ETV Bharat / opinion

ಏನಿದು ಸಿಂಧು ಜಲ ಒಪ್ಪಂದ: ಭಾರತದ ಅಂತಿಮ ಎಚ್ಚರಿಕೆಗೆ ಮಣಿದ ಪಾಕಿಸ್ತಾನ ಮಾತುಕತೆಗೆ ಸಜ್ಜು? - Indus Waters Treaty

author img

By Aroonim Bhuyan

Published : 3 hours ago

ಭಾರತ ಪಾಕಿಸ್ತಾನದ ನಡುವಿನ ಸಿಂಧು ನದಿ ನೀರು ಒಪ್ಪಂದ ಮಾತುಕತೆಗೆ ಪಾಕಿಸ್ತಾನ ಕೊನೆಗೂ ಸಜ್ಜಾಗಿದೆ. ಭಾರತದ ಕೊನೆಯ ಎಚ್ಚರಿಕೆಗೆ ಮಣಿದ ನೆರೆರಾಷ್ಟ್ರ ಸಿಂಧು ಆಯೋಗದ ಮಾತುಕತೆಯನ್ನು ಮುಂದುವರಿಸಲು ಬಯಸಿದೆ. ಸಿಂಧೂ ಜಲ ಒಪ್ಪಂದ ಎಂದರೇನು ಮತ್ತು ಅದರ ಸುತ್ತಲಿನ ಇತ್ತೀಚಿನ ವಿವಾದವೇನು? ಈಟಿವಿ ಭಾರತ್‌ನ ಅರುನಿಮ್ ಭುಯಾನ್ ಅವರ ವಿಶ್ಲೇಷಣೆ ಹೀಗಿದೆ.

ಸಿಂಧು ಜಲ ಒಪ್ಪಂದ
ಸಿಂಧು ಜಲ ಒಪ್ಪಂದ (ETV Bharat)

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ಸಂಬಂಧಗಳು ಗಟ್ಟಿಯಾಗಿಲ್ಲ. ಈ ಮಧ್ಯೆ ಸಿಂಧು ಜಲ ಒಪ್ಪಂದವೂ (ಐಡಬ್ಲ್ಯುಟಿ) ಒಂದಾಗಿದೆ. ಸಿಂಧು ನದಿ ನೀರು ಹಂಚಿಕೆ ವಿಷಯದ ಬಗ್ಗೆ ಮಾತುಕತೆಗೆ ಪಾಕಿಸ್ತಾನ ಮುಂದಾಗಿದ್ದರೂ, ಭಾರತ ಕೆಲ ನಿಯಮಗಳು ಮತ್ತು ಷರತ್ತುಗಳು ಕೈಬಿಡುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಖಡಕ್ಕಾಗಿ ತಿಳಿಸಿದೆ.

ಸಿಂಧು ಜಲ ಒಪ್ಪಂದವು ಕಳೆದ ಹಲವು ದಶಕಗಳಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಪ್ರಮುಖ ಒಪ್ಪಂದವಾಗಿದೆ. ನೀರು ಹಂಚಿಕೆಯ ದ್ವಿಪಕ್ಷೀಯ ಒಪ್ಪಂದಗಳ ಮಾತುಕತೆಗಳು ಇಂದಿನ ಅಗತ್ಯವಾಗಿದೆ. ಪಾಕಿಸ್ತಾನವು ಅದರ ಅನುಷ್ಠಾನಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಭಾರತವು ಸಹ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು.

ಏನಿದು ಸಿಂಧು ಜಲ ಒಪ್ಪಂದ?: ಸಿಂಧು ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧು ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರಿನ ವಿತರಣಾ ಒಪ್ಪಂದವಾಗಿದೆ. 1960 ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ತಾನದೊಳಕ್ಕೆ ಹರಿಯುವ ಮೂರು ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಈ ಒಪ್ಪಂದವು ಪಾಕಿಸ್ತಾನಕ್ಕೆ ಹಂಚಿಕೆಯಾದ ಪಶ್ಚಿಮ ನದಿಗಳು ಮತ್ತು ಭಾರತಕ್ಕೆ ಹಂಚಿಕೆಯಾದ ಪೂರ್ವ ನದಿಗಳ ಬಳಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯಕ್ಕಾಗಿ ಸಹಕಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.

ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಒಪ್ಪಂದದ ಪ್ರಕಾರ, ಶಾಶ್ವತ ಸಿಂಧು ಆಯೋಗವನ್ನು ಸ್ಥಾಪಿಸಲಾಗಿದೆ. ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸೃಷ್ಟಿಯಾಗುವ ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವಾರು ಯುದ್ಧಗಳು ಮತ್ತು ಉದ್ವಿಗ್ನತೆಯ ನಡುವೆಯೂ ಈ ಒಪ್ಪಂದ ಸಾಗಿಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ, ನೀರಿನ ಬಳಕೆ, ಅಣೆಕಟ್ಟು ನಿರ್ಮಾಣ ಮತ್ತು ಒಪ್ಪಂದದ ಅನುಷ್ಠಾನದ ಮೇಲಿನ ಬಹು ವಿವಾದಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಒಪ್ಪಂದದ ಬಗ್ಗೆ ಇತ್ತೀಚಿನ ವಿವಾದ ಏನು?: ಪಶ್ಚಿಮ ನದಿಗಳು ಎಂದು ಗೊತ್ತುಪಡಿಸಿದ ಝೀಲಂ ಮತ್ತು ಚೆನಾಬ್‌ನ ಉಪನದಿಗಳಲ್ಲಿರುವ ಕಿಶನ್‌ಗಂಗಾ (330MW) ಮತ್ತು ರಾಟಲ್ (850 MW) ಜಲವಿದ್ಯುತ್ ಸ್ಥಾವರಗಳ ತಾಂತ್ರಿಕ ವಿನ್ಯಾಸದ ವೈಶಿಷ್ಟ್ಯಗಳ ಬಗ್ಗೆ ಪಾಕಿಸ್ತಾನವು ಆಕ್ಷೇಪಣೆಗಳನ್ನು ಎತ್ತಿದೆ. IWT ಯ ಪ್ರಕಾರ, ಈ ನದಿಗಳ ಮೇಲೆ ಜಲವಿದ್ಯುತ್ ನಿರ್ಮಿಸಲು ಭಾರತಕ್ಕೆ ಅನುಮತಿ ಇದೆ. ಈ ಎರಡು ಯೋಜನೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಮಧ್ಯಸ್ಥಿಕೆ ನ್ಯಾಯಾಲಯವನ್ನು ಸ್ಥಾಪಿಸಲು ಅನುಕೂಲವಾಗುವಂತೆ ಪಾಕಿಸ್ತಾನವು ವಿಶ್ವ ಬ್ಯಾಂಕ್ ಅನ್ನು ಸಂಪರ್ಕಿಸಿತು. ಆಕ್ಷೇಪಗಳು ಮತ್ತು ಒಪ್ಪಂದದ ವಿವಾದಗಳ ಇತ್ಯರ್ಥದ ಕುರಿತು IWT ಯ ಅನುಚ್ಛೇದ IX ನ ಷರತ್ತು 2.1 ರ ಉಲ್ಲೇಖಿತ ತಟಸ್ಥ ತಜ್ಞರನ್ನು ನೇಮಿಸುವಂತೆ ಭಾರತ ಕೋರಿದೆ.

ಅಕ್ಟೋಬರ್ 2022 ರಲ್ಲಿ, ವಿಶ್ವ ಬ್ಯಾಂಕ್ ಮೈಕೆಲ್ ಲಿನೊ ಅವರನ್ನು ತಟಸ್ಥ ತಜ್ಞರಾಗಿ ಮತ್ತು ಸೀನ್ ಮರ್ಫಿ ಅವರನ್ನು ಮಧ್ಯಸ್ಥಿಕೆ ನ್ಯಾಯಾಲಯದ ಅಧ್ಯಕ್ಷರನ್ನಾಗಿ ನೇಮಿಸಿತು. ದಕ್ಷಿಣ ಏಷ್ಯಾದ ನೆರೆಹೊರೆಯವರ ಎರಡೂ ವಿನಂತಿಗಳಿಗೆ ಸಮ್ಮತಿಸಿತು.

ಭಾರತವು 1960 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಭೌಗೋಳಿಕ ರಾಜಕೀಯ ಮತ್ತು ಪರಿಸರ ಮೂಲಭೂತ ಬದಲಾವಣೆಗಳೆಂದು ಪರಿಗಣಿಸುವ ಉದ್ದೇಶವನ್ನು ಸೂಚಿಸುವ ತನ್ನ ಮೊದಲ ನೋಟೀಸ್ ಅನ್ನು ಪಾಕಿಸ್ತಾನಕ್ಕೆ ಕಳುಹಿಸಿತು. ಜನಸಂಖ್ಯೆಯ ಬೆಳವಣಿಗೆ, ಕೃಷಿ ಅಗತ್ಯತೆಗಳು ಮತ್ತು 1960 ರಲ್ಲಿ ಒಪ್ಪಂದದ ಆರಂಭದಿಂದಲೂ ನೀರಿನ ಬಳಕೆಯ ಪರಿಸ್ಥಿತಿಯನ್ನು ಅದರಲ್ಲಿ ತಿಳಿಸಲಾಗಿದೆ.

