ETV Bharat / state

ಮೂರು ಬಲಿ ಬಳಿಕವೂ ಎಚ್ಚೆತ್ತುಕೊಳ್ಳದ ಆಡಳಿತ:   ಭೀತಿಗೆ ದೂಡಿದೆ ಗುಡ್ಡ ತೆರವಿನ ಭೂತ

author img

By

Published : May 30, 2019, 9:45 PM IST

ಉತ್ತರಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಕಳೆದ ನಾಲ್ಕೈದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕಾಮಗಾರಿಗೆ ಬೃಹತ್ ಗುಡ್ಡಗಳು ಎದುರಾಗಿದ್ದು, ಇವುಗಳ ತೆರವಿಗೆ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್​ಬಿ ಕಂಪನಿ ಸ್ಫೋಟಕಗಳನ್ನು ಬಳಸುತ್ತಿದೆ. ಈ ಸ್ಫೋಟಕವೇ ಇದೀಗ ಕುಮಟಾ ತಾಲೂಕಿನ ತಂಡ್ರಕುಳಿ ಗ್ರಾಮದಲ್ಲಿರುವ ಜನರ ನಿದ್ದೆ ಗೆಡಿಸಿದೆ.

Karwar

ಕಾರವಾರ: ಅದು ಹೆದ್ದಾರಿಯಂಚಿನ ಪುಟ್ಟ ಗ್ರಾಮ. ಅಲ್ಲಿ ಕಳೆದೆರಡು ವರ್ಷದ ಹಿಂದೆ ಮಳೆಗಾಲದಲ್ಲಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿಯಾಗಿದ್ದರು. ಇದಕ್ಕೆ ಹೆದ್ದಾರಿ ಅಗಲೀಕರಣದ ವೇಳೆ ನಡೆಸಿದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಆ ಗ್ರಾಮಕ್ಕೆ ಸಂಕಷ್ಟ ಎದುರಾಗಿದೆ. ಗುಡ್ಡದ ಬಂಡೆಗಲ್ಲುಗಳ ತೆರವಿಗೆ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರ ಕಲ್ಲುಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಇಲ್ಲಿನ ಜನ ನಿತ್ಯ ಭಯದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಾರವಾರದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು,ಬೃಹತ್ ಗುಡ್ಡಗಳ ಸ್ಪೋಟ ಜನರಲ್ಲಿ ಭಯ ಸೃಷ್ಠಿಸಿದೆ

ನದಿ ಅಂಚಿನ ತಗ್ಗು ಪ್ರದೇಶದಲ್ಲಿರುವ ಈ ತಂಡ್ರಕುಳಿ ಗ್ರಾಮದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಹೆದ್ದಾರಿಗೆ ಗುಡ್ಡಗಳು ಅಡ್ಡಿಯಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿ ಗುಡ್ಡ ತೆರವಿನ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳೆದ ಎರಡು ವರ್ಷದ ಹಿಂದೆ ಗ್ರಾಮದಲ್ಲಿ ಅರೆಬರೆ ತೆರವುಗೊಳಿಸಿದ ಗುಡ್ಡ ಕುಸಿದು ಕೆಳಭಾಗದ ಮನೆಯ ಮೇಲೆ ಬಿದ್ದು ಮೂವರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.

ಕೊನೆಗೆ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಕುಸಿಯಬಹುದಾದ ಗುಡ್ಡಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಕೆಲ ತಿಂಗಳುಗಳು ನಿಯಮ ಪಾಲಿಸಿದ ಐಆರ್​ಬಿ ಕಂಪನಿಯವರು ಮತ್ತೆ ಹಳೆ ಚಾಳಿಯನ್ನೆ ಮುಂದುವರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬಂಡೆಗಲ್ಲುಗಳನ್ನು ಸ್ಫೋಟಿಸಿದ ಕಾರಣ ಸಿಡಿದ ಕಲ್ಲುಗಳು, ಮನೆ, ಶಾಲೆಗಳ ಮೇಲೆ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರ ಮೈ ಮೇಲೆ ಕಲ್ಲು ಬೀಳುವುದು ಸ್ವಲ್ಪದರಲ್ಲಿಯೇ ತಪ್ಪಿದೆ.

