ETV Bharat / state

ಸರ್ಕಾರಿ ಗೋದಾಮಿದ್ದರೂ ಖಾಸಗಿ ಮೂಲಕ ವಹಿವಾಟು.. ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣ - undefined

ಸರ್ಕಾರಿ ಉಗ್ರಾಣ ಇದ್ದರೂ ಸಹ ಖಾಸಗಿ ಉಗ್ರಾಣದಲ್ಲಿ ಪಡಿತರವನ್ನು ಸಂಗ್ರಹಣೆ ಮಾಡುತ್ತಿದ್ದು, ಅಧಿಕಾರಿಗಳ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಖಾಸಗಿ ಗೋದಾಮಿನ ಮೂಲಕ ವಹಿವಾಟು
author img

By

Published : May 10, 2019, 10:46 AM IST

ಕಾರವಾರ: ಜನರಿಗೆ ಪಡಿತರ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸರ್ಕಾರವೇ ಉಗ್ರಾಣವನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿದೆ.‌ ಆದರೆ, ಇಲ್ಲೊಂದು ಕಡೆ ಸರ್ಕಾರಿ ಉಗ್ರಾಣವಿದ್ದರೂ ಸಹ ಖಾಸಗಿ ಉಗ್ರಾಣದಲ್ಲಿ ಪಡಿತರವನ್ನು ಸಂಗ್ರಹಣೆ ಮಾಡುತ್ತಿದ್ದು, ಅಧಿಕಾರಿಗಳ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ ಬಂದರು ಪ್ರದೇಶದಲ್ಲಿ ರಾಜ್ಯ ಸರ್ಕಾರದ ಸ್ವಂತ ಉಗ್ರಾಣ ಕಟ್ಟಡ ಇದ್ದರೂ ಕೂಡ ನಗರದಿಂದ ಸುಮಾರು 20 ಕಿ.ಮೀ ದೂರದ ಸಿದ್ಧರ ಗ್ರಾಮದ ಖಾಸಗಿ ಒಡೆತನದ ಉಗ್ರಾಣವನ್ನು ರಾಜ್ಯ ಆಹಾರ ನಿಗಮದ ಅಧಿಕಾರಿಗಳು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 1985ರಲ್ಲಿ ನಗರದ ಬೈತಖೋಲದಲ್ಲಿ ಬಂದರು ಇಲಾಖೆಯ 2.2 ಎಕರೆ ಜಾಗವನ್ನು ರಾಜ್ಯ ಆಹಾರ ನಿಗಮ ಲೀಸ್​​​​ಗೆ ಪಡೆದುಕೊಂಡಿದೆ. ಅದೇ ಜಾಗದಲ್ಲಿ ಸುಮಾರು 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ.

ಖಾಸಗಿ ಗೋದಾಮಿನ ಮೂಲಕ ವಹಿವಾಟು

ಕಳೆದ ಕೆಲ ವರ್ಷದಿಂದ ಬಂದರುಗಳ ಮೂಲಕ ಆಮದು ಸ್ಥಗಿತಗೊಂಡಿದ್ದರೂ ಸಹ ಇದೇ ಉಗ್ರಾಣದಿಂದ ಆಹಾರ ಧಾನ್ಯಗಳನ್ನು ಜಿಲ್ಲೆಯ ಗೋದಾಮುಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಮೂರು ವರ್ಷದಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದೆ. ಇದೀಗ ನಗರದಿಂದ ಹೊರಗಿರುವ ಸಿದ್ಧರ ಗ್ರಾಮದಲ್ಲಿ ಖಾಸಗಿ ಉಗ್ರಾಣವನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ರೈಲಿನ ಮೂಲಕ ಬರುವ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದ್ದು, ಸ್ವಂತ ಕಟ್ಟಡವಿದ್ದರೂ ಲಕ್ಷಾಂತರ ರೂ. ಬಾಡಿಗೆ ನೀಡಿ ಸುಮ್ಮನೆ ಸರ್ಕಾರಿ ಹಣ ವ್ಯಯಿಸಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, 13 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಸಿದ್ಧರ ಗ್ರಾಮದಲ್ಲಿರುವ ಬಾಡಿಗೆ ಪಡೆದ ಗೋದಾಮು ಹೊಸದಾಗಿದೆ. ಸರ್ಕಾರಿ ಗೋದಾಮು ಚಿಕ್ಕದಾಗಿದ್ದು ಹಳೆಯದಾಗಿರುವುದರಿಂದ ಖಾಸಗಿ ಗೋದಾಮು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ.