ಆರ್ಬಿಟ್ರೇಶನ್ ಕೋರ್ಟ್ ಆದೇಶಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ. ಕಿಶನ್‌ಗಂಗಾ ಮತ್ತು ರಾಟಲ್ ಯೋಜನೆಗಳಿಗೆ ಸಂಬಂಧಿಸಿದ ವ್ಯತ್ಯಾಸಗಳ ಬಗ್ಗೆ ತಟಸ್ಥ ತಜ್ಞರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ತಟಸ್ಥ ತಜ್ಞರ ಪ್ರಕ್ರಿಯೆಗಳು ಈ ಹಂತದಲ್ಲಿ ಮಾತ್ರ ಒಪ್ಪಂದ-ಸ್ಥಿರ ಪ್ರಕ್ರಿಯೆಗಳಾಗಿವೆ. ಒಪ್ಪಂದವು ಒಂದೇ ರೀತಿಯ ಸಮಸ್ಯೆಗಳ ಮೇಲೆ ಸಮಾನಾಂತರ ಪ್ರಕ್ರಿಯೆಗಳನ್ನು ಒದಗಿಸುವುದಿಲ್ಲ ಎಂದು ಹೇಳಿದೆ.

ಇತ್ತೀಚಿನ ಬೆಳವಣಿಗೆ ಏನು?: ವರದಿಗಳ ಪ್ರಕಾರ, ಜನವರಿ 2023 ರಿಂದ ಈವರೆಗೂ ಹಲವು ನೋಟೀಸ್‌ಗಳನ್ನು ಕಳುಹಿಸಿದ್ದರೂ, ಪಾಕಿಸ್ತಾನ ಇದಕ್ಕೆ ಉತ್ತರಿಸಿರಲಿಲ್ಲ. ಇದೀಗ ಆಗಸ್ಟ್ 30 ರಂದು ಭಾರತವು ಪಾಕಿಸ್ತಾನಕ್ಕೆ ಕೊನೆಯ ನೋಟಿಸ್ ಕಳುಹಿಸಿತು. ಇದಕ್ಕೆ ಮಣಿದ ಪಾಕ್​ ಒಪ್ಪಂದದ ಕುರಿತು ಮರು ಮಾತುಕತೆ ನಡೆಸಲು ಇಚ್ಛೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪೇಜರ್​ ದಾಳಿ: ಹೆಚ್ಚುತ್ತಿರುವ ಹೈಬ್ರಿಡ್​ ಯುದ್ಧತಂತ್ರ - ವಿಶ್ವಕ್ಕೆ ಕಾದಿದೆಯಾ ಅಪಾಯ? - Hybrid War Tactics

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ಸಂಬಂಧಗಳು ಗಟ್ಟಿಯಾಗಿಲ್ಲ. ಈ ಮಧ್ಯೆ ಸಿಂಧು ಜಲ ಒಪ್ಪಂದವೂ (ಐಡಬ್ಲ್ಯುಟಿ) ಒಂದಾಗಿದೆ. ಸಿಂಧು ನದಿ ನೀರು ಹಂಚಿಕೆ ವಿಷಯದ ಬಗ್ಗೆ ಮಾತುಕತೆಗೆ ಪಾಕಿಸ್ತಾನ ಮುಂದಾಗಿದ್ದರೂ, ಭಾರತ ಕೆಲ ನಿಯಮಗಳು ಮತ್ತು ಷರತ್ತುಗಳು ಕೈಬಿಡುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಖಡಕ್ಕಾಗಿ ತಿಳಿಸಿದೆ.

ಸಿಂಧು ಜಲ ಒಪ್ಪಂದವು ಕಳೆದ ಹಲವು ದಶಕಗಳಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಪ್ರಮುಖ ಒಪ್ಪಂದವಾಗಿದೆ. ನೀರು ಹಂಚಿಕೆಯ ದ್ವಿಪಕ್ಷೀಯ ಒಪ್ಪಂದಗಳ ಮಾತುಕತೆಗಳು ಇಂದಿನ ಅಗತ್ಯವಾಗಿದೆ. ಪಾಕಿಸ್ತಾನವು ಅದರ ಅನುಷ್ಠಾನಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಭಾರತವು ಸಹ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು.