ಆದರೆ ಈ ಬಗ್ಗೆ ಕಂಪನಿಯವರನ್ನು ಕೇಳಿದರೆ ಜಿಲ್ಲಾಡಳಿತ ಪರವಾನಗಿ ಪಡೆದಿರುವುದಾಗಿ ತಿಳಿಸುತ್ತಾರೆ. ಇನ್ನು ಕಲ್ಲುಗಳ ಸ್ಫೋಟದಿಂದ ಮತ್ತೆ ಗುಡ್ಡ ಬಿರುಕು ಬಿಡುತ್ತಿದ್ದು ಮಳೆಗಾಲದಲ್ಲಿ ಮತ್ತೆ ಗುಡ್ಡ ಗ್ರಾಮದ ಮನೆಗಳ ಮೇಲೆ ಕುಸಿದು ಬೀಳುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ. ಇದಲ್ಲದೇ ಸ್ಫೋಟದಿಂದ ಗ್ರಾಮದ ಮನೆಗಳಲ್ಲಿ ಸಹ ಬಿರುಕು ಕಂಡಿದ್ದು ಇದೇ ರೀತಿ ಸ್ಫೋಟ ಮುಂದುವರೆಸಿದರೆ ಮುಂದೆ ದೊಡ್ಡ ಅನಾಹುತ ಆಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಗ್ರಾಮಸ್ಥರ ಆತಂಕ

ಕಾರವಾರ: ಅದು ಹೆದ್ದಾರಿಯಂಚಿನ ಪುಟ್ಟ ಗ್ರಾಮ. ಅಲ್ಲಿ ಕಳೆದೆರಡು ವರ್ಷದ ಹಿಂದೆ ಮಳೆಗಾಲದಲ್ಲಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿಯಾಗಿದ್ದರು. ಇದಕ್ಕೆ ಹೆದ್ದಾರಿ ಅಗಲೀಕರಣದ ವೇಳೆ ನಡೆಸಿದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಆ ಗ್ರಾಮಕ್ಕೆ ಸಂಕಷ್ಟ ಎದುರಾಗಿದೆ. ಗುಡ್ಡದ ಬಂಡೆಗಲ್ಲುಗಳ ತೆರವಿಗೆ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರ ಕಲ್ಲುಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಇಲ್ಲಿನ ಜನ ನಿತ್ಯ ಭಯದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಾರವಾರದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು,ಬೃಹತ್ ಗುಡ್ಡಗಳ ಸ್ಪೋಟ ಜನರಲ್ಲಿ ಭಯ ಸೃಷ್ಠಿಸಿದೆ

ನದಿ ಅಂಚಿನ ತಗ್ಗು ಪ್ರದೇಶದಲ್ಲಿರುವ ಈ ತಂಡ್ರಕುಳಿ ಗ್ರಾಮದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಹೆದ್ದಾರಿಗೆ ಗುಡ್ಡಗಳು ಅಡ್ಡಿಯಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿ ಗುಡ್ಡ ತೆರವಿನ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳೆದ ಎರಡು ವರ್ಷದ ಹಿಂದೆ ಗ್ರಾಮದಲ್ಲಿ ಅರೆಬರೆ ತೆರವುಗೊಳಿಸಿದ ಗುಡ್ಡ ಕುಸಿದು ಕೆಳಭಾಗದ ಮನೆಯ ಮೇಲೆ ಬಿದ್ದು ಮೂವರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.

