ETV Bharat / state

ಸಮುದ್ರ ಮಾಲಿನ್ಯಕ್ಕೆ ಕಡಿವಾಣ? ಕಾರವಾರಕ್ಕೆ ಬಂದ ಹೊಸ ಯಂತ್ರ - Oil Pollution Control Equipment

ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ಹೊಸ ಯಂತ್ರವೊಂದನ್ನು ಕಾರವಾರ ವಾಣಿಜ್ಯ ಬಂದರಿಗೆ ತರಿಸಲಾಗಿದ್ದು ಬಂದರು ಅಧಿಕಾರಿಗಳು, ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮ್ಮುಖದಲ್ಲಿ ಪ್ರಯೋಗ ನಡೆಸಲಾಗಿದೆ.

new-machine-to-control-coastal-pollution
author img

By

Published : Aug 3, 2019, 12:00 AM IST

ಕಾರವಾರ: ಅವಘಡ ಇಲ್ಲವೇ ಆಕಸ್ಮಿಕವಾಗಿ ಹಡಗುಗಳಿಂದ ಸೋರಿಕೆಯಾಗುವ ತೈಲದಿಂದ ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ಹೊಸ ಯಂತ್ರವೊಂದು ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿದ್ದು, ಇಂದು ಇದರ ಪ್ರಯೋಗ ನಡೆಸಲಾಗಿದೆ.

ಇನ್ನಾದ್ರೂ ಸಮುದ್ರ ಮಾಲಿನ್ಯಕ್ಕೆ ಕಡಿವಾಣ ಬೀಳುತ್ತಾ?

ತೈಲ ಮಾಲಿನ್ಯ ನಿಯಂತ್ರಣ ಉಪಕರಣ (ಆಯಿಲ್ ಸ್ಟೀಲ್ ರಿಸ್ಪೋನ್ಸ್ ಇಕ್ಯೂಪ್ ಮೆಂಟ್) ಎಂದು ಕರೆಯುವ ಈ ಯಂತ್ರವನ್ನು ಟಗ್ ಒಂದರ ಮೇಲೆ ಅಳವಡಿಸಲಾಗಿದೆ. ಬಂದರಿಗೆ ಬರುವ ಹಡಗುಗಳಿಂದ ಇಂಧನ ಸೋರಿಕೆಯಾಗಿ ಇಲ್ಲವೇ ಇತರೆ ಯಾವುದೇ ಅವಘಡಗಳಲ್ಲಿ ಹಡಗುಗಳಲ್ಲಿದ್ದ ತೈಲ ಸೋರಿಕೆಯಾಗಿದ್ದರೆ ನೀರಿನಿಂದ ಇದನ್ನು ಬೇರ್ಪಡಿಸಲು ಸಾಧ್ಯವಿದೆ. ಇಂಧನ ಅಥವಾ ತೈಲ ಸೋರಿಕೆಯಾದ ತಕ್ಷಣ ಆ ಪ್ರದೇಶದ 400 ಮೀಟರ್ ಸುತ್ತಲೂ ಇನ್ ಪ್ಲೆಟಿಬಲ್ ಬೂಮ್ ಅಳವಡಿಸಲಾಗುತ್ತದೆ. ಇದು ಸೋರಿಕೆಯಾದ ತೈಲ ಸಮುದ್ರಕ್ಕೆ ಹರಡದಂತೆ ತಡೆಯಲಿದ್ದು, ಬಳಿಕ ತೈಲ ಮಾತ್ರ ಹೀರಿಕೊಳ್ಳುವ ಎರಡು ಆಯಿಲ್ ಸ್ಕೀಮರ್​ಗಳ ಮೂಲಕ ಟಗ್​ನಲ್ಲಿರುವ ಟ್ಯಾಂಕ್​ನಲ್ಲಿ ಶೇಖರಿಸಲಾಗುತ್ತದೆ.

