ETV Bharat / state

4 ತಿಂಗಳಿಂದ ವೇತನ ಪಾವತಿಸದ ಕಂಪನಿ... ಬೀದಿಗೆ ಬಂದ ನೌಕಾನೆಲೆ ಆಸ್ಪತ್ರೆಯ ಗುತ್ತಿಗೆ ನೌಕರರು - undefined

ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಕಾರವಾರ, ಅಂಕೋಲಾ ಭಾಗದ ಸಾಕಷ್ಟು ಕುಟುಂಬಗಳು ಮನೆ ಜಮೀನುಗಳನ್ನು ಕಳೆದುಕೊಂಡಿವೆ. ಈಗ ಹೊಟ್ಟೆಪಾಡಿಗಾಗಿ ಇಲ್ಲಿನ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡವರಿಗೆ ಗುತ್ತಿಗೆ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ. ಹೀಗಾಗಿ ಸದ್ಯ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.

ಬೀದಿಗೆ ಬಂದ ನೌಕಾನೆಲೆ ಹೊರಗುತ್ತಿಗೆ ಉದ್ಯೋಗಿಗಳು
author img

By

Published : Jun 17, 2019, 10:30 PM IST

ಕಾರವಾರ: ಅವರು ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ಆದರೆ, ಹೊಟ್ಟೆಪಾಡಿಗಾಗಿ ಇಲ್ಲಿನ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡವರಿಗೆ ಗುತ್ತಿಗೆ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ.

ಸದ್ಯ ಎಲ್ಲರೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಕಾರವಾರ, ಅಂಕೋಲಾ ಭಾಗದ ಸಾಕಷ್ಟು ಕುಟುಂಬಗಳು ಮನೆ ಜಮೀನುಗಳನ್ನು ಕಳೆದುಕೊಂಡಿವೆ. ಸರ್ಕಾರ ಇದಕ್ಕೆ ಕೆಲವರಿಗೆ ಪರಿಹಾರ ನೀಡಿದೆಯಾದರೂ, ಇನ್ನೂ ಕೂಡಾ ಕೆಲವರ ಪರಿಸ್ಥಿತಿ ಸುಧಾರಿಸಿಲ್ಲ. ಕೆಲಸಕ್ಕಾಗಿ ಊರೂರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಹೀಗೆ ಮನೆ-ಜಮೀನುಗಳನ್ನು ಕಳೆದುಕೊಂಡಿದ್ದ ಕೆಲ ನಿರಾಶ್ರಿತ ಕುಟುಂಬದ ಯುವಕರು, ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಟೆಂಡರ್ ಪಡೆದಿದ್ದ ಕೇರಳ ಮೂಲದ ಖಾಸಗಿ ಕಂಪನಿ, ಮೊದ-ಮೊದಲು ವೇತನ ನೀಡಿತ್ತಾದರೂ, ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲವಂತೆ. ಅಲ್ಲದೆ ಪಿಎಫ್, ಇಎಸ್​ಐ ಸೇರಿದಂತೆ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದೀಗ ಇಲ್ಲಿ ದುಡಿಯುತ್ತಿರುವ ನಾಲ್ವರು ಮಹಿಳೆಯರು ಸೇರಿದಂತೆ 24 ಕೆಲಸಗಾರರಿಗೆ ಕಂಪನಿಯವರು ಟೆಂಡರ್ ಬಿಡುವುದಾಗಿ ತಿಳಿಸಿದ್ದು, ಕೆಲಸ ಮಾಡುವುದಾದರೆ ಮಾಡಿ, ಇಲ್ಲ ಅಂದ್ರೆ ಬಿಡಿ ಎನ್ನುತ್ತಿದ್ದಾರೆ. ಆದರೆ ಇದನ್ನೇ ನಂಬಿ ಬದುಕುತ್ತಿದ್ದ ತಮಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಕಂಪನಿ ಬಾಕಿ ಹಣ ಪಾವತಿಸಬೇಕು ಎಂದು ಹೊರಗುತ್ತಿಗೆ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ.