ಕೊನೆಗೆ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಕುಸಿಯಬಹುದಾದ ಗುಡ್ಡಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಕೆಲ ತಿಂಗಳುಗಳು ನಿಯಮ ಪಾಲಿಸಿದ ಐಆರ್​ಬಿ ಕಂಪನಿಯವರು ಮತ್ತೆ ಹಳೆ ಚಾಳಿಯನ್ನೆ ಮುಂದುವರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬಂಡೆಗಲ್ಲುಗಳನ್ನು ಸ್ಫೋಟಿಸಿದ ಕಾರಣ ಸಿಡಿದ ಕಲ್ಲುಗಳು, ಮನೆ, ಶಾಲೆಗಳ ಮೇಲೆ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರ ಮೈ ಮೇಲೆ ಕಲ್ಲು ಬೀಳುವುದು ಸ್ವಲ್ಪದರಲ್ಲಿಯೇ ತಪ್ಪಿದೆ.

ಆದರೆ ಈ ಬಗ್ಗೆ ಕಂಪನಿಯವರನ್ನು ಕೇಳಿದರೆ ಜಿಲ್ಲಾಡಳಿತ ಪರವಾನಗಿ ಪಡೆದಿರುವುದಾಗಿ ತಿಳಿಸುತ್ತಾರೆ. ಇನ್ನು ಕಲ್ಲುಗಳ ಸ್ಫೋಟದಿಂದ ಮತ್ತೆ ಗುಡ್ಡ ಬಿರುಕು ಬಿಡುತ್ತಿದ್ದು ಮಳೆಗಾಲದಲ್ಲಿ ಮತ್ತೆ ಗುಡ್ಡ ಗ್ರಾಮದ ಮನೆಗಳ ಮೇಲೆ ಕುಸಿದು ಬೀಳುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ. ಇದಲ್ಲದೇ ಸ್ಫೋಟದಿಂದ ಗ್ರಾಮದ ಮನೆಗಳಲ್ಲಿ ಸಹ ಬಿರುಕು ಕಂಡಿದ್ದು ಇದೇ ರೀತಿ ಸ್ಫೋಟ ಮುಂದುವರೆಸಿದರೆ ಮುಂದೆ ದೊಡ್ಡ ಅನಾಹುತ ಆಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಗ್ರಾಮಸ್ಥರ ಆತಂಕ

Intro:( ಸರ್ ಇದಕ್ಕೆ ಸಂಬಂಧಿಸಿದ ಮನೆ ಮೇಲೆ ಕಲ್ಲುಗಳು ಬಿದ್ದು ಹಾನಿಯಾಗಿರುವ ಹಳೆ ವಿಸ್ಯುವಲ್ ಇಲ್ಲಿ ಕಳುಹಿಸಲಾಗಿದೆ. ಉಳಿದಂತೆ ಬೈಟ್ ಮತ್ತು ಒಂದು ವಿಸ್ಯುವಲ್ ಮೋಜೊ ಮೂಲಕ ಕಳುಹಿಸಲಾಗಿದೆ)