ಏನಿದು ಸಿಂಧು ಜಲ ಒಪ್ಪಂದ?: ಸಿಂಧು ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧು ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರಿನ ವಿತರಣಾ ಒಪ್ಪಂದವಾಗಿದೆ. 1960 ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ತಾನದೊಳಕ್ಕೆ ಹರಿಯುವ ಮೂರು ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಈ ಒಪ್ಪಂದವು ಪಾಕಿಸ್ತಾನಕ್ಕೆ ಹಂಚಿಕೆಯಾದ ಪಶ್ಚಿಮ ನದಿಗಳು ಮತ್ತು ಭಾರತಕ್ಕೆ ಹಂಚಿಕೆಯಾದ ಪೂರ್ವ ನದಿಗಳ ಬಳಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯಕ್ಕಾಗಿ ಸಹಕಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.

ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಒಪ್ಪಂದದ ಪ್ರಕಾರ, ಶಾಶ್ವತ ಸಿಂಧು ಆಯೋಗವನ್ನು ಸ್ಥಾಪಿಸಲಾಗಿದೆ. ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸೃಷ್ಟಿಯಾಗುವ ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವಾರು ಯುದ್ಧಗಳು ಮತ್ತು ಉದ್ವಿಗ್ನತೆಯ ನಡುವೆಯೂ ಈ ಒಪ್ಪಂದ ಸಾಗಿಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ, ನೀರಿನ ಬಳಕೆ, ಅಣೆಕಟ್ಟು ನಿರ್ಮಾಣ ಮತ್ತು ಒಪ್ಪಂದದ ಅನುಷ್ಠಾನದ ಮೇಲಿನ ಬಹು ವಿವಾದಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಒಪ್ಪಂದದ ಬಗ್ಗೆ ಇತ್ತೀಚಿನ ವಿವಾದ ಏನು?: ಪಶ್ಚಿಮ ನದಿಗಳು ಎಂದು ಗೊತ್ತುಪಡಿಸಿದ ಝೀಲಂ ಮತ್ತು ಚೆನಾಬ್‌ನ ಉಪನದಿಗಳಲ್ಲಿರುವ ಕಿಶನ್‌ಗಂಗಾ (330MW) ಮತ್ತು ರಾಟಲ್ (850 MW) ಜಲವಿದ್ಯುತ್ ಸ್ಥಾವರಗಳ ತಾಂತ್ರಿಕ ವಿನ್ಯಾಸದ ವೈಶಿಷ್ಟ್ಯಗಳ ಬಗ್ಗೆ ಪಾಕಿಸ್ತಾನವು ಆಕ್ಷೇಪಣೆಗಳನ್ನು ಎತ್ತಿದೆ. IWT ಯ ಪ್ರಕಾರ, ಈ ನದಿಗಳ ಮೇಲೆ ಜಲವಿದ್ಯುತ್ ನಿರ್ಮಿಸಲು ಭಾರತಕ್ಕೆ ಅನುಮತಿ ಇದೆ. ಈ ಎರಡು ಯೋಜನೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಮಧ್ಯಸ್ಥಿಕೆ ನ್ಯಾಯಾಲಯವನ್ನು ಸ್ಥಾಪಿಸಲು ಅನುಕೂಲವಾಗುವಂತೆ ಪಾಕಿಸ್ತಾನವು ವಿಶ್ವ ಬ್ಯಾಂಕ್ ಅನ್ನು ಸಂಪರ್ಕಿಸಿತು. ಆಕ್ಷೇಪಗಳು ಮತ್ತು ಒಪ್ಪಂದದ ವಿವಾದಗಳ ಇತ್ಯರ್ಥದ ಕುರಿತು IWT ಯ ಅನುಚ್ಛೇದ IX ನ ಷರತ್ತು 2.1 ರ ಉಲ್ಲೇಖಿತ ತಟಸ್ಥ ತಜ್ಞರನ್ನು ನೇಮಿಸುವಂತೆ ಭಾರತ ಕೋರಿದೆ.