ಇದರಿಂದಾಗಿ ಇಂಧನವನ್ನು ಪುನಃ ಪಡೆಯುವುದರ ಜೊತೆಗೆ ನೀರಿನೊಂದಿಗೆ ತೈಲ ಬೆರೆಯದೇ ಸಮುದ್ರ ಮಾಲಿನ್ಯವಾಗುವುದನ್ನು ತಪ್ಪಿಸಲು ಯಂತ್ರ ಸಹಕಾರಿಯಾಗಿದೆ. ಮಹಾರಾಷ್ಟ್ರದ ವಿರಾಜ್ ಕ್ಲೀನ್​ಸಿ ಎಂಟರ್‌ಪ್ರೈಸಸ್ ಕಂಪನಿ ಈ ಯಂತ್ರವನ್ನು ಕಾರವಾರ ಬಂದರಿಗೆ ತಂದಿದ್ದು, ಬಂದರಿನ ಅಧಿಕಾರಿಗಳು ಸಿಬ್ಬಂದಿ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಯೋಗ ನಡೆಸಲಾಗಿದೆ ಎಂದು ಬಂದರು ಆಡಳಿತ ವಿಭಾಗದ ಅಧಿಕಾರಿ ಸುರೇಶ ಶೆಟ್ಟಿ ತಿಳಿಸಿದ್ರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 1.25ರೂ. ಕೋಟಿಯಂತೆ ಒಟ್ಟು 2.50ರೂ. ಕೋಟಿ ವೆಚ್ಚದಲ್ಲಿ ಈ ಯಂತ್ರವನ್ನು ತರಿಸಲಾಗಿದೆ. ಇದು ಗೋವಾ, ಮಂಗಳೂರು ಹೊರತು ಪಡೆಸಿದರೇ ಕಾರವಾರದಲ್ಲಿ ಇದೇ ಮೊದಲ ಬಾರಿಗೆ ತರಿಸಲಾಗಿದೆ. ಎಲ್ಲೇ ಅವಘಡಗಳು ಸಂಭವಿಸಿದರು ಇದರ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.

ಕಾರವಾರ: ಅವಘಡ ಇಲ್ಲವೇ ಆಕಸ್ಮಿಕವಾಗಿ ಹಡಗುಗಳಿಂದ ಸೋರಿಕೆಯಾಗುವ ತೈಲದಿಂದ ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ಹೊಸ ಯಂತ್ರವೊಂದು ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿದ್ದು, ಇಂದು ಇದರ ಪ್ರಯೋಗ ನಡೆಸಲಾಗಿದೆ.

ಇನ್ನಾದ್ರೂ ಸಮುದ್ರ ಮಾಲಿನ್ಯಕ್ಕೆ ಕಡಿವಾಣ ಬೀಳುತ್ತಾ?

ತೈಲ ಮಾಲಿನ್ಯ ನಿಯಂತ್ರಣ ಉಪಕರಣ (ಆಯಿಲ್ ಸ್ಟೀಲ್ ರಿಸ್ಪೋನ್ಸ್ ಇಕ್ಯೂಪ್ ಮೆಂಟ್) ಎಂದು ಕರೆಯುವ ಈ ಯಂತ್ರವನ್ನು ಟಗ್ ಒಂದರ ಮೇಲೆ ಅಳವಡಿಸಲಾಗಿದೆ. ಬಂದರಿಗೆ ಬರುವ ಹಡಗುಗಳಿಂದ ಇಂಧನ ಸೋರಿಕೆಯಾಗಿ ಇಲ್ಲವೇ ಇತರೆ ಯಾವುದೇ ಅವಘಡಗಳಲ್ಲಿ ಹಡಗುಗಳಲ್ಲಿದ್ದ ತೈಲ ಸೋರಿಕೆಯಾಗಿದ್ದರೆ ನೀರಿನಿಂದ ಇದನ್ನು ಬೇರ್ಪಡಿಸಲು ಸಾಧ್ಯವಿದೆ. ಇಂಧನ ಅಥವಾ ತೈಲ ಸೋರಿಕೆಯಾದ ತಕ್ಷಣ ಆ ಪ್ರದೇಶದ 400 ಮೀಟರ್ ಸುತ್ತಲೂ ಇನ್ ಪ್ಲೆಟಿಬಲ್ ಬೂಮ್ ಅಳವಡಿಸಲಾಗುತ್ತದೆ. ಇದು ಸೋರಿಕೆಯಾದ ತೈಲ ಸಮುದ್ರಕ್ಕೆ ಹರಡದಂತೆ ತಡೆಯಲಿದ್ದು, ಬಳಿಕ ತೈಲ ಮಾತ್ರ ಹೀರಿಕೊಳ್ಳುವ ಎರಡು ಆಯಿಲ್ ಸ್ಕೀಮರ್​ಗಳ ಮೂಲಕ ಟಗ್​ನಲ್ಲಿರುವ ಟ್ಯಾಂಕ್​ನಲ್ಲಿ ಶೇಖರಿಸಲಾಗುತ್ತದೆ.

