ETV Bharat / state

ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ.. ಪ್ರವಾಸಿಗರಿಗೆ ಮೂಲಸೌಕರ್ಯ ನೀಡಲು ಮನವಿ - ಭಟ್ಕಳ ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆಗೆ ಮೂಲಭೂತ ಸೌಕರ್ಯಕ್ಕೆ ಮನವಿ

ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆಯ ಪ್ರಯುಕ್ತ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ಕುರಿತು ಸಾರ್ವಜನಿಕರು ಮಾವಳ್ಳಿ-1 ಪಂಚಾಯತ್​ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಸಲ್ಲಿಸಿದರು.

Mahatobara Sri Murdeshwara Fair
ಪಂಚಾಯತ್​ ಅಧ್ಯಕ್ಷರಿಗೆ ಹಾಗೂ ಪಿಡಿಓ ಅಧಿಕಾರಿಗೆ ಮನವಿ
author img

By

Published : Dec 18, 2019, 11:00 PM IST

ಭಟ್ಕಳ: ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ (ರಥೋತ್ಸವ) ನಡೆಯಲಿದೆ. ಜಾತ್ರೆ ಪ್ರಯುಕ್ತ ಪ್ರವಾಸಿಗರ ವಾಹನ ನಿಲ್ಲಿಸುವ ಜಾಗದಲ್ಲಿ ತಾತ್ಕಾಲಿಕ ಮೂಲಸೌಕರ್ಯ ಒದಗಿಸುವ ಕುರಿತು ಸಾರ್ವಜನಿಕರು ಮಾವಳ್ಳಿ-1 ಪಂಚಾಯತ್​ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಸಲ್ಲಿಸಿದರು.

ವಿಶ್ವ ಪ್ರಸಿದ್ಧ ಪ್ರವಾಸಿಗರ ನೆಚ್ಚಿನ ಕ್ಷೇತ್ರ ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ ಪ್ರತಿ ವರ್ಷದಂತೆ ನಡೆಯಲಿದೆ. ಬರುವ ಜನವರಿ 20 ರಂದು ನಡೆಯುವ ಜಾತ್ರೆಯ ಪ್ರಯುಕ್ತ ಗ್ರಾಮ ಪಂಚಾಯತ್​ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಗ್ರಾಮ ಪಂಚಾಯತ್‌ಗೆ ಲಕ್ಷಾಂತರ ರೂ. ಆದಾಯ ಬರುತ್ತದೆ.

ಆದರೆ, ಈ ಹಿಂದೆಯೂ ಜಾತ್ರೆ ನಡೆದಾಗ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಯಾವುದೇ ತೆರನಾದ ತಾತ್ಕಾಲಿಕ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಈ ಬಾರಿ ಹಾಗೆ ಮಾಡದೇ ಪಾರ್ಕಿಂಗ್​ ಜಾಗದಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಿ ಜಾತ್ರೆಗೆ ಬರುವವರಿಗೆ ಅನೂಕೂಲ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಮನವಿಯನ್ನು ಮಾವಳ್ಳಿ-1 ಗ್ರಾಮ ಪಂಚಾಯತ್​ ಪಿಡಿಒ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ಹನುಮಂತ, ನಾಗರಾಜ ಪಟಗಾರ, ಲಕ್ಷ್ಮಣ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.

ಭಟ್ಕಳ: ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ (ರಥೋತ್ಸವ) ನಡೆಯಲಿದೆ. ಜಾತ್ರೆ ಪ್ರಯುಕ್ತ ಪ್ರವಾಸಿಗರ ವಾಹನ ನಿಲ್ಲಿಸುವ ಜಾಗದಲ್ಲಿ ತಾತ್ಕಾಲಿಕ ಮೂಲಸೌಕರ್ಯ ಒದಗಿಸುವ ಕುರಿತು ಸಾರ್ವಜನಿಕರು ಮಾವಳ್ಳಿ-1 ಪಂಚಾಯತ್​ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಸಲ್ಲಿಸಿದರು.

ವಿಶ್ವ ಪ್ರಸಿದ್ಧ ಪ್ರವಾಸಿಗರ ನೆಚ್ಚಿನ ಕ್ಷೇತ್ರ ಮಹತೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ ಪ್ರತಿ ವರ್ಷದಂತೆ ನಡೆಯಲಿದೆ. ಬರುವ ಜನವರಿ 20 ರಂದು ನಡೆಯುವ ಜಾತ್ರೆಯ ಪ್ರಯುಕ್ತ ಗ್ರಾಮ ಪಂಚಾಯತ್​ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಗ್ರಾಮ ಪಂಚಾಯತ್‌ಗೆ ಲಕ್ಷಾಂತರ ರೂ. ಆದಾಯ ಬರುತ್ತದೆ.

