ETV Bharat / state

ಗಮನ ಸೆಳೆಯೋಕೆ ಮಹಾದಾಯಿ ಬಗ್ಗೆ ಗೋವಾ ಸಿಎಂ ಮಾತನಾಡುತ್ತಾರೆ: ಈಶ್ವರಪ್ಪ ಕಿಡಿ

author img

By

Published : Jan 30, 2021, 7:42 PM IST

Updated : Jan 30, 2021, 8:36 PM IST

ಮಹದಾಯಿ ವಿಚಾರದಲ್ಲಿ ಯಾರ ಹೇಳಿಕೆಗೂ ಸರ್ಕಾರ ತಲೆಕೆಡಿಸಿಕೊಳ್ಳಲ್ಲ ಎಂದು ಗೋವಾ ಸಿಎಂಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

K.S. Ishwarappa
ಗೋವಾ ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

ಕಾರವಾರ: ಮಹಾದಾಯಿ ವಿಚಾರದಲ್ಲಿ ಯಾರು ಏನು ಹೇಳಿದರೂ ನಾವು ತಲೆಕೆಡಿಸಿಕೊಳ್ಳಲ್ಲ. ಎಲ್ಲರ ಗಮನ ಸೆಳೆಯೋಕೆ ಯಾರು ಏನು ಬೇಕಾದ್ರು ಹೇಳ್ತಾರೆ‌ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಗೋವಾ ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

ನದಿ ನಮ್ಮ ತಾಯಿ. ಕರ್ನಾಟಕಕ್ಕೆ ನೀರು ಕೊಡಲ್ಲ ಎಂದು ಹೇಳಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನ್ಯಾಯ ಮಂಡಳಿ ಇದೆ. ನಮ್ಮ ಸರ್ಕಾರ ಯಾವ ಹೇಳಿಕೆಗೂ ತಲೆಕೆಡಿಸಿಕೊಳ್ಳಲ್ಲ. ಇವತ್ತು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡ್ತಾರೆ. ಅಂತ ಹೇಳಿಕೆಗೆಲ್ಲ ನಾವು ಪ್ರತಿಕ್ರಿಯೆ ನೀಡ್ತಾ ಹೋದ್ರೆ ಅದು ಕಾಲಹರಣವಾಗುತ್ತದೆ.

ಮಹಾದಾಯಿ ವಿಚಾರದಲ್ಲಿ ಸಂವಿಧಾನಬದ್ಧವಾದ ಸುಪ್ರೀಂ ಕೋರ್ಟ್ ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ಬದ್ಧರಾಗುತ್ತೇವೆ. ಮಹಾರಾಷ್ಟ್ರದಲ್ಲಿ ಕೊಟ್ಟಿರುವ ಮಹಾಜನ್​ ವರದಿಗೂ ಬದ್ಧರಾಗಿರುತ್ತೇವೆ. ಕಾಳಿ ನದಿ ನೀರನ್ನು ಸದ್ಯಕ್ಕೆ ಯಾವ ಜಿಲ್ಲೆಗೂ ಕೊಂಡೊಯ್ಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.‌ ಕಾಳಿ ನದಿ ನೀರು ಜಿಲ್ಲೆಯ ಜನರಿಗೆ ಉಪಯೋಗವಾಗುವಂತೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೂ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಕಾರವಾರ: ಮಹಾದಾಯಿ ವಿಚಾರದಲ್ಲಿ ಯಾರು ಏನು ಹೇಳಿದರೂ ನಾವು ತಲೆಕೆಡಿಸಿಕೊಳ್ಳಲ್ಲ. ಎಲ್ಲರ ಗಮನ ಸೆಳೆಯೋಕೆ ಯಾರು ಏನು ಬೇಕಾದ್ರು ಹೇಳ್ತಾರೆ‌ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಗೋವಾ ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

ನದಿ ನಮ್ಮ ತಾಯಿ. ಕರ್ನಾಟಕಕ್ಕೆ ನೀರು ಕೊಡಲ್ಲ ಎಂದು ಹೇಳಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನ್ಯಾಯ ಮಂಡಳಿ ಇದೆ. ನಮ್ಮ ಸರ್ಕಾರ ಯಾವ ಹೇಳಿಕೆಗೂ ತಲೆಕೆಡಿಸಿಕೊಳ್ಳಲ್ಲ. ಇವತ್ತು ಗೋವಾ ಮುಖ್ಯಮಂತ್ರಿ, ನಾಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕೊಡ್ತಾರೆ. ಅಂತ ಹೇಳಿಕೆಗೆಲ್ಲ ನಾವು ಪ್ರತಿಕ್ರಿಯೆ ನೀಡ್ತಾ ಹೋದ್ರೆ ಅದು ಕಾಲಹರಣವಾಗುತ್ತದೆ.

ಮಹಾದಾಯಿ ವಿಚಾರದಲ್ಲಿ ಸಂವಿಧಾನಬದ್ಧವಾದ ಸುಪ್ರೀಂ ಕೋರ್ಟ್ ಏನು ತೀರ್ಮಾನ ಕೊಡುತ್ತದೆಯೋ ಅದಕ್ಕೆ ಬದ್ಧರಾಗುತ್ತೇವೆ. ಮಹಾರಾಷ್ಟ್ರದಲ್ಲಿ ಕೊಟ್ಟಿರುವ ಮಹಾಜನ್​ ವರದಿಗೂ ಬದ್ಧರಾಗಿರುತ್ತೇವೆ. ಕಾಳಿ ನದಿ ನೀರನ್ನು ಸದ್ಯಕ್ಕೆ ಯಾವ ಜಿಲ್ಲೆಗೂ ಕೊಂಡೊಯ್ಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.‌ ಕಾಳಿ ನದಿ ನೀರು ಜಿಲ್ಲೆಯ ಜನರಿಗೆ ಉಪಯೋಗವಾಗುವಂತೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೂ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

Last Updated : Jan 30, 2021, 8:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.