ETV Bharat / state

ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮೇಘರಾಜ : ವಾಪಸ್​​ ಆದ ಹೆಲಿಕಾಪ್ಟರ್

author img

By

Published : Aug 9, 2019, 8:16 PM IST

ಅಂಕೋಲಾ ಭಾಗಳಲ್ಲಿಯೂ ಗಂಗಾವಳಿ ತುಂಬಿ ಹರಿಯುತ್ತಿದ್ದು, ಅನೇಕರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದು ರಕ್ಷಣೆಗಾಗಿ ತೆರಳಿದ್ದ ಕದಂಬ ನೌಕಾನೆಲೆ ಹೆಲಿಕಾಪ್ಟರ್ ಮೋಡ ಕೆಳಭಾಗದಲ್ಲಿರುವ ಕಾರಣ ಪ್ರದೇಶಗಳನ್ನು ಗುರುತಿಸಲಾಗದೇ ಕೆಲ ಹೊತ್ತು ಹಾರಾಟ ನಡೆಸಿ ವಾಪಸ್​​​ ಆಗಿದೆ.

ಕದಂಬ ನೌಕಾನೆಲೆ

ಕಾರವಾರ : ಜಿಲ್ಲೆಯ ಅಂಕೋಲಾ ರಾಮನಗುಳಿ ಸೇರಿದಂತೆ ಕೆಲ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡವರಿಗೆ ಆಹಾರ, ಔಷಧಗಳನ್ನು ಪೂರೈಕೆ ಮಾಡಲು ತೆರಳಿದ್ದ ನೌಕಾನೆಲೆಯ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ವಾಪಸ್​ ಆಗಿದೆ.

ಭಾರಿ ಮಳೆಯಿಂದಾಗಿ ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುತ್ತಿದ್ದು, ಜಿಲ್ಲೆಯ ಕರಾವಳಿ ನದಿಯಂಚಿನ ಭಾಗಗಳು ಮುಳುಗಡೆಯಾಗಿವೆ. ಅಂಕೋಲಾ ಭಾಗಳಲ್ಲಿಯೂ ಗಂಗಾವಳಿ ತುಂಬಿ ಹರಿಯುತ್ತಿದ್ದು, ಅನೇಕರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿರುವವರನ್ನು ರಕ್ಷಣೆ ಮಾಡಲು ಮತ್ತು ಅವರಿಗೆ ತುರ್ತಾಗಿ ಆಹಾರ, ಔಷಧ, ನೀರು ಬಟ್ಟೆಗಳನ್ನು ಪೂರೈಸಲು ಕಾರವಾರ ಜಿಲ್ಲಾಡಳಿತ ನೌಕಾನೆಲೆಯ ಹೆಲಿಕಾಪ್ಟರ್ ಸಹಾಯ ಕೇಳಿತ್ತು.

ಅದರಂತೆ ಇಲ್ಲಿನ ಕದಂಬ ನೌಕಾನೆಲೆಯಿಂದ ಹೊರಟ ಹೆಲಿಕಾಪ್ಟರ್ ಅಂಕೋಲಾ, ಕುಮಟಾ ಹಾಗೂ ಕಾರವಾರದ ಕೆಲವು ಭಾಗಗಳ ಸಂತ್ರಸ್ತರಿಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಿತ್ತಾದರೂ ಮೋಡ ಕೆಳಭಾಗದಲ್ಲಿರುವ ಕಾರಣ ಪ್ರದೇಶಗಳನ್ನು ಗುರುತಿಸಲಾಗದೇ ಕೆಲ ಹೊತ್ತು ಹಾರಾಟ ನಡೆಸಿ ವಾಪಸ್​​​ ಆಗಿದೆ. ಇದರಿಂದ ಹೆಲಿಕಾಪ್ಟರ್ ಮೂಲಕ ಕೊಂಡೊಯ್ದ ಆಹಾರ ಪೊಟ್ಟಣ ಹಾಗೂ ಇತರ ವಸ್ತುಗಳನ್ನು ವಾಪಸ್​​ ತಂದು ಹೆಲಿಕಾಪ್ಟರ್ ನಿಂದ ಹೊರಗಿಳಿಸಿ ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆದರೆ ಜನರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವ ಜಿಲ್ಲಾಡಳಿತ ಕೆಲವೆಡೆ ಬೋಟ್ ಮೂಲಕ ಆಹಾರ ಪೊಟ್ಟಣಗಳನ್ನು ಕಳುಹಿಸಲು ಪ್ರಯತ್ನ ಮುಂದುವರಿಸಿದೆ.