ಸದ್ಯ ಬೈತಖೋಲದಲ್ಲಿರುವ ಸರ್ಕಾರಿ ಉಗ್ರಾಣದ ಪಕ್ಕದಲ್ಲೇ ಬಂದರು ಇಲಾಖೆಗೆ ಸೇರಿದ ಉಗ್ರಾಣ ಸಹ ಇದ್ದು ಎರಡು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರಕ್ಕೆ ಸಮೀಪದಲ್ಲೇ ಸರ್ಕಾರಿ ಉಗ್ರಾಣ ಇದ್ದರೂ ಖಾಸಗಿಯವರಿಗೆ ಲಕ್ಷಾಂತರ ರೂ. ಬಾಡಿಗೆ ವ್ಯಯಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

ಕಾರವಾರ: ಜನರಿಗೆ ಪಡಿತರ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸರ್ಕಾರವೇ ಉಗ್ರಾಣವನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿದೆ.‌ ಆದರೆ, ಇಲ್ಲೊಂದು ಕಡೆ ಸರ್ಕಾರಿ ಉಗ್ರಾಣವಿದ್ದರೂ ಸಹ ಖಾಸಗಿ ಉಗ್ರಾಣದಲ್ಲಿ ಪಡಿತರವನ್ನು ಸಂಗ್ರಹಣೆ ಮಾಡುತ್ತಿದ್ದು, ಅಧಿಕಾರಿಗಳ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ ಬಂದರು ಪ್ರದೇಶದಲ್ಲಿ ರಾಜ್ಯ ಸರ್ಕಾರದ ಸ್ವಂತ ಉಗ್ರಾಣ ಕಟ್ಟಡ ಇದ್ದರೂ ಕೂಡ ನಗರದಿಂದ ಸುಮಾರು 20 ಕಿ.ಮೀ ದೂರದ ಸಿದ್ಧರ ಗ್ರಾಮದ ಖಾಸಗಿ ಒಡೆತನದ ಉಗ್ರಾಣವನ್ನು ರಾಜ್ಯ ಆಹಾರ ನಿಗಮದ ಅಧಿಕಾರಿಗಳು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 1985ರಲ್ಲಿ ನಗರದ ಬೈತಖೋಲದಲ್ಲಿ ಬಂದರು ಇಲಾಖೆಯ 2.2 ಎಕರೆ ಜಾಗವನ್ನು ರಾಜ್ಯ ಆಹಾರ ನಿಗಮ ಲೀಸ್​​​​ಗೆ ಪಡೆದುಕೊಂಡಿದೆ. ಅದೇ ಜಾಗದಲ್ಲಿ ಸುಮಾರು 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ.

ಖಾಸಗಿ ಗೋದಾಮಿನ ಮೂಲಕ ವಹಿವಾಟು

ಕಳೆದ ಕೆಲ ವರ್ಷದಿಂದ ಬಂದರುಗಳ ಮೂಲಕ ಆಮದು ಸ್ಥಗಿತಗೊಂಡಿದ್ದರೂ ಸಹ ಇದೇ ಉಗ್ರಾಣದಿಂದ ಆಹಾರ ಧಾನ್ಯಗಳನ್ನು ಜಿಲ್ಲೆಯ ಗೋದಾಮುಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಮೂರು ವರ್ಷದಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದೆ. ಇದೀಗ ನಗರದಿಂದ ಹೊರಗಿರುವ ಸಿದ್ಧರ ಗ್ರಾಮದಲ್ಲಿ ಖಾಸಗಿ ಉಗ್ರಾಣವನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ರೈಲಿನ ಮೂಲಕ ಬರುವ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದ್ದು, ಸ್ವಂತ ಕಟ್ಟಡವಿದ್ದರೂ ಲಕ್ಷಾಂತರ ರೂ. ಬಾಡಿಗೆ ನೀಡಿ ಸುಮ್ಮನೆ ಸರ್ಕಾರಿ ಹಣ ವ್ಯಯಿಸಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, 13 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಸಿದ್ಧರ ಗ್ರಾಮದಲ್ಲಿರುವ ಬಾಡಿಗೆ ಪಡೆದ ಗೋದಾಮು ಹೊಸದಾಗಿದೆ. ಸರ್ಕಾರಿ ಗೋದಾಮು ಚಿಕ್ಕದಾಗಿದ್ದು ಹಳೆಯದಾಗಿರುವುದರಿಂದ ಖಾಸಗಿ ಗೋದಾಮು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ.

ಸದ್ಯ ಬೈತಖೋಲದಲ್ಲಿರುವ ಸರ್ಕಾರಿ ಉಗ್ರಾಣದ ಪಕ್ಕದಲ್ಲೇ ಬಂದರು ಇಲಾಖೆಗೆ ಸೇರಿದ ಉಗ್ರಾಣ ಸಹ ಇದ್ದು ಎರಡು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರಕ್ಕೆ ಸಮೀಪದಲ್ಲೇ ಸರ್ಕಾರಿ ಉಗ್ರಾಣ ಇದ್ದರೂ ಖಾಸಗಿಯವರಿಗೆ ಲಕ್ಷಾಂತರ ರೂ. ಬಾಡಿಗೆ ವ್ಯಯಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

Intro:ಸರ್ಕಾರಿ ಗೋದಾಮಿದ್ದರು ಖಾಸಗಿ ಗೋದಾಮಿನ ಮೂಲಕ ವಹಿವಾಟು... ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ
ಕಾರವಾರ: ಜನರಿಗೆ ಪಡಿತರ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಸರ್ಕಾರವೇ ಉಗ್ರಾಣವನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿದೆ.‌ ಆದರೆ ಇಲ್ಲೊಂದು ಕಡೆ ಸರ್ಕಾರಿ ಉಗ್ರಾಣ ಇದ್ದರೂ ಸಹ ಖಾಸಗಿ ಉಗ್ರಾಣದಲ್ಲಿ ಪಡಿತರವನ್ನು ಸಂಗ್ರಹಣೆ ಮಾಡುತ್ತಿದ್ದು, ಅಧಿಕಾರಿಗಳ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಗಾದೆ ಮಾತಿನಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಉಗ್ರಾಣ ನಿಗಮ ನಡೆದುಕೊಳ್ಳುತ್ತಿದೆ. ಜಿಲ್ಲಾ ಕೇಂದ್ರ ಕಾರವಾರ ನಗರದ ಬೈತಖೋಲ ಬಂದರು ಪ್ರದೇಶದಲ್ಲಿ ರಾಜ್ಯ ಸರ್ಕಾರದ ಸ್ವಂತ ಉಗ್ರಾಣ ಕಟ್ಟಡ ಇದ್ದರೂ ಕೂಡ ನಗರದಿಂದ ಸುಮಾರು 20 ಕಿಲೋ ಮೀಟರ್ ದೂರ ಇರುವ ಸಿದ್ಧರ ಗ್ರಾಮದ ಖಾಸಗಿ ಒಡೆತನದ ಉಗ್ರಾಣವನ್ನು ಬಾಡಿಗೆಗೆ ಪಡೆದುಕೊಂಡಿದೆ. ಸ್ವಂತಃ ಕಟ್ಟಡ ಇದ್ದು ಬಾಡಿಗೆ ಉಗ್ರಾಣ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
1985ರಲ್ಲಿ ನಗರದ ಬೈತಖೋಲದಲ್ಲಿ ಬಂದರು ಇಲಾಖೆಯ 2.2 ಎಕರೆ ಜಾಗವನ್ನು ರಾಜ್ಯ ಆಹಾರ ನಿಗಮ ಲೀಸ್ ಗೆ ಪಡೆದುಕೊಂಡಿದೆ. ಅದೇ ಜಾಗದಲ್ಲಿ ಸುಮಾರು 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಾಣ ಮಾಡಲಾಗಿದೆ. ಬಂದರಿಗೆ ಹಡಗುಗಳ ಮೂಲಕ ಬರುತ್ತಿದ್ದ ಧಾನ್ಯಗಳ್ನು ಇಲ್ಲಿಯೇ ಸಂಗ್ರಹಿಸಲಾಗುತಿತ್ತು. ಅಲ್ಲದೆ ಕಳೆದ ಕೆಲ ವರ್ಷದಿಂದ ಬಂದರುಗಳ ಮೂಲಕ ಆಮದು ಸ್ಥಗಿತಗೊಂಡಿದ್ದರೂ ಸಹ ಇದೇ ಉಗ್ರಾಣದಿಂದ ಆಹಾರ ಧಾನ್ಯಗಳನ್ನು ಜಿಲ್ಲೆಯ ಗೋದಾಮುಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳದ ಮೂರು ವರ್ಷಗಳಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದೆ.
ಇದೀಗ ನಗರದಿಂದ ಹೊರಗಿರುವ ಸಿದ್ಧರ ಗ್ರಾಮದಲ್ಲಿ ಖಾಸಗಿ ಉಗ್ರಾಣವನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ರೈಲಿನ ಮೂಲಕ ಬರುವ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದ್ದು, ಸ್ವಂತಃ ಕಟ್ಟಡವಿದ್ದರು ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಸುಮ್ಮನೆ ಸರ್ಕಾರಿ ಹಣ ವ್ಯಯಿಸಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಿದ್ಧರ ಗ್ರಾಮದಲ್ಲಿ ಬಾಡಿಗೆ ಪಡೆದುಕೊಂಡಿರುವ ಗೋದಾಮು 13 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹೊಂದಿದ್ದು ಹೊಸದಾಗಿದೆ. ಸರ್ಕಾರಿ ಗೋದಾಮು ಚಿಕ್ಕದಾಗಿದ್ದು ಹಳೆಯದಾಗಿರುವುದರಿಂದ ಖಾಸಗಿ ಗೋದಾಮು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ.
ಸದ್ಯ ಬೈತಖೋಲದಲ್ಲಿರುವ ಸರ್ಕಾರಿ ಉಗ್ರಾಣದ ಪಕ್ಕದಲ್ಲೇ ಬಂದರು ಇಲಾಖೆಗೆ ಸೇರಿದ ಉಗ್ರಾಣ ಸಹ ಇದ್ದು ಎರಡು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರಕ್ಕೆ ಸಮೀಪದಲ್ಲೇ ಸರ್ಕಾರಿ ಉಗ್ರಾಣ ಇದ್ದರೂ ಖಾಸಗಿಯವರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ವ್ಯಯಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು, ಆದಷ್ಟು ಬೇಗ ಸರ್ಕಾರಿ ಉಗ್ರಾಣವನ್ನೇ ಸರಿಪಡಿಸಿ ಬಳಸಿಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. Body:KConclusion:K

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.