ETV Bharat / state

ಪ್ಲಾಸ್ಟಿಕ್ ನಿಷೇಧ ನಮ್ಮ  ಮನೆಯಿಂದಲೇ ಪ್ರಾರಂಭವಾಗಬೇಕು: ಭಟ್ಕಳ ಉಪವಿಭಾಗಾಧಿಕಾರಿ

author img

By

Published : Sep 26, 2019, 3:32 PM IST

ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅ.2 ರಿಂದ 10ರ ವರೆಗೆ ನಡೆಯುವ 'ಸ್ವಚ್ಚತಾ ಹಿ ಸೇವಾ' ಕಾರ್ಯಾಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು: ಭಟ್ಕಳ ಉಪವಿಭಾಗಾಧಿಕಾರಿ

ಕಾರವಾರ: ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೇ ಆರಂಭಿಸಬೇಕು ನಂತರ ಅದರ ದುಷ್ಪರಿಣಾಮದ ಕುರಿತು ಇತರರಿಗೆ ತಿಳಿಸಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯಪಟ್ಟರು.

ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ 'ಸ್ವಚ್ಚತಾ ಹಿ ಸೇವಾ' ಕಾರ್ಯಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರದಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಸಮತೋಲನ ಕಾಯ್ದುಕೊಳ್ಳುವುದು ಮಹತ್ವವಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಷೇಧದ ಕುರಿತು ಪುರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾವೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್​ ಸಂಪೂರ್ಣ ನಿರ್ಮೂಲನೆ ಕುರಿತು ಹೆಜ್ಜೆ ಇಡಬೇಕಿದೆ ಎಂದರು.

ಈ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಅಕ್ಟೋಬರ್​ 2 ರಿಂದ 10ರವರೆಗೆ ವಿವಿಧ ಜಾಗೃತಿ ಸಭೆ, ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ ಸ್ವಚ್ಚತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಜೆಸಿಐನ ಅಧ್ಯಕ್ಷ ರಮೇಶ ಖಾರ್ವಿ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ಉತ್ತಮ. ಆದರೆ, ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದರು. ಅನಂತರ ಜೆಸಿಐನ ಇನ್ನೊರ್ವ ಪದಾಧಿಕಾರಿ ನಾಗರಾಜ ಶೇಟ್ ಮಾತನಾಡಿ, ಪ್ಲಾಸ್ಟಿಕ್​​​ ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದರೆ ಪ್ಲಾಸ್ಟಿಕ್​​​ ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಸರ್ಕಾರದ ಮಟ್ಟದಿಂದಲೇ ಕಾರ್ಯವಾಗಲಿ ಎಂದರು.

ಕಾರವಾರ: ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೇ ಆರಂಭಿಸಬೇಕು ನಂತರ ಅದರ ದುಷ್ಪರಿಣಾಮದ ಕುರಿತು ಇತರರಿಗೆ ತಿಳಿಸಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯಪಟ್ಟರು.

ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ 'ಸ್ವಚ್ಚತಾ ಹಿ ಸೇವಾ' ಕಾರ್ಯಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರದಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಸಮತೋಲನ ಕಾಯ್ದುಕೊಳ್ಳುವುದು ಮಹತ್ವವಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಷೇಧದ ಕುರಿತು ಪುರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾವೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್​ ಸಂಪೂರ್ಣ ನಿರ್ಮೂಲನೆ ಕುರಿತು ಹೆಜ್ಜೆ ಇಡಬೇಕಿದೆ ಎಂದರು.

ಈ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಅಕ್ಟೋಬರ್​ 2 ರಿಂದ 10ರವರೆಗೆ ವಿವಿಧ ಜಾಗೃತಿ ಸಭೆ, ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ ಸ್ವಚ್ಚತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಜೆಸಿಐನ ಅಧ್ಯಕ್ಷ ರಮೇಶ ಖಾರ್ವಿ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ಉತ್ತಮ. ಆದರೆ, ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದರು. ಅನಂತರ ಜೆಸಿಐನ ಇನ್ನೊರ್ವ ಪದಾಧಿಕಾರಿ ನಾಗರಾಜ ಶೇಟ್ ಮಾತನಾಡಿ, ಪ್ಲಾಸ್ಟಿಕ್​​​ ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದರೆ ಪ್ಲಾಸ್ಟಿಕ್​​​ ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಸರ್ಕಾರದ ಮಟ್ಟದಿಂದಲೇ ಕಾರ್ಯವಾಗಲಿ ಎಂದರು.