ಕಾರವಾರ : ಜಿಲ್ಲೆಯ ಅಂಕೋಲಾ ರಾಮನಗುಳಿ ಸೇರಿದಂತೆ ಕೆಲ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡವರಿಗೆ ಆಹಾರ, ಔಷಧಗಳನ್ನು ಪೂರೈಕೆ ಮಾಡಲು ತೆರಳಿದ್ದ ನೌಕಾನೆಲೆಯ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ವಾಪಸ್​ ಆಗಿದೆ.

ಭಾರಿ ಮಳೆಯಿಂದಾಗಿ ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುತ್ತಿದ್ದು, ಜಿಲ್ಲೆಯ ಕರಾವಳಿ ನದಿಯಂಚಿನ ಭಾಗಗಳು ಮುಳುಗಡೆಯಾಗಿವೆ. ಅಂಕೋಲಾ ಭಾಗಳಲ್ಲಿಯೂ ಗಂಗಾವಳಿ ತುಂಬಿ ಹರಿಯುತ್ತಿದ್ದು, ಅನೇಕರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿರುವವರನ್ನು ರಕ್ಷಣೆ ಮಾಡಲು ಮತ್ತು ಅವರಿಗೆ ತುರ್ತಾಗಿ ಆಹಾರ, ಔಷಧ, ನೀರು ಬಟ್ಟೆಗಳನ್ನು ಪೂರೈಸಲು ಕಾರವಾರ ಜಿಲ್ಲಾಡಳಿತ ನೌಕಾನೆಲೆಯ ಹೆಲಿಕಾಪ್ಟರ್ ಸಹಾಯ ಕೇಳಿತ್ತು.

ಅದರಂತೆ ಇಲ್ಲಿನ ಕದಂಬ ನೌಕಾನೆಲೆಯಿಂದ ಹೊರಟ ಹೆಲಿಕಾಪ್ಟರ್ ಅಂಕೋಲಾ, ಕುಮಟಾ ಹಾಗೂ ಕಾರವಾರದ ಕೆಲವು ಭಾಗಗಳ ಸಂತ್ರಸ್ತರಿಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಿತ್ತಾದರೂ ಮೋಡ ಕೆಳಭಾಗದಲ್ಲಿರುವ ಕಾರಣ ಪ್ರದೇಶಗಳನ್ನು ಗುರುತಿಸಲಾಗದೇ ಕೆಲ ಹೊತ್ತು ಹಾರಾಟ ನಡೆಸಿ ವಾಪಸ್​​​ ಆಗಿದೆ. ಇದರಿಂದ ಹೆಲಿಕಾಪ್ಟರ್ ಮೂಲಕ ಕೊಂಡೊಯ್ದ ಆಹಾರ ಪೊಟ್ಟಣ ಹಾಗೂ ಇತರ ವಸ್ತುಗಳನ್ನು ವಾಪಸ್​​ ತಂದು ಹೆಲಿಕಾಪ್ಟರ್ ನಿಂದ ಹೊರಗಿಳಿಸಿ ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆದರೆ ಜನರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವ ಜಿಲ್ಲಾಡಳಿತ ಕೆಲವೆಡೆ ಬೋಟ್ ಮೂಲಕ ಆಹಾರ ಪೊಟ್ಟಣಗಳನ್ನು ಕಳುಹಿಸಲು ಪ್ರಯತ್ನ ಮುಂದುವರಿಸಿದೆ.