ಇದರಿಂದಾಗಿ ಇಂಧನವನ್ನು ಪುನಃ ಪಡೆಯುವುದರ ಜೊತೆಗೆ ನೀರಿನೊಂದಿಗೆ ತೈಲ ಬೆರೆಯದೇ ಸಮುದ್ರ ಮಾಲಿನ್ಯವಾಗುವುದನ್ನು ತಪ್ಪಿಸಲು ಯಂತ್ರ ಸಹಕಾರಿಯಾಗಿದೆ. ಮಹಾರಾಷ್ಟ್ರದ ವಿರಾಜ್ ಕ್ಲೀನ್​ಸಿ ಎಂಟರ್‌ಪ್ರೈಸಸ್ ಕಂಪನಿ ಈ ಯಂತ್ರವನ್ನು ಕಾರವಾರ ಬಂದರಿಗೆ ತಂದಿದ್ದು, ಬಂದರಿನ ಅಧಿಕಾರಿಗಳು ಸಿಬ್ಬಂದಿ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಯೋಗ ನಡೆಸಲಾಗಿದೆ ಎಂದು ಬಂದರು ಆಡಳಿತ ವಿಭಾಗದ ಅಧಿಕಾರಿ ಸುರೇಶ ಶೆಟ್ಟಿ ತಿಳಿಸಿದ್ರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 1.25ರೂ. ಕೋಟಿಯಂತೆ ಒಟ್ಟು 2.50ರೂ. ಕೋಟಿ ವೆಚ್ಚದಲ್ಲಿ ಈ ಯಂತ್ರವನ್ನು ತರಿಸಲಾಗಿದೆ. ಇದು ಗೋವಾ, ಮಂಗಳೂರು ಹೊರತು ಪಡೆಸಿದರೇ ಕಾರವಾರದಲ್ಲಿ ಇದೇ ಮೊದಲ ಬಾರಿಗೆ ತರಿಸಲಾಗಿದೆ. ಎಲ್ಲೇ ಅವಘಡಗಳು ಸಂಭವಿಸಿದರು ಇದರ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.

Intro:ತೈಲ ಸೋರಿಕೆಯಿಂದ ಸಮುದ್ರ ಮಾಲಿನ್ಯಕ್ಕೆ ಬಿಳ್ಳಲಿದೆ ಬ್ರೇಕ್... ಕಾರವಾರ ಬಂದರಿಗೆ ಬಂದ ಹೊಸ ಯಂತ್ರ...!