ಆದರೆ, ಈ ಹಿಂದೆಯೂ ಜಾತ್ರೆ ನಡೆದಾಗ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಯಾವುದೇ ತೆರನಾದ ತಾತ್ಕಾಲಿಕ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಈ ಬಾರಿ ಹಾಗೆ ಮಾಡದೇ ಪಾರ್ಕಿಂಗ್​ ಜಾಗದಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಿ ಜಾತ್ರೆಗೆ ಬರುವವರಿಗೆ ಅನೂಕೂಲ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಮನವಿಯನ್ನು ಮಾವಳ್ಳಿ-1 ಗ್ರಾಮ ಪಂಚಾಯತ್​ ಪಿಡಿಒ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ಹನುಮಂತ, ನಾಗರಾಜ ಪಟಗಾರ, ಲಕ್ಷ್ಮಣ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.

Intro:ಭಟ್ಕಳ: ಮಾತ್ಹೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ (ರಥೋತ್ಸವ) ನಡೆಯಲಿದ್ದು, ಜಾತ್ರೆಯ ಪ್ರಯುಕ್ತ ಪ್ರವಾಸಿಗರ ವಾಹನ ನಿಲ್ಲಿಸುವ ಜಾಗದಲ್ಲಿ ತಾತ್ಕಾಲಿಕ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಮಾವಳ್ಳಿ-1 ಮತ್ತು 2 ಪಂಚಾಯತ ವ್ಯಾಪ್ತಿಯ ಸಾರ್ವಜನಿಕರು ಮಾವಳ್ಳಿ-1 ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿಡಿಓ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದರು.Body:ವಿಶ್ವ ಪ್ರಸಿದ್ದ ಪ್ರವಾಸಿಗರ ಮೆಚ್ಚಿನ ಕ್ಷೇತ್ರ ಮಾತ್ಹೋಬಾರ ಶ್ರೀ ಮುರ್ಡೇಶ್ವರ ದೇವರ ಜಾತ್ರೆ(ರಥೋತ್ಸವ) ಪ್ರತಿ ವರ್ಷದಂತೆ ಇದೇ ಜನವರಿ 20ರಂದು ನಡೆಯಲಿದೆ. ಜಾತ್ರೆಯ ಪ್ರಯುಕ್ತ ಗ್ರಾಮ ಪಂಚಾಯತ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಗ್ರಾಮ ಪಂಚಾಯತಿಗೆ ಲಕ್ಷಾಂತರ ಆದಾಯ ಬರುತ್ತಿದ್ದರೂ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಯಾವುದೇ ತೇರನಾದ ತಾತ್ಕಾಲಿಕ ಮೂಲಭೂತ ಸೌಕರ್ಯಗಳನ್ನು (ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಶೌಚಾಲಯ) ಒದಗಿಸುತ್ತಿಲ್ಲ. ಕಳೆದ ವರ್ಷ ಕೂಡ ಪಾರ್ಕಿಂಗ ಜಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸಲ್ಲಿಸಿದ ಮನವಿಗೆ ಕಾಟಾಚಾರಕ್ಕೆ ಪಾರ್ಕಿಂಗ್ ಜಾಗದಲ್ಲಿ 2 ಎಲೋಜಿನ್ ಬಲ್ಬ(ಬೆಳಕಿನ ವ್ಯವಸ್ಥೆ) ಹಾಕಿ ಕೈ ತೊಳೆದುಕೊಂಡಿದ್ದರು. ಈ ಬಾರಿ ಹಾಗೇ ಮಾಡದೇ ಪಾರ್ಕಿಂಗ ಜಾಗದಲ್ಲಿ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರಿಗೆ ಮತ್ತು ಜಾತ್ರೆಗೆ ಬರುವಂತಹ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಮಾವಳ್ಳಿ-1 ಗ್ರಾಮ ಪಂಚಾಯತ ಪಿಡಿಓ ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಸಾರ್ವಜನಿಕರಾದ ಶ್ರೀಧರ ನಾಯ್ಕ, ಹನುಮಂತ, ನಾಗರಾಜ ಪಟಗಾರ, ಲಕ್ಷ್ಮಣ ನಾಯ್ಕ, ರಮೇಶ ನಾಯ್ಕ, ಅಣ್ಣಪ್ಪ ನಾಯ್ಕ, ಸಂತೋಷ ನಾಯ್ಕ, ದೇವೆಂದ್ರ ನಾಯ್ಕ ಸೇರಿದಂತೆ ಮುಂತಾದವರು ಇದ್ದರು. Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.