Intro:Body:ಹೆಲಿಕಾಪ್ಟರ್ ಬಳಸಿದರೂ ಸಂತ್ರಸ್ತರಿಗೆ ಸಿಗದ ಆಹಾರ..!

ಕಾರವಾರ: ಜಿಲ್ಲೆಯ ಅಂಕೋಲಾ ರಾಮನಗುಳಿ ಸೇರಿದಂತೆ ಕೆಲ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡವರಿಗೆ ಆಹಾರ, ಔಷಧಿಗಳನ್ನು ಪೂರೈಕೆ ಮಾಡಲು ತೆರಳಿದ್ದ ನೌಕಾನೆಲೆಯ ಹೆಲಿಕಾಪ್ಟರ್ ಹವಮಾನ ವೈಪರಿತ್ಯದಿಂದಾಗಿ ವಾಪಸ್ಸಾಗಿದೆ.
ಭಾರಿ ಮಳೆಯಿಂದಾಗಿ ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುತ್ತಿದ್ದು ಜಿಲ್ಲೆಯ ಕರಾವಳಿಯ ನದಿಯಂಚಿನ ಭಾಗಳು ಮುಳುಗಡೆಯಾಗಿವೆ. ಅಂಕೋಲಾ ಭಾಗಳಲ್ಲಿಯೂ ಗಂಗಾವಳಿ ತುಂಬಿ ಹರಿಯುತ್ತಿದ್ದು ಅನೇಕರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿರುವವರನ್ನು ರಕ್ಷಣೆ ಮಾಡಲು ಮತ್ತು ಅವರಿಗೆ ತುರ್ತಾಗಿ ಆಹಾರ, ಔಷಧಿ, ನೀರು ಬಟ್ಟೆಗಳನ್ನು ಪೂರೈಸಲು ಜಿಲ್ಲಾಡಳಿತ ನೌಕಾನೆಲೆಯ ಹೆಲಿಕಾಪ್ಟರ್ ಸಹಾಯ ಕೇಳಿತ್ತು. ಅದರಂತೆ ಇಲ್ಲಿನ ಕದಂಬ ನೌಕಾನೆಲೆಯಿಂದ ಹೊರಟ ಹೆಲಿಕಾಪ್ಟರ್ ಅಂಕೋಲಾ, ಕುಮಟಾ ಹಾಗೂ ಕಾರವಾರ ಕೆಲವು ಭಾಗಗಳಿಗೆ ಸಂತ್ರಸ್ಥರಿಗೆ ತಲುಪಿಸಲು ಪ್ರಯತ್ನ ನಡೆಸಿತ್ತಾದರು ಮೋಡ ಕೆಳಭಾಗದಲ್ಲಿರುವ ಕಾರಣ ಪ್ರದೇಶಗಳನ್ನು ಗುರುತಿಸಲಾಗದೇ ಕೆಲ ಹೊತ್ತು ಹಾರಾಟ ನಡೆಸಿ ವಾಪಸ್ಸಾಗಿದೆ.
ಇದರಿಂದ ಹೆಲಿಕಾಪ್ಟರ್ ಮೂಲಕ ಕೊಂಡೊಯ್ದ ಆಹಾರ ಪೊಟ್ಟಣ ಹಾಗೂ ಇತರ ವಸ್ತುಗಳನ್ನು ವಾಪಸ್ಸ್ ತಂದು ಹೆಲಿಕಾಪ್ಟರ್ ನಿಂದ ಹೊರಗಿಳಿಸಿ ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ.
ಆದರೆ ಜನರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವ ಜಿಲ್ಲಾಡಳಿತ ಕೆಲವೆಡೆ ಇದೀಗ ಬೋಟ್ ಮೂಲಕ ಆಹಾರ ಪೊಟ್ಟಣಗಳನ್ನು ಕಳುಹಿಸಲು ಪ್ರಯತ್ನ ಮುಂದುವರಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.