ಅಕ್ಟೋಬರ್ 2022 ರಲ್ಲಿ, ವಿಶ್ವ ಬ್ಯಾಂಕ್ ಮೈಕೆಲ್ ಲಿನೊ ಅವರನ್ನು ತಟಸ್ಥ ತಜ್ಞರಾಗಿ ಮತ್ತು ಸೀನ್ ಮರ್ಫಿ ಅವರನ್ನು ಮಧ್ಯಸ್ಥಿಕೆ ನ್ಯಾಯಾಲಯದ ಅಧ್ಯಕ್ಷರನ್ನಾಗಿ ನೇಮಿಸಿತು. ದಕ್ಷಿಣ ಏಷ್ಯಾದ ನೆರೆಹೊರೆಯವರ ಎರಡೂ ವಿನಂತಿಗಳಿಗೆ ಸಮ್ಮತಿಸಿತು.

ಭಾರತವು 1960 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಭೌಗೋಳಿಕ ರಾಜಕೀಯ ಮತ್ತು ಪರಿಸರ ಮೂಲಭೂತ ಬದಲಾವಣೆಗಳೆಂದು ಪರಿಗಣಿಸುವ ಉದ್ದೇಶವನ್ನು ಸೂಚಿಸುವ ತನ್ನ ಮೊದಲ ನೋಟೀಸ್ ಅನ್ನು ಪಾಕಿಸ್ತಾನಕ್ಕೆ ಕಳುಹಿಸಿತು. ಜನಸಂಖ್ಯೆಯ ಬೆಳವಣಿಗೆ, ಕೃಷಿ ಅಗತ್ಯತೆಗಳು ಮತ್ತು 1960 ರಲ್ಲಿ ಒಪ್ಪಂದದ ಆರಂಭದಿಂದಲೂ ನೀರಿನ ಬಳಕೆಯ ಪರಿಸ್ಥಿತಿಯನ್ನು ಅದರಲ್ಲಿ ತಿಳಿಸಲಾಗಿದೆ.

ಆರ್ಬಿಟ್ರೇಶನ್ ಕೋರ್ಟ್ ಆದೇಶಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ. ಕಿಶನ್‌ಗಂಗಾ ಮತ್ತು ರಾಟಲ್ ಯೋಜನೆಗಳಿಗೆ ಸಂಬಂಧಿಸಿದ ವ್ಯತ್ಯಾಸಗಳ ಬಗ್ಗೆ ತಟಸ್ಥ ತಜ್ಞರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ತಟಸ್ಥ ತಜ್ಞರ ಪ್ರಕ್ರಿಯೆಗಳು ಈ ಹಂತದಲ್ಲಿ ಮಾತ್ರ ಒಪ್ಪಂದ-ಸ್ಥಿರ ಪ್ರಕ್ರಿಯೆಗಳಾಗಿವೆ. ಒಪ್ಪಂದವು ಒಂದೇ ರೀತಿಯ ಸಮಸ್ಯೆಗಳ ಮೇಲೆ ಸಮಾನಾಂತರ ಪ್ರಕ್ರಿಯೆಗಳನ್ನು ಒದಗಿಸುವುದಿಲ್ಲ ಎಂದು ಹೇಳಿದೆ.

ಇತ್ತೀಚಿನ ಬೆಳವಣಿಗೆ ಏನು?: ವರದಿಗಳ ಪ್ರಕಾರ, ಜನವರಿ 2023 ರಿಂದ ಈವರೆಗೂ ಹಲವು ನೋಟೀಸ್‌ಗಳನ್ನು ಕಳುಹಿಸಿದ್ದರೂ, ಪಾಕಿಸ್ತಾನ ಇದಕ್ಕೆ ಉತ್ತರಿಸಿರಲಿಲ್ಲ. ಇದೀಗ ಆಗಸ್ಟ್ 30 ರಂದು ಭಾರತವು ಪಾಕಿಸ್ತಾನಕ್ಕೆ ಕೊನೆಯ ನೋಟಿಸ್ ಕಳುಹಿಸಿತು. ಇದಕ್ಕೆ ಮಣಿದ ಪಾಕ್​ ಒಪ್ಪಂದದ ಕುರಿತು ಮರು ಮಾತುಕತೆ ನಡೆಸಲು ಇಚ್ಛೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪೇಜರ್​ ದಾಳಿ: ಹೆಚ್ಚುತ್ತಿರುವ ಹೈಬ್ರಿಡ್​ ಯುದ್ಧತಂತ್ರ - ವಿಶ್ವಕ್ಕೆ ಕಾದಿದೆಯಾ ಅಪಾಯ? - Hybrid War Tactics

ETV Bharat Logo

Copyright © 2024 Ushodaya Enterprises Pvt. Ltd., All Rights Reserved.