Intro:ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೆ ಆರಂಭಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಇಂದಿನಿಂದಲೆ ನಿಲ್ಲಿಸಿ ನಂತರ ಅದರ ಕುರಿತು ಇತರರಿಗೆ ತಿಳಿಸಬೇಖು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯ ಪಟ್ಟರು.Body:ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೆ ಆರಂಭಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಇಂದಿನಿಂದಲೆ ನಿಲ್ಲಿಸಿ ನಂತರ ಅದರ ಕುರಿತು ಇತರರಿಗೆ ತಿಳಿಸಬೇಖು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯ ಪಟ್ಟರು.

ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಚರಣೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸದಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಸಮತೋಲನ ಕಾಯ್ದುಕೊಳ್ಳುವದು ಮಹತ್ವವಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಷೇಧದ ಕುರಿತು ಈಗಾಗಲೆ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ನೀಷೇಧದ ಕುರಿತು ಹೆಜ್ಜೆ ಇಡಬೇಕಿದೆ. ಈ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಅಕ್ಟೋಬರ 2 ರಿಂದ ಅ. 10ರವರೆಗೆ ವಿವಿದ ಜಾಗೃತಿ ಸಭೆ, ಜಾಥಾಗಳನ್ನು ಹಮ್ಮಿಕೊಳ್ಳಲಾಗುವದು. ಹಾಗೆ ಸ್ವಚ್ಚತೆಯ ಕಾರ್ಯಕ್ರಮಗಳ ನಡೆಯಲಿದೆ. ಪ್ಲಾಸ್ಟಿಕ ನಿಷೇಧಕ್ಕೆ ಮೂಹುರ್ತ ನೋಡುವ ಅಗತ್ಯವಿಲ್ಲ. ಒಳ್ಳೆಯ ಕೆಲಸಗಳು ಇಂದಿನಿಂದಲೆ ಆರಂಭವಾಗಲಿ. ನಾವು ಬೇರೆಯವರಿಗೆ ಉಪದೇಶ ನೀಡುವ ಮುನ್ನ ನಾವು ಮೊದಲು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸೋಣ. ಇಲ್ಲಿರುವ ಅಧಿಕಾರಿಗಳು, ಸಂಘ ಸಂಸ್ಥೆಯ ಪಧಾಧಿಕಾರಿಗಳು ಮೊದಲು ಈ ಕುರಿತು ಪಣ ತೋದಬೇಕು ಎಂದರು. ಜೆಸಿಐನ ಅಧ್ಯಕ್ಷ ರಮೇಶ ಖಾರ್ವಿ ಮಾತನಾಡಿ ಪ್ಲಾಸ್ಟಿಕ್ ನಿಷೇಧ ಉತ್ತಮ ಆದರೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದರು. ಜೆಸಿಐನ ಇನ್ನೊರ್ವ ಪಧಾಧಿಕಾರಿ ನಾಗರಾಜ ಶೇಟ್ ಮಾತನಾಡಿ ಪ್ಲಾಸ್ಟಿಕ ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದರೆ ಪ್ಲಾಸ್ಟಿಕ ಬಳಸುವ ಪ್ರಶ್ನೆಯೆ ಉದ್ಭವಿಸುವದಿಲ್ಲ. ಈ ಕುರಿತು ಸರ್ಕಾದ ಮಟ್ಟದಿಂದಲೆ ಕಾರ್ಯವಾಗಲಿ ಎಂದು. ಇತರ ಸಂಘದ ಪಧಾಧಿಕಾರಿಗಳು ಹಲವು ಸೂಚನೆ, ಸಲಹೆ ನೀಡಿದರು.

ಈ ಸಂದರ್ಬದಲ್ಲಿ ತಹಸೀಲ್ದಾರ ವಿ.ಪಿ ಕೊಟ್ರಳ್ಳಿ, ಪುರಸಭೆ ಮುಖ್ಯಾಧಿಕಾರಿ ಟಿ. ದೇವರಾಜು, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಹೆಸ್ಕಾಂ ಎಇಇ ಮಂಜುನಾಥ, ಬಿ.ಇ.ಒ ಎಂ.ಆರ್. ಮುಂಜಿ, ಪುರಸಭೆಯ ಇಂಜೀನೀಯರ ವೆಂಕಟೇಶ ನಾವುಡ, ಸುಜಿಯಾ ಸುಮನ್ ಸೇರಿದಂತೆ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ. ಪೊಲೀಸ್, ಕರಾವಳಿ ಕಾವಲು ಪಡೆ ಸೇರಿದಂತೆ ತಾಲೂಕಿನ ಎಲ್ಲಾ ವಿಭಾಗಗಳ ಹಿರಿಯ ಅಧಿಕಾರಿಗಳು, ಸಂಘ ಸಂಸ್ಥೆಯ ಪಧಾಧಿಕಾರಿಗಳು, ತಂಜೀಂ, ರಬಿತಾ ಸಂಸ್ಥೆಯ ಸದಸ್ಯರು ಇದ್ದರುConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.