ಬೀದಿಗೆ ಬಂದ ನೌಕಾನೆಲೆ ಹೊರಗುತ್ತಿಗೆ ಉದ್ಯೋಗಿಗಳು

ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ಕೆಲಸ ಪೂರೈಸಲು ಗುತ್ತಿಗೆ ಪಡೆದಿದ್ದ 24 ಜನರ ಹೊರಗುತ್ತಿಗೆ ವೇತನ ನೀಡಿಲ್ಲ. ಕಾರಣ ಕೇಳಿದರೆ ಪತಂಜಲಿಯಿಂದ ವೇತನ ಪಾವತಿ ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಹಣ ನೀಡಿಲ್ಲವೆಂದು ಗುತ್ತಿಗೆ ಪಡೆದ ಕಂಪನಿ ಕೆಲಸಗಾರರಿಗೆ ವೇತನ ನೀಡದೇ ಇರುವುದು ಕಾನೂನಿನ ಉಲ್ಲಂಘನೆ. ತಿಂಗಳ ಮೊದಲ ವಾರ ಕಡ್ಡಾಯವಾಗಿ ಸಂಬಳ ಪಾವತಿಸಬೇಕು ಅನ್ನೋದು ಗುತ್ತಿಗೆ ನೌಕರರು ಆಗ್ರಹಿಸಿದ್ದಾರೆ.

ಈಗಾಗಲೇ ಕಾರವಾರ ಡಿವೈಎಸ್ಪಿ ಸಂಬಂಧಪಟ್ಟ ಕಂಪನಿ ಜತೆ ಮಾತನಾಡಿ, ವೇತನ ಪಾವತಿಸಲು ಗಡುವು ನೀಡಿದ್ದಾರೆ. ಒಂದೊಮ್ಮೆ ಆಗಲೂ ಪಾವತಿಸದೇ ಇದ್ದಲ್ಲಿ ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ದುಡಿದು ಕುಟುಂಬವನ್ನು ಸಾಕಬೇಕಿದ್ದವರು ಇದೀಗ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಕಂಪನಿ ಕೂಡಲೇ ವೇತನ ಪಾವತಿಸಿ ಅವರಿಗೆ ಬದುಕಲು ಅವಕಾಶ ಮಾಡಿಕೊಡಬೇಕಿದೆ.

ಕಾರವಾರ: ಅವರು ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ಆದರೆ, ಹೊಟ್ಟೆಪಾಡಿಗಾಗಿ ಇಲ್ಲಿನ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡವರಿಗೆ ಗುತ್ತಿಗೆ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ.

ಸದ್ಯ ಎಲ್ಲರೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಕಾರವಾರ, ಅಂಕೋಲಾ ಭಾಗದ ಸಾಕಷ್ಟು ಕುಟುಂಬಗಳು ಮನೆ ಜಮೀನುಗಳನ್ನು ಕಳೆದುಕೊಂಡಿವೆ. ಸರ್ಕಾರ ಇದಕ್ಕೆ ಕೆಲವರಿಗೆ ಪರಿಹಾರ ನೀಡಿದೆಯಾದರೂ, ಇನ್ನೂ ಕೂಡಾ ಕೆಲವರ ಪರಿಸ್ಥಿತಿ ಸುಧಾರಿಸಿಲ್ಲ. ಕೆಲಸಕ್ಕಾಗಿ ಊರೂರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಹೀಗೆ ಮನೆ-ಜಮೀನುಗಳನ್ನು ಕಳೆದುಕೊಂಡಿದ್ದ ಕೆಲ ನಿರಾಶ್ರಿತ ಕುಟುಂಬದ ಯುವಕರು, ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಟೆಂಡರ್ ಪಡೆದಿದ್ದ ಕೇರಳ ಮೂಲದ ಖಾಸಗಿ ಕಂಪನಿ, ಮೊದ-ಮೊದಲು ವೇತನ ನೀಡಿತ್ತಾದರೂ, ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲವಂತೆ. ಅಲ್ಲದೆ ಪಿಎಫ್, ಇಎಸ್​ಐ ಸೇರಿದಂತೆ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದೀಗ ಇಲ್ಲಿ ದುಡಿಯುತ್ತಿರುವ ನಾಲ್ವರು ಮಹಿಳೆಯರು ಸೇರಿದಂತೆ 24 ಕೆಲಸಗಾರರಿಗೆ ಕಂಪನಿಯವರು ಟೆಂಡರ್ ಬಿಡುವುದಾಗಿ ತಿಳಿಸಿದ್ದು, ಕೆಲಸ ಮಾಡುವುದಾದರೆ ಮಾಡಿ, ಇಲ್ಲ ಅಂದ್ರೆ ಬಿಡಿ ಎನ್ನುತ್ತಿದ್ದಾರೆ. ಆದರೆ ಇದನ್ನೇ ನಂಬಿ ಬದುಕುತ್ತಿದ್ದ ತಮಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಕಂಪನಿ ಬಾಕಿ ಹಣ ಪಾವತಿಸಬೇಕು ಎಂದು ಹೊರಗುತ್ತಿಗೆ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ.

