ETV Bharat / state

ಅಂತರ್​​ ರಾಜ್ಯ ಕಳ್ಳರ ಬಂಧನ: ಮಾರಕಾಸ್ತ್ರ ವಶಕ್ಕೆ ಪಡೆದ ಪೊಲೀಸರು

author img

By

Published : Mar 30, 2020, 6:50 PM IST

ಅಂತರ್​​ ರಾಜ್ಯ ದರೋಡೆಕೋರರನ್ನು, ಶಿರಸಿ ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕ ಹಾಗೂ ಯಲ್ಲಾಪುರ ಪಿ.ಐ. ಸುರೇಶ ಯಳ್ಳೂರು ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ.

ಅಂತರ್​​ ರಾಜ್ಯ ಕಳ್ಳರ ಬಂಧನ
ಅಂತರ್​​ ರಾಜ್ಯ ಕಳ್ಳರ ಬಂಧನ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಿತ್ಲಳ್ಳಿ ಗ್ರಾಮದ ಬಳಿ ಮನೆ ದರೋಡೆ ಮಾಡಲು ಮಾರಕಾಸ್ತ್ರದೊಂದಿಗೆ ಹೊಂಚು ಹಾಕುತ್ತಿದ್ದ, ಅಂತಾ​​ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಅಲಿರಾಜಪುರದ ಹೀರಾಸಿಂಗ್ ಡೊಂಗರಸಿಂಗ್ ಭಾಮನಿಯಾ, ದುಡಿಯಾ ಡೊಂಗರಸಿಂಗ್ ಭಾಮನಿಯಾ, ಕೆಂದು ಡೊಂಗರಸಿಂಗ್ ಭಾಮನಿಯಾ, ಖೇಲು ಸಾವರಸಿಂಗ್ ಭಾಮನಿಯಾ ಹಾಗೂ ಧಾರ್ ಜಿಲ್ಲೆಯ ರೆಂದಾ ಹಾಬು ಬಾಲು ಭಾಮನಿಯಾ ಬಂಧಿತ ಆರೋಪಿಗಳು. ಇವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಿನ ಜಾವ 1-15ಕ್ಕೆ ಉಮ್ಮಚಗಿ ಮತ್ತು ಹಿತ್ಲಳ್ಳಿ ಗ್ರಾಮಗಳ ಕಡೆಗೆ ಒಂಟಿ ಮನೆಗಳನ್ನು ದರೋಡೆ ಮಾಡಲು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆಗಮಿಸುತ್ತಿದ್ದರು. ಇದರ ಖಚಿತ ಮಾಹಿತಿ ಪಡೆದ ಶಿರಸಿ ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕ ಹಾಗೂ ಯಲ್ಲಾಪುರ ಪಿ.ಐ. ಸುರೇಶ ಯಳ್ಳೂರು ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಿತ್ಲಳ್ಳಿ ಗ್ರಾಮದ ಬಳಿ ಮನೆ ದರೋಡೆ ಮಾಡಲು ಮಾರಕಾಸ್ತ್ರದೊಂದಿಗೆ ಹೊಂಚು ಹಾಕುತ್ತಿದ್ದ, ಅಂತಾ​​ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಅಲಿರಾಜಪುರದ ಹೀರಾಸಿಂಗ್ ಡೊಂಗರಸಿಂಗ್ ಭಾಮನಿಯಾ, ದುಡಿಯಾ ಡೊಂಗರಸಿಂಗ್ ಭಾಮನಿಯಾ, ಕೆಂದು ಡೊಂಗರಸಿಂಗ್ ಭಾಮನಿಯಾ, ಖೇಲು ಸಾವರಸಿಂಗ್ ಭಾಮನಿಯಾ ಹಾಗೂ ಧಾರ್ ಜಿಲ್ಲೆಯ ರೆಂದಾ ಹಾಬು ಬಾಲು ಭಾಮನಿಯಾ ಬಂಧಿತ ಆರೋಪಿಗಳು. ಇವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಿನ ಜಾವ 1-15ಕ್ಕೆ ಉಮ್ಮಚಗಿ ಮತ್ತು ಹಿತ್ಲಳ್ಳಿ ಗ್ರಾಮಗಳ ಕಡೆಗೆ ಒಂಟಿ ಮನೆಗಳನ್ನು ದರೋಡೆ ಮಾಡಲು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆಗಮಿಸುತ್ತಿದ್ದರು. ಇದರ ಖಚಿತ ಮಾಹಿತಿ ಪಡೆದ ಶಿರಸಿ ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕ ಹಾಗೂ ಯಲ್ಲಾಪುರ ಪಿ.ಐ. ಸುರೇಶ ಯಳ್ಳೂರು ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.