ಕಾರವಾರ: ಅವಘಡ ಇಲ್ಲವೇ ಆಕಸ್ಮಿಕವಾಗಿ ಹಡಗುಗಳಿಂದ ಸೋರಿಕೆಯಾಗುವ ತೈಲದಿಂದ ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ಹೊಸ ಯಂತ್ರವೊಂದು ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿದ್ದು, ಶುಕ್ರವಾರ ಇದರ ಪ್ರಯೋಗ ನಡೆಸಲಾಗಿದೆ.
"ತೈಲ ಮಾಲಿನ್ಯ ನಿಯಂತ್ರಕ ಉಪಕರಣ" (ಆಯಿಲ್ ಸ್ಟೀಲ್ ರಿಸ್ಪೋನ್ಸ್ ಇಕ್ಯೂಪ್ ಮೆಂಟ್) ಎಂದು ಕರೆಯುವ ಈ ಯಂತ್ರವನ್ನು ಟಗ್ ಒಂದರ ಮೇಲೆ ಅಳವಡಿಸಲಾಗಿದೆ. ಬಂದರಿಗೆ ಬರುವಾಗ ಹಡಗುಗಳ ಇಂಧನ ಸೋರಿಕೆಯಾಗಿ ಇಲ್ಲವೇ ಇತರೆ ಯಾವುದೇ ಅವಘಡಗಳಲ್ಲಿ ಹಡಗುಗಳಲ್ಲಿದ್ದ ತೈಲ ಸೋರಿಕೆಯಾದಲ್ಲಿ ನೀರಿನಿಂದ ಇದನ್ನು ಬೇರ್ಪಡಿಸಲು ಸಾಧ್ಯವಿದೆ.
ಇಂಧನ ಅಥವಾ ತೈಲ ಸೋರಿಕೆಯಾದ ತಕ್ಷಣ ಆ ಪ್ರದೇಶದ ೪೦೦ ಮೀಟರ್ ಸುತ್ತಲು ಇನ್ ಪ್ಲೆಟಿಬಲ್ ಬೂಮ್ ಅಳವಡಿಸಲಾಗುತ್ತದೆ. ಇದು ತೈಲ ಸಮುದ್ರಕ್ಕೆ ಹರಡದಂತೆ ತಡೆಯಲಿದ್ದು, ಬಳಿಕ ತೈಲ ಮಾತ್ರ ಹಿರಿಕೊಳ್ಳುವ ಎರಡು ಆಯಿಲ್ ಸ್ಕೀಮರ್ ಗಳ ಮೂಲಕ ಟಗ್ ನಲ್ಲಿರುವ ಟ್ಯಾಂಕ್ ನಲ್ಲಿ ಶೇಖರಿಸಲಾಗುತ್ತದೆ.
ಇದರಿಂದಾಗಿ ಇಂದನವನ್ನು ಪುನಃ ಪಡೆಯುವುದರ ಜತೆಗೆ ನೀರಿನೊಂದಿಗೆ ತೈಲ ಬೆರೆಯದೇ ಸಮುದ್ರ ಮಾಲಿನ್ಯವಾಗುವುದನ್ನು ತಪ್ಪಿಸಲು ಇದು ಹೆಚ್ಚು ಸಹಕಾರಿಯಾಗಿದೆ. ಮಹರಾಷ್ಟ್ರದ ವಿರಾಜ್ ಕ್ಲೀನ್ ಸಿ ಎಂಟರ್ ಪ್ರೈಸಿಸ್ ಕಂಪನಿ ಕಾರವಾರ ಬಮನದರಿಗೆ ತಂದಿದ್ದು, ಇಂದು ಬಂದರಿನ ಅಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಯೋಗ ನಡೆಸಲಾಗಿದೆ ಎನ್ನುತ್ತಾರೆ ಬಂದರು ಆಡಳಿತ ವಿಭಾಗದ ಅಧಿಕಾರಿ ಸುರೇಶ ಶೆಟ್ಟಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ೧.೨೫. ಕೋಟಿಯಂತೆ ಒಟ್ಟು ೨.೫೦ ಕೋಟಿ ವೆಚ್ಚದಲ್ಲಿ ತರಿಸಲಾಗಿದೆ. ಇದು ಗೋವಾ, ಮಂಗಳೂರು ಹೊರತು ಪಡೆಸಿದರೇ ಕಾರವಾರದಲ್ಲಿ ಇದೆ ಮೊದಲ ಬಾರಿಗೆ ತರಿಸಲಾಗಿದೆ. ಎಲ್ಲೆ ಅವಘಡಗಳು ಸಂಭವಿಸಿದರು ಇದರ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.



Body:k


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.