ಬೀದಿಗೆ ಬಂದ ನೌಕಾನೆಲೆ ಹೊರಗುತ್ತಿಗೆ ಉದ್ಯೋಗಿಗಳು

ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ಕೆಲಸ ಪೂರೈಸಲು ಗುತ್ತಿಗೆ ಪಡೆದಿದ್ದ 24 ಜನರ ಹೊರಗುತ್ತಿಗೆ ವೇತನ ನೀಡಿಲ್ಲ. ಕಾರಣ ಕೇಳಿದರೆ ಪತಂಜಲಿಯಿಂದ ವೇತನ ಪಾವತಿ ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಹಣ ನೀಡಿಲ್ಲವೆಂದು ಗುತ್ತಿಗೆ ಪಡೆದ ಕಂಪನಿ ಕೆಲಸಗಾರರಿಗೆ ವೇತನ ನೀಡದೇ ಇರುವುದು ಕಾನೂನಿನ ಉಲ್ಲಂಘನೆ. ತಿಂಗಳ ಮೊದಲ ವಾರ ಕಡ್ಡಾಯವಾಗಿ ಸಂಬಳ ಪಾವತಿಸಬೇಕು ಅನ್ನೋದು ಗುತ್ತಿಗೆ ನೌಕರರು ಆಗ್ರಹಿಸಿದ್ದಾರೆ.

ಈಗಾಗಲೇ ಕಾರವಾರ ಡಿವೈಎಸ್ಪಿ ಸಂಬಂಧಪಟ್ಟ ಕಂಪನಿ ಜತೆ ಮಾತನಾಡಿ, ವೇತನ ಪಾವತಿಸಲು ಗಡುವು ನೀಡಿದ್ದಾರೆ. ಒಂದೊಮ್ಮೆ ಆಗಲೂ ಪಾವತಿಸದೇ ಇದ್ದಲ್ಲಿ ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ದುಡಿದು ಕುಟುಂಬವನ್ನು ಸಾಕಬೇಕಿದ್ದವರು ಇದೀಗ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಕಂಪನಿ ಕೂಡಲೇ ವೇತನ ಪಾವತಿಸಿ ಅವರಿಗೆ ಬದುಕಲು ಅವಕಾಶ ಮಾಡಿಕೊಡಬೇಕಿದೆ.

