ETV Bharat / state

ಹೊನ್ನಾವರದಲ್ಲಿ ಗಾಳಿ ಸಹಿತ ಭಾರಿ ಮಳೆ: ದೋಣಿ ಮಗುಚಿ ಪತ್ನಿ ಸಾವು, ಪತಿ ಪಾರು

author img

By

Published : Jul 24, 2021, 8:01 AM IST

ಉತ್ತರಕನ್ನಡದದಲ್ಲಿ ಕಳೆದೊಂದು ವಾರದಿಂದ ಬಿಟ್ಟೂಬಿಡದೆ ಮಳೆ ಸುರಿಯುತ್ತಿದ್ದು, ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿದೆ. ಈ ವೇಳೆ ಪತ್ನಿ ಮೃತಪಟ್ಟಿದ್ದು, ಪತಿ ಈಜಿ ದಡ ಸೇರಿದ್ದಾನೆ.

ದೋಣಿ ಮಗುಚಿ ಪತ್ನಿ ಸಾವು
ದೋಣಿ ಮಗುಚಿ ಪತ್ನಿ ಸಾವು

ಕಾರವಾರ: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಉತ್ತರ ಕನ್ನಡ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಪತ್ನಿ ಮೃತಪಟ್ಟಿದ್ದು, ಪತಿ ಈಜಿ ದಡ ಸೇರಿರುವ ಘಟನೆ ಹೊನ್ನಾವರ ತಾಲೂಕಿನ ಮೊಳ್ಕೋಡ ಗ್ರಾಮದ ಶರಾವತಿ ನದಿಯಲ್ಲಿ ನಡೆದಿದೆ.

ಮೊಳ್ಕೋಡ ಗ್ರಾಮದ ಮಾದೇವಿ ಸುಬ್ರಾಯ ಅಂಬಿಗ (46) ಮೃತ ಮಹಿಳೆಯಾಗಿದ್ದಾಳೆ. ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ಪತಿ ಸುಬ್ರಾಯ ಅಂಬಿಗನ ಜೊತೆ ತೆರಳಿದ್ದಾಗ ಭಾರಿ ಗಾಳಿ ಸಹಿತ ಮಳೆಗೆ ದೋಣಿ ಮಗುಚಿ ಮಹಿಳೆ ನೀರು ಪಾಲಾಗಿದ್ದಳು. ಈ ವೇಳೆ ಪತ್ನಿಯ ರಕ್ಷಣೆಗೆ ಪತಿ ಯತ್ನಿಸಿದನಾದರೂ ನೀರಿನ ರಭಸದ ಹರಿವಿನಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸುಬ್ರಾಯ ಈಜಿ ದಡ ಸೇರಿದ್ದ.

ಇದನ್ನೂ ಓದಿ: ಚುರುಕು ಪಡೆದ ಮುಂಗಾರು: ಕೆಆರ್​ಎಸ್​​​ನಲ್ಲಿ 104.38 ಅಡಿ ನೀರು ಸಂಗ್ರಹ

ಕರಾವಳಿ ಕಾವಲು ಪಡೆ ಸಿಪಿಐ ಶ್ರೀಧರ್​ ನೇತೃತ್ವದ ತಂಡ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಮಾದೇವಿ ಮೃತದೇಹ ಹೊರ ತೆಗೆದಿದ್ದಾರೆ. ಮೃತದೇಹವನ್ನು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರವಾರ: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಉತ್ತರ ಕನ್ನಡ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಪತ್ನಿ ಮೃತಪಟ್ಟಿದ್ದು, ಪತಿ ಈಜಿ ದಡ ಸೇರಿರುವ ಘಟನೆ ಹೊನ್ನಾವರ ತಾಲೂಕಿನ ಮೊಳ್ಕೋಡ ಗ್ರಾಮದ ಶರಾವತಿ ನದಿಯಲ್ಲಿ ನಡೆದಿದೆ.

ಮೊಳ್ಕೋಡ ಗ್ರಾಮದ ಮಾದೇವಿ ಸುಬ್ರಾಯ ಅಂಬಿಗ (46) ಮೃತ ಮಹಿಳೆಯಾಗಿದ್ದಾಳೆ. ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ಪತಿ ಸುಬ್ರಾಯ ಅಂಬಿಗನ ಜೊತೆ ತೆರಳಿದ್ದಾಗ ಭಾರಿ ಗಾಳಿ ಸಹಿತ ಮಳೆಗೆ ದೋಣಿ ಮಗುಚಿ ಮಹಿಳೆ ನೀರು ಪಾಲಾಗಿದ್ದಳು. ಈ ವೇಳೆ ಪತ್ನಿಯ ರಕ್ಷಣೆಗೆ ಪತಿ ಯತ್ನಿಸಿದನಾದರೂ ನೀರಿನ ರಭಸದ ಹರಿವಿನಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸುಬ್ರಾಯ ಈಜಿ ದಡ ಸೇರಿದ್ದ.

ಇದನ್ನೂ ಓದಿ: ಚುರುಕು ಪಡೆದ ಮುಂಗಾರು: ಕೆಆರ್​ಎಸ್​​​ನಲ್ಲಿ 104.38 ಅಡಿ ನೀರು ಸಂಗ್ರಹ

ಕರಾವಳಿ ಕಾವಲು ಪಡೆ ಸಿಪಿಐ ಶ್ರೀಧರ್​ ನೇತೃತ್ವದ ತಂಡ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಮಾದೇವಿ ಮೃತದೇಹ ಹೊರ ತೆಗೆದಿದ್ದಾರೆ. ಮೃತದೇಹವನ್ನು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.