ವಿಜಯಪುರ: ನಾಮಪತ್ರ ಸಲ್ಲಿಕೆಯ ಬೆನ್ನೆಲೆ ಈಗ ಲೋಕ ಸಮರಕ್ಕೆ ಧುಮುಕಿರುವ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬೀಹಾಳ ನಗರದಲ್ಲಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ವಿಜಯಪುರ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಿದರು.
ನಗರದ ಸಂಗಮೇಶ್ವರ್ ಓಣಿ , ಅಂಬೇಡ್ಕರ್ ವೃತ್ ಹಾಗೂ ನಗರದ ಮಧ್ಯ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪರಸ್ತರನ್ನು ಬಿಜೆಪಿಗೆ ಮತ ನೀಡಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಿ ಎಂದು ವ್ಯಾಪರಸ್ತರ ಬಳಿ ಮನವಿ ಮಾಡಿಕೊಂಡರು. ಬಳಿಕ ಬಸವೇಶ್ವರ ಸರ್ಕಲ್ನಲ್ಲಿ ಪ್ರಚಾರ ನಡೆಸಿ ತಮ್ಮ ನಿವಾಸ ವಿರುವ ವಿದ್ಯಾನಗರದಲ್ಲಿ ಪ್ರಚಾರ ಮುಕ್ತಾಯಗೊಳಿಸಿದರು.