ಮೂರು ಬಲಿ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು... ಗ್ರಾಮದವರನ್ನು ಕಾಡುತ್ತಿರುವ ಗುಡ್ಡ ತೆರುವಿನ ಭೂತ
ಕಾರವಾರ: ಅದು ಹೆದ್ದಾರಿಯಂಚಿನ ಪುಟ್ಟ ಗ್ರಾಮ. ಅಲ್ಲಿ ಕಳೆದೆರಡು ವರ್ಷದ ಹಿಂದೆ ಮಳೆಗಾಲದಲ್ಲಿ ಗುಡ್ಡಕುಸಿದು ಮೂರು ಮಕ್ಕಳು ಬಲಿಯಾಗಿದ್ದರು. ಇದಕ್ಕೆ ಹೆದ್ದಾರಿ ಅಗಲೀಕರಣದ ವೇಳೆ ನಡೆಸಿದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಆ ಗ್ರಾಮಕ್ಕೆ ಸಂಕಷ್ಟ ಎದುರಾಗಿದೆ. ಗುಡ್ಡದ ಬಂಡೆಗಲ್ಲುಗಳ ತೆರವಿಗೆ ಸ್ಪೋಟಕಗಳನ್ನು ಬಳಸುತ್ತಿದ್ದು, ಇದರ ಕಲ್ಲುಗಳು ಮನೆಗಳ ಮೇಲೆ ಬಿದ್ದು ನಿತ್ಯ ಭಯದಲ್ಲಿ ಬದುಕ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು ಉತ್ತರಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಕಳೆದ ನಾಲ್ಕೈದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ೬೬ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಬೃಹತ್ ಗುಡ್ಡಗಳು ಎದುರಾಗಿದ್ದು, ಇವುಗಳ ತೆರವಿಗೆ ಗುತ್ತೆಗೆ ಪಡೆದಿರುವ ಐಆರ್ಬಿ ಕಂಪನಿ ಸ್ಪೋಟಕಗಳನ್ನು ಬಳಸುತ್ತಿದೆ. ಆದರೆ ಈ ಸ್ಪೋಟಕವೇ ಇದೀಗ ಕುಮಟಾ ತಾಲ್ಲೂಕಿನ ತಂಡ್ರಕುಳಿ ಗ್ರಾಮದಲ್ಲಿರುವ ಜನರ ನಿದ್ದೆ ಗೆಡಿಸುವಂತೆ ಮಾಡಿದೆ.
ನದಿ ಅಂಚಿನ ತಗ್ಗು ಪ್ರದೇಶದಲ್ಲಿರುವ ಈ ತಂಡ್ರಕುಳಿ ಗ್ರಾಮದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಆದರೆ ಹೆದ್ದಾರಿಗೆ ಗುಡ್ಡಗಳು ಅಡ್ಡಿಯಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿ ಗುಡ್ಡ ತೆರವಿನ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಗ್ರಾಮದಲ್ಲಿ ಅರೆಬರೆ ತೆರವುಗೊಳಿಸಿದ ಗುಡ್ಡ ಕುಸಿದು ಕೆಳಭಾಗದ ಮನೆಯಲ್ಲಿ ಮೂವರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಇದಕ್ಕೆ ಕಂಪನಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗಿತ್ತು.
ಕೊನೆಗೆ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಕುಸಿಯಬಹುದಾದ ಗುಡ್ಡಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ ಭಾರಿ ಪ್ರಮಾಣದ ಸ್ಪೋಟಕಗಳನ್ನು ಬಳಸದಂತೆ ಸೂಚನೆಯನ್ನು ನೀಡಿತ್ತು. ಆದರೆ ಕೆಲ ತಿಂಗಳುಗಳು ನಿಯಮ ಪಾಲಿಸಿದ ಐಆರ್ಬಿ ಕಂಪನಿಯವರು ಮತ್ತೆ ಹಳೆ ಚಾಳಿಯನ್ನೆ ಮುಂದುವರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬಂಡೆಗಲ್ಲುಗಳನ್ನು ಸ್ಪೋಟಿಸಿದ ಕಾರಣ ಸಿಡಿದ ಕಲ್ಲುಗಳು, ಮನೆ, ಶಾಲೆಗಳ ಮೇಲೆ ಬಿದ್ದು ಹಾನಿಯಾಗಿದೆ. ಅದೃಷ್ಟವಸಾತ್ ಮನೆಯಲ್ಲಿದ್ದವರ ಮೈ ಮೇಲೆ ಬಿಳ್ಳುವುದು ಸ್ವಲ್ಪದರಲ್ಲಿಯೇ ತಪ್ಪಿದೆ. ಆದರೆ ಈ ಬಗ್ಗೆ ಕಂಪನಿಯವರು ಯಾವುದೇ ಮಾಹಿತಿ ನೀಡುವುದಿಲ್ಲ. ಕೇಳಿದರೆ ಜಿಲ್ಲಾಡಳಿತ ಪರವಾನಿಗೆ ಪಡೆದಿರುವುದಾಗಿ ತಿಳಿಸುತ್ತಾರೆ. ಗ್ರಾಮವನ್ನು ಈ ಹಿಂದೆ ಸ್ಥಳಾಂತರಿಸಿ ಕೊಡುವುದಾಗಿ ತಿಳಿಸಿದ್ದರು. ಅಲ್ಲದೆ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಬಗ್ಗೆ ಕೂಡ ತಿಳಿಸಿದ್ದರು. ಆದರೆ ಈವರೆಗೂ ಯಾವುದನ್ನು ಮಾಡಿಲ್ಲ ಎಂದು ಗ್ರಾಮದ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಲ್ಲುಗಳ ಸ್ಪೋಟದಿಂದ ಮತ್ತೆ ಗುಡ್ಡ ಬಿರುಕು ಬಿಡುತ್ತಿದ್ದು ಮಳೆಗಾಲದಲ್ಲಿ ಮತ್ತೆ ಗುಡ್ಡ ಗ್ರಾಮದ ಮನೆಗಳ ಮೇಲೆ ಕುಸಿದು ಬೀಳ್ಳುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ. ಇದಲ್ಲದೇ ಸ್ಪೋಟದಿಂದ ಗ್ರಾಮದ ಮನೆಗಳಲ್ಲಿ ಸಹ ಬಿರುಕು ಕಂಡಿದ್ದು ಇದೇ ರೀತಿ ಸ್ಪೋಟ ಮುಂದುವರೆಸಿದರೆ ಮುಂದೆ ದೊಡ್ಡ ಅನಾಹುತ ಆಗುವುದರಲ್ಲಿ ಅನುಮಾನವಿಲ್ಲ ಅನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವರಿ ಸಚಿವರ ಬಳಿ ಕೇಳಿದರೆ ಈಗಾಗಲೇ ಸ್ಪೋಟ ಮಾಡುವುದನ್ನು ನಿಲ್ಲಿಸಿದ್ದೇವೆ. ಮಳೆಗಾಲದಲ್ಲಿ ಗ್ರಾಮದ ಮೇಲೆ ಮತ್ತೆ ಗುಡ್ಡ ಕುಸಿದು ಅನಾಹುತ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯ ಗ್ರಾಮದ ಪಕ್ಕದಲ್ಲಿರುವ ಗುಡ್ಡದ ಗೋಡೆಗಳಿಗೆ ಕುಸಿಯದಂತೆ ಸಿಮೆಂಟ್ ಹಾಕುವ ಕೆಲಸ ಮಾಡಲಾಗಿದೆ. ಆದರೆ ಒಂದು ಮಳೆಗೆ ಕೆಲವೆಡೆ ಅರ್ಧ ಸಿಮೆಂಟ್ ಕಿತ್ತು ಬಂದಿದ್ದು ಇದೀಗ ಸ್ಪೋಟದಿಂದ ಇನ್ನಷ್ಟು ಸಿಮೆಂಟ್ ಕಿತ್ತು ಬೀಳುತ್ತಿದೆ. ಇನ್ನು ಸ್ಪೋಟದಿಂದ ಗುಡ್ಡದಲ್ಲೂ ಬಿರುಕು ಬಿಟ್ಟಿದ್ದು ಎರಡು ಮೂರು ದಿನ ನಿರಂತರವಾಗಿ ಮಳೆ ಬಂದರೆ ಗುಡ್ಡ ಕುಸಿಯುವುದರಲ್ಲಿ ಅನುಮಾನವಿಲ್ಲ ಅನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಒಟ್ಟಿನಲ್ಲಿ ಒಮ್ಮೆ ಗುಡ್ಡ ಕುಸಿತದಿಂದ ಅಪಾರ ಹಾನಿ ಸಂಭವಿಸಿದ್ದ ಗ್ರಾಮದಲ್ಲಿ ಇದೀಗ ಅವೈಜ್ಞಾನಿಕವಾಗಿ ಮಾಡುತ್ತಿರುವ ಸ್ಪೋಟದಿಂದ ಮತ್ತೆ ತಮ್ಮ ಗ್ರಾಮದಲ್ಲಿ ಅನಾಹುತ ಆಗಬಹುದು ಎನ್ನುವ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ.

ಬೈಟ್ ೧ ರಮೇಶ್
ಬೈಟ್ ೨ ರಮೇಶ್ ( ಟೀಸರ್ಟ್ ಹಾಕಿದವರು)
ಬೈಟ್ ೩ ಆರ್. ವಿ. ದೇಶಪಾಂಡೆ Body:ಕConclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.