ ನೆರವಿಗೆ ಬರಬೇಕಿದೆ.

ವಿಜಯಪುರ: ರೈತರು ದಲ್ಲಾಳಿಗಳಿಂದ ಮೊಸ ಹೋಗಬಾರದು, ಒಣ ದ್ರಾಕ್ಷಿ ಬೆಂಬಲ ಬೆಲೆ ಸಿಗುವಂತಾಗಲಿ ಎಂದು ವಿಜಯಪುರದಲ್ಲಿ ಆನ್‌ಲೈನ್ ಮಾರುಕಟ್ಟೆಯನ್ನ ಕಳದೆ 4 ತಿಂಗಳ ಹಿಂದೆ ಆರಂಭಿಸಲಾಗಿದೆ. ಇನ್ನೇನು ಲಾಕ್‌ಡೌನ್ ಸಡಿಲಿಕೆ‌ಯಾಯಿತು. ಒಣ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತದೆ, ಮಾಡಿದ ಸಾಲ‌ ದೂರವಾಗುತ್ತದೆ ಅಂತ ಅಂದುಕೊಂಡಿದ ದ್ರಾಕ್ಷಿ ಬೆಳೆಗಾರರಿಗೆ ನಿರಾಸೆಯಾಗಿದೆ.

ಒಣದ್ರಾಕ್ಷಿ ಮಾರುಕಟ್ಟೆಗೂ ತಟ್ಟಿದ ಕೊರೊನಾ ಲಾಕ್‌ಡೌನ್‌

ವಿಜಯಪುರ ಜಿಲ್ಲೆಯಲ್ಲಿ 13,500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ರೈತರಿಗೆ ಅನುಕೂಲವಾಗಲಿ ಎಂದು ಜಿಲ್ಲಾಡಳಿತ ಆನ್‌ಲೈನ್ ಇ- ಟೆಂಡರ್‌ ಆರಂಭಿಸಿದೆ. ಲಾಕ್‌ಡೌನ್ ಪರಿಣಾಮದಿಂದ ಎರಡು ತಿಂಗಳ ಮಾರುಕಟ್ಟೆ ಬಂದ್ ಆಗಿತು. ಇದರಿಂದ ಈ ವರ್ಷ ಜಿಲ್ಲೆಯಲ್ಲಿ 1.20 ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಪ್ರತಿ ಕೆ‌.ಜಿ 350 ರೂ‌‌. ಮಾರಾಟವಾಗುವ ಒಣ ದ್ರಾಕ್ಷಿ ಆನ್‌ಲೈನ್‌ನಲ್ಲಿ 150 ರೂ. ಮಾರಾಟವಾಗುತ್ತಿದೆ. ಇದು ದ್ರಾಕ್ಷಿ ಬೆಳೆಗಾರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 14 ಕೋಲ್ಡ್ ಸ್ಟೋರೇಜ್‌ಗಳಿದ್ದು, ಇವುಗಳ ಸಾಮರ್ಥ್ಯ ಕೂಡ 22 ಸಾವಿರ ಮೆಟ್ರಿಕ್ ಟನ್ ಇದೆ. ರೈತರು 1 ಟನ್ ಒಣ ದ್ರಾಕ್ಷಿಯನ್ನು ಸ್ಟೋರೇಜ್ ಮಾಡಬೇಕೆಂದರೂ ಒಂದು ದಿನಕ್ಕೆ 500 ರೂ. ಬಾಡಿಗೆ ನೀಡಬೇಕು. ಹೆಚ್ಚಾಗಿ ರೈತರು ಒಣ ದ್ರಾಕ್ಷಿ ಸ್ಟೋರೇಜ್‌ಗೆ ಮಹಾರಾಷ್ಟ್ರವನ್ನೇ ಆಧರಿಸಿದ್ದಾರೆ.

ಸದ್ಯ ಕೊರೊನಾ ಸಂಕಷ್ಟ ಆನ್‌ಲೈನ್‌ ಮಾರುಕಟ್ಟೆಗೂ ತಟ್ಟಿದ್ದು, ಕೆ.ಜಿ ಒಣ ದ್ರಾಕ್ಷಿ ಬೆಲೆ 200 ಗಡಿ ತಲುಪದಿರೋದು ರೈತರ ನಿದ್ದೆಗೆಡಿಸಿದೆ. ಈ ಮಾರುಕಟ್ಟೆ ಶನಿವಾರ ಮಾತ್ರ ಆರಂಭವಾಗುತ್ತೆ. ಮೇ 21ರಂದು ಆರಂಭವಾಗಿರುವ ಮಾರುಕಟ್ಟೆಯಲ್ಲಿ 96,126 ಬಾಕ್ಸ್ ಮಾತ್ರ ಸೇಲ್ ಆಗಿದೆ.‌ ಕಳೆದ ವಾರದ ಮಾರುಕಟ್ಟೆಯಲ್ಲಿ 16.50 ಕೋಟಿ ವಹಿವಾಟು ಆಗಿದೆ. ಪ್ರತಿ ಕೆಜಿಗೆ ಕನಿಷ್ಠ 115 ರೂ. ಹಾಗೂ ಗರಿಷ್ಠ 190 ರೂ. ನಿಗದಿಯಾಗಿದೆ.

ಕೊರೊನಾ‌ ಭೀತಿಯಿಂದ ಮಾರುಕಟ್ಟೆಗೆ ಖರೀದಿದಾರರ ಕೊರತೆ ಹಾಗೂ ಸಭೆ ಸಮಾರಂಭ, ಹೋಟೆಲ್‌ ಉದ್ಯಮ ಬಂದ್ ಆಗಿರುವ ಕಾರಣ ಒಣದ್ರಾಕ್ಷಿ ಬೆಲೆ ಕುಸಿತವಾಗಿದೆ. ಮುಂದಿನ‌ ದಿನಗಳಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿರುವುದಾಗಿ ಎಪಿಎಂಸಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಲಾಕ್‌ಡೌನ ಬಳಿಕ ಒಣ ದ್ರಾಕ್ಷಿ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಖರೀದಿದಾರರ ಕೊರತೆಯಿಂದ‌ ಒಣದ್ರಾಕ್ಷಿ ಬೆಲೆ ಇಳಿಕೆಗೊಂಡು ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದ್ರೂ ಸರ್ಕಾರ, ದ್ರಾಕ್ಷಿ ಬೆಳೆಗಾರ ನೆರವಿಗೆ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.