ETV Bharat / state

ಶಿರಸಿ ಮೂಲದ ವ್ಯಕ್ತಿ, ರಾಜಸ್ತಾನದಲ್ಲಿ  ವಂಚನೆ, ಸಿಕ್ಕಿಬಿದ್ದಿದ್ದು ಪುಣೆಯಲ್ಲಿ! - sirasi person arrested in pune

ಶಿರಸಿ ಮೂಲದ ವ್ಯಕ್ತಿಯೊಬ್ಬ ಬೇರೊಂದು ರಾಜ್ಯದಲ್ಲಿ ರಿಯಲ್​ ಎಸ್ಟೇಟ್​​ನಲ್ಲಿ ತೊಡಗಿ, ಅಲ್ಲಿನ ಜನರಿಗೆ ಮೋಸ ಮಾಡಿದ್ದಾನೆ ಎಂಬ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಶಿರಸಿ ಮೂಲದ ವ್ಯಕ್ತಿ
ಶಿರಸಿ ಮೂಲದ ವ್ಯಕ್ತಿ
author img

By

Published : Jan 24, 2020, 6:51 PM IST

ಶಿರಸಿ : ನಗರದ ವ್ಯಕ್ತಿಯೊಬ್ಬ ರಾಜಸ್ಥಾನದಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ.

ಶಿರಸಿಯ ಯಾಸರ್ ನವಾಜ್ ಕಾಗಲಕರ್ ಬಂಧಿತ ಆರೋಪಿ. ಈತ ರಾಜಸ್ಥಾನದ ವ್ಯಕ್ತಿಯೋರ್ವನಿಗೆ ಉತ್ತಮವಾದ ನಿವೇಶನ ಕೊಡಿಸುವುದಾಗಿ ಹೇಳಿ ಆತನಿಂದ 13 ಲಕ್ಷ ರೂ. ಪಡೆದು, ನಿವೇಶವನವನ್ನೂ ನೀಡದೇ ಹಣವನ್ನೂ ಕೊಡದೇ ವಂಚಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಈ ಕುರಿತು ರಾಜಸ್ಥಾನದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ರಾಜಸ್ಥಾನದ ಪೊಲೀಸರು, ಯಾಸರ್ ಪುಣೆಯ ತಾಜ್ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಯಾಸರ್​ ವಿರುದ್ಧ ಶಿರಸಿ ಸೇರಿದಂತೆ ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯದಲ್ಲೂ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಶಿರಸಿಯಲ್ಲಿಯೂ ತನಿಖೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಶಿರಸಿ : ನಗರದ ವ್ಯಕ್ತಿಯೊಬ್ಬ ರಾಜಸ್ಥಾನದಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ.

ಶಿರಸಿಯ ಯಾಸರ್ ನವಾಜ್ ಕಾಗಲಕರ್ ಬಂಧಿತ ಆರೋಪಿ. ಈತ ರಾಜಸ್ಥಾನದ ವ್ಯಕ್ತಿಯೋರ್ವನಿಗೆ ಉತ್ತಮವಾದ ನಿವೇಶನ ಕೊಡಿಸುವುದಾಗಿ ಹೇಳಿ ಆತನಿಂದ 13 ಲಕ್ಷ ರೂ. ಪಡೆದು, ನಿವೇಶವನವನ್ನೂ ನೀಡದೇ ಹಣವನ್ನೂ ಕೊಡದೇ ವಂಚಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಈ ಕುರಿತು ರಾಜಸ್ಥಾನದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ರಾಜಸ್ಥಾನದ ಪೊಲೀಸರು, ಯಾಸರ್ ಪುಣೆಯ ತಾಜ್ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಯಾಸರ್​ ವಿರುದ್ಧ ಶಿರಸಿ ಸೇರಿದಂತೆ ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯದಲ್ಲೂ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಶಿರಸಿಯಲ್ಲಿಯೂ ತನಿಖೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Intro:
ಶಿರಸಿ :
ಶಿರಸಿ ನಗರದ ವ್ಯಕ್ತಿಯೋರ್ವನನ್ನು ದೂರದ ರಾಜಸ್ಥಾನದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಪೂಣೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ರಾಜಸ್ಥಾನದ ವ್ಯಕ್ತಿಯೋರ್ವನಿಗೆ ಉತ್ತಮವಾದ ಜಾಗ ನೀಡುತ್ತೇನೆ ಎಂದು ಆತನಿಂದ 13 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ನಂತರ ಆತನಿಗೆ ಜಾಗವನ್ನು ನೀಡದೇ ಅತ್ತ ಹಣವನ್ನು ನೀಡದೇ ಮೋಸ ಮಾಡಿದ್ದ ಶಿರಸಿಯ ಯಾಸರ್ ನವಾಜ್ ಕಾಗಲಕರ್ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ಈ ಕುರಿತು ರಾಜಸ್ಥಾನದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನ ಹಿಂದೆ ಬಿದ್ದ ರಾಜಸ್ಥಾನದ ಪೊಲೀಸರು ಆರೋಪಿ ಯಾಸರ್‍ನನ್ನು ಪೂಣಾದ ತಾಜ್ ಹೊಟೇಲ್‍ನಲ್ಲಿ ವಾಸ್ತವ್ಯ ಮಾಡಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Body:ಆರೋಪಿ ಯಾಸರ ವಿರುದ್ಧ ಶಿರಸಿ ಸೇರಿದಂತೆ ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯದಲ್ಲೂ ಮೋಸದ ಪ್ರಕರಣಗಳು ಹಲಾವರು ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಈ ಕುರಿತು ಶಿರಸಿಯಲ್ಲಿಯೂ ತನಿಖೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
..........
ಸಂದೇಶ ಭಟ್ ಶಿರಸಿ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.