Intro:೪ ತಿಂಗಳಿಂದ ವೇತನ ಪಾವತಿಸದ ಕಂಪನಿ...ಬೀದಿಗೆ ಬಂದ ನೌಕಾನೆಲೆ ಹೊರಗುತ್ತಿಗೆ ಉದ್ಯೋಗಿಗಳು
ಕಾರವಾರ: ಅವರು ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ಆದರೆ ಹೊಟ್ಟೆ ಪಾಡಿಗಾಗಿ ಇಲ್ಲಿನ ಐಎನ್ಎಸ್ ಪಂತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡವರಿಗೆ ಗುತ್ತಿಗೆ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡದ ಶತಾಯಿಸುತ್ತಿದ್ದು, ಇದೀಗ ಎಲ್ಲರೂ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ದೇಶದ ಪ್ರತಿಷ್ಠಿತ ಐಎನ್ಎಸ್ ಕದಂಬ ನೌಕಾನೆಲೆಗಾಗಿ ಕಾರವಾರ, ಅಂಕೋಲಾ ಭಾಗದ ಸಾಕಷ್ಟು ಕುಟುಂಬಗಳು ಮನೆ ಜಮೀನುಗಳನ್ನು ಕಳೆದುಕೊಂಡಿವೆ. ಸರ್ಕಾರ ಇದಕ್ಕೆ ಕೆಲವರಿಗೆ ಪರಿಹಾರ ನೀಡಿದೆಯಾದರೂ ಇನ್ನು ಕೂಡ ಕೆಲವರ ಪರಿಸ್ಥಿತಿ ಸುಧಾರಿಸಿಕೊಂಡಿಲ್ಲ. ಕೆಲಸಕ್ಕಾಗಿ ಊರೂರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಹೀಗೆ ಮನೆ ಜಮೀನುಗಳನ್ನು ಕಳೆದುಕೊಂಡಿದ್ದ ಕೆಲ ನಿರಾಶ್ರಿತ ಕುಟುಂಬದ ಯುವಕರು ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಹೊರಗುತ್ತಿ ಆಧಾರ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಟೆಂಡರ್ ಪಡೆದಿದ್ದ ಕೇರಳ ಮೂಲದ ಆರ್ಮರ್ ಅಡ್ಮಿನ್ ಕಂಪನಿ ಮೊದ ಮೊದಲು ವೇತನ ನೀಡಿತ್ತಾದರೂ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಅಲ್ಲದೆ ಪಿಎಫ್ ಇಎಸ್ ಐ ಸೇರಿದಂತೆ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದೀಗ ಇಲ್ಲಿ ದುಡಿಯುತ್ತಿರುವ ೪ ಮಹಿಳೆಯರು ಸೇರಿ ೨೪ ಕೆಲಸಗಾರರಿಗೆ ಕಂಪನಿಯವರು ಟೆಂಡರ್ ಬಿಡುವುದಾಗಿ ತಿಳಿಸಿದ್ದು, ಕೆಲಸ ಮಾಡುವುದಾದರೇ ಮಾಡಿ ಇಲ್ಲ ಅಂದ್ರೆ ಬೀಡಿ ಎನ್ನುತ್ತಿದ್ದಾರೆ. ಆದರೆ ಇದನ್ನೆ ನಂಬಿ ಬದುಕುತ್ತಿದ್ದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಕಂಪನಿ ಬಾಕಿ ಹಣ ಪಾವತಿಸಬೇಕು ಎಂದು ಹೊರಗುತ್ತಿಗೆ ಉದ್ಯೋಗಿಯಾಗಿರುವ ಅಜೀತ್ ನಾಯ್ಕ ಒತ್ತಾಯಿಸಿದರು.
ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ಕೆಲಸ ಪೂರೈಸಲು ಗುತ್ತಿಗೆ ಪಡೆದಿದ್ದ ೨೪ ಹೊರಗುತ್ತಿಗೆ ವೇತನ ನೀಡಿಲ್ಲ. ಕಾರಣ ಕೇಳಿದರೇ ಪತಂಜಲಿಯಿಂದ ವೇತನ ಪಾವತಿ ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಹಣ ನೀಡಿಲ್ಲ ಎಂದು ಗುತ್ತಿಗೆ ಪಡೆದ ಕಂಪನಿ ಕೆಲಸಗಾರರಿಗೆ ವೇತನ ನೀಡದೇ ಇರುವುದು ಕಾನೂನಿನ ಉಲ್ಲಂಘಟನೆ. ತಿಂಗಳ ಮೊದಲ ವಾರ ಕಡ್ಡಾಯವಾಗಿ ಪಾವತಿಸಬೇಕು. ಆದರೆ ಇದೀಗ ಕಂಪನಿ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಬಡವರಾದ ಕೆಲವರು ತಾಯಿ ಮತ್ತು ಹೆಂಡತಿಯ ಮಂಗಳ ಸೂತ್ರವನ್ನು ಕೂಡ ಅಡು ಇಟ್ಟು ಹಣ ಪಡೆದಿದ್ದಾರೆ. ಈಗಾಗಲೇ ಕಾರವಾರ ಡಿವೈಎಸ್ಪಿ ಸಂಬಂಧಪಟ್ಟ ಕಂಪನಿ ಜತೆ ಮಾತನಾಡಿ ವೇತನ ಪಾವತಿಸಲು ಗಡವು ನೀಡಿದ್ದು, ಒಂದೊಮ್ಮೆ ಆಗಲೂ ಪಾವತಿಸದೇ ಇದ್ದಲ್ಲಿ ಈ ಬಗ್ಗೆ ಪೊಲೀಸ್ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ದುಡಿದು ಕುಟುಂಬವನ್ನು ಸಾಕಬೇಕಿದ್ದವರು ಇದೀಗ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಕಂಪನಿ ಕೂಡಲೇ ವೇತನ ಪಾವತಿಸಿ ಬದುಕಲು ಅವಕಾಶಮಾಡಿಕೊಡಬೇಕಿದೆ.


Body:ಕ


Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.