ETV Bharat / state

ಶಿರಸಿಯಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

author img

By

Published : Sep 26, 2019, 1:40 AM IST

ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಲೋಕಾಯುಕ್ತ ಎಸ್​​ಪಿ ಅರವಿಂದ ಕಲಗುಚ್ಚಿ ಅವರು ನಗರದಲ್ಲಿ ಏರ್ಪಡಿಸಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.

Public Involvement Program

ಶಿರಸಿ: ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಿತು.

ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪರ ಲೋಕಾಯುಕ್ತ ಎಸ್​​ಪಿ ಅರವಿಂದ ಕಲಗುಚ್ಚಿ ಮಾತನಾಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸೋದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳು ಸಾರ್ವಜನಿಕರಿಗೆ ತಲುಪಿಸುವ ಹಂತದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಾರ್ವಜನಿಕರಿಂದ ಸುಮಾರು ಏಳು ಅರ್ಜಿಗಳನ್ನ ಸ್ವೀಕರಿಸಿದ್ದೇವೆ. ಅದರಲ್ಲಿ ಆರು ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಯದ ಮಿತಿಯಲ್ಲಿ ಪರಿಹರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಅರ್ಜಿಗಳನ್ನು ಲೋಕಾಯುಕ್ತರ ಮಟ್ಟದಲ್ಲಿ ಪರಿಹರಿಸಿ ಕೊಡಬೇಕಾಗುತ್ತದೆ ಎಂದರು.

ಲೋಕಾಯುಕ್ತದ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳಲ್ಲದೆ, ಸರ್ಕಾರದಿಂದ ಗೌರವಧನ ಪಡೆಯುವ ಸಂಸ್ಥೆಗಳು ಬರುತ್ತವೆ. ಆದ್ದರಿಂದ ಸಾರ್ವಜನಿಕರಿಗೆ ಮೇಲೆ ತಿಳಿಸಿದ ಯಾವುದೇ ಮೂಲಗಳಿಂದ ತೊಂದರೆಯಾದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬಹುದಾಗಿದೆ. ಲೋಕಾಯುಕ್ತಕ್ಕೆ ಒಂದು ಸಾರಿ ದೂರು ನೀಡಿದ ಬಳಿಕ ಯಾವುದೇ ಕಾರಣಕ್ಕೂ ದೂರನ್ನು ಹಿಂಪಡೆಯುವುದು ಅಸಾಧ್ಯ ಎಂದರು.

ಶಿರಸಿ: ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಿತು.

ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪರ ಲೋಕಾಯುಕ್ತ ಎಸ್​​ಪಿ ಅರವಿಂದ ಕಲಗುಚ್ಚಿ ಮಾತನಾಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸೋದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳು ಸಾರ್ವಜನಿಕರಿಗೆ ತಲುಪಿಸುವ ಹಂತದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಾರ್ವಜನಿಕರಿಂದ ಸುಮಾರು ಏಳು ಅರ್ಜಿಗಳನ್ನ ಸ್ವೀಕರಿಸಿದ್ದೇವೆ. ಅದರಲ್ಲಿ ಆರು ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಯದ ಮಿತಿಯಲ್ಲಿ ಪರಿಹರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಅರ್ಜಿಗಳನ್ನು ಲೋಕಾಯುಕ್ತರ ಮಟ್ಟದಲ್ಲಿ ಪರಿಹರಿಸಿ ಕೊಡಬೇಕಾಗುತ್ತದೆ ಎಂದರು.

ಲೋಕಾಯುಕ್ತದ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳಲ್ಲದೆ, ಸರ್ಕಾರದಿಂದ ಗೌರವಧನ ಪಡೆಯುವ ಸಂಸ್ಥೆಗಳು ಬರುತ್ತವೆ. ಆದ್ದರಿಂದ ಸಾರ್ವಜನಿಕರಿಗೆ ಮೇಲೆ ತಿಳಿಸಿದ ಯಾವುದೇ ಮೂಲಗಳಿಂದ ತೊಂದರೆಯಾದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬಹುದಾಗಿದೆ. ಲೋಕಾಯುಕ್ತಕ್ಕೆ ಒಂದು ಸಾರಿ ದೂರು ನೀಡಿದ ಬಳಿಕ ಯಾವುದೇ ಕಾರಣಕ್ಕೂ ದೂರನ್ನು ಹಿಂಪಡೆಯುವುದು ಅಸಾಧ್ಯ ಎಂದರು.

Intro:ಶಿರಸಿ :
ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ
ಸಿದ್ದಾಪುರದಲ್ಲಿ ನಡೆಯಿತು.

Body:ಕಾರ್ಯಕ್ರಮದ ಬಳಿಕ ಮಾತನಾಡಿದ ಲೋಕಾಯುಕ್ತ ಅಪರ ಎಸ್.ಪಿ ಅರವಿಂದ ಕಲಗುಚ್ಚಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸೋದಕ್ಕೆ ಈ ಕಾರ್ಯಕ್ರಮ ಅಯೋಜಿಸಲಾಗಿದ್ದು, ಸರ್ಕಾರದಿಂದ ದೊರೆಯೋ ಸವಲತ್ತುಗಳು ಸಾರ್ವಜನಿಕರಿಗೆ ತಲುಪೋ ಹಂತದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸಾರ್ವಜನಿಕರಿಂದ ಇಲ್ಲಿಯೇ 7 ಅರ್ಜಿಗಳನ್ನ ಸ್ವೀಕರಿಸಿದ್ದೇವೆ. ಅದರಲ್ಲಿ 6 ಅರ್ಜಿಗಳನ್ನ ಅಧಿಕಾರಿಗಳು ತಮ್ಮ ಸಮಯದ ಮಿತಿಯಲ್ಲಿ ಪರಿಹರಿಸೋದಾಗಿ ಒಪ್ಪಿಕೊಂಡಿದ್ದಾರೆ. 1 ಅರ್ಜಿಯನ್ನ ಲೋಕಾಯುಕ್ತರ ಮಟ್ಟದಲ್ಲಿ ಪರಿಹರಿಸಿಕೊಡಬೇಕಾಗುತ್ತೆ. ಲೋಕಾಯುಕ್ತದ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳಲ್ಲದೆ, ಸರ್ಕಾರದಿಂದ ಗೌರವಧನ ಪಡೆಯೋ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಬರುತ್ತವೆ. ಆದ್ದರಿಂದ ಸಾರ್ವಜನಿಕರಿಗೆ ಮೇಲೆ ತಿಳಿಸಿದ ಯಾವುದೇ ಮೂಲಗಳಿಂದ ತೊಂದರೆಯಾದಲ್ಲಿ ಲೋಕಾಯುಕ್ತಕ್ಕೆ ದೂರನ್ನ ನೀಡಬಹುದಾಗಿದೆ. ಲೋಕಾಯುಕ್ತಕ್ಕೆ ಒಂದು ಸಾರಿ ದೂರನ್ನ ನೀಡಿದ ಬಳಿಕ ಯಾವುದೇ ಕಾರಣಕ್ಕೂ ದೂರನ್ನು ಹಿಂಪಡೆಯುವುದು ಅಸಾಧ್ಯ ಎಂದರು.

ಬೈಟ್ (೧) : ಅರವಿಂದ ಕಲಗುಚ್ಚಿ, ಲೋಕಾಯುಕ್ತ ಅಪರ ಎಸ್.ಪಿ
..........
ಸಂದೇಶ ಭಟ್ ಶಿರಸಿ‌. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.