ETV Bharat / state

ಹುಲಿ ದಾಳಿಗೆ ಸತ್ತ ಕರು, ವ್ಯಾಘ್ರಗಳ ಗೋಚರಕ್ಕೆ ಭಯಭೀತವಾದ ಗ್ರಾಮ...! - ಹುಲಿ, ಚಿರತೆಗಳ ಗೋಚರದಿಂದ ಭಯಭೀತರಾದ ಭಟ್ಕಳ ಜನರು

ಮೇಯಲು ಹೋದ ಕರುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದಿರುವ ಘಟನೆ ಭಟ್ಕಳದ ಹೆರೂರಿನ ಸೇತುವೆ ಬಳಿ ನಡೆದಿದೆ.

dead-calf-for-tiger-attack-in-bhatkala
ಹುಲಿ ದಾಳಿಗೆ ಸತ್ತ ಕರು
author img

By

Published : Nov 29, 2019, 5:12 AM IST

ಭಟ್ಕಳ: ಮನೆಯ ಕೊಟ್ಟಿಗೆಯಿಂದ ಮೇಯಲು ಹೋದ ಕರುವೊಂದರ ಮೇಲೆ ಹುಲಿಯೊಂದು ಏಕಾಏಕಿ ದಾಳಿ ನಡೆಸಿ ಸಾಯಿಸಿರುವ ಘಟನೆ ಬುಧವಾರ ತಡರಾತ್ರಿ ಭಟ್ಕಳದ ಹೆರೂರಿನ ಸೇತುವೆಯ ಬಳಿ ಬೆಳಕಿಗೆ ಬಂದಿದೆ.

ಹುಲಿ ದಾಳಿಗೆ ಸತ್ತ ಕರು, ವ್ಯಾಘ್ರಗಳ ಗೋಚರದಿಂದ ಭಯಭೀತರಾದ್ರು ಊರಮಂದಿ

ಸಾವನ್ನಪ್ಪಿದ ಕರು ಹೆರೂರಿನ ಗಣೇಶ ಹೆಬ್ಬಾರ್ ಎಂಬುವವರ ಮನೆಯವರದ್ದು ಎಂದು ತಿಳಿದು ಬಂದಿದೆ. ಬುಧವಾರ ಬೆಳಿಗ್ಗೆ ಮೇವಿಗೆ ಬಿಟ್ಟಿದ್ದ ಕರು ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿಲ್ಲವಾಗಿದ್ದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಮುಂಜಾನೆ ಕರು ಸತ್ತು ಬಿದ್ದಿರುವುದನ್ನು ಅಕ್ಕಪಕ್ಕದ ಮನೆಯವರು ತಿಳಿಸಿದ್ದು, ಹುಲಿ ದಾಳಿಯ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಪಟ್ಟ ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪಶು ವೈದ್ಯ ಡಾ. ಮಿಥುನ ಹಾಗೂ ಸಿಬ್ಬಂದಿಗಳು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ: ಕೋಣಾರ ವ್ಯಾಪ್ತಿಯಲ್ಲಿ ಈಗಾಗಲೇ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡು ಹಂದಿ, ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯೂ ಹೆಚ್ಚಿನ ನಿಗಾ ಇಡಬೇಕಾಗಿದೆ. ಕಾಡು ಪ್ರಾಣಿಗಳಿಂದ ಹೈನುಗಾರಿಕೆ, ಕೃಷಿ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ದುಸ್ಥರವಾಗಿದೆ.

ಭಟ್ಕಳ: ಮನೆಯ ಕೊಟ್ಟಿಗೆಯಿಂದ ಮೇಯಲು ಹೋದ ಕರುವೊಂದರ ಮೇಲೆ ಹುಲಿಯೊಂದು ಏಕಾಏಕಿ ದಾಳಿ ನಡೆಸಿ ಸಾಯಿಸಿರುವ ಘಟನೆ ಬುಧವಾರ ತಡರಾತ್ರಿ ಭಟ್ಕಳದ ಹೆರೂರಿನ ಸೇತುವೆಯ ಬಳಿ ಬೆಳಕಿಗೆ ಬಂದಿದೆ.

ಹುಲಿ ದಾಳಿಗೆ ಸತ್ತ ಕರು, ವ್ಯಾಘ್ರಗಳ ಗೋಚರದಿಂದ ಭಯಭೀತರಾದ್ರು ಊರಮಂದಿ

ಸಾವನ್ನಪ್ಪಿದ ಕರು ಹೆರೂರಿನ ಗಣೇಶ ಹೆಬ್ಬಾರ್ ಎಂಬುವವರ ಮನೆಯವರದ್ದು ಎಂದು ತಿಳಿದು ಬಂದಿದೆ. ಬುಧವಾರ ಬೆಳಿಗ್ಗೆ ಮೇವಿಗೆ ಬಿಟ್ಟಿದ್ದ ಕರು ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿಲ್ಲವಾಗಿದ್ದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಮುಂಜಾನೆ ಕರು ಸತ್ತು ಬಿದ್ದಿರುವುದನ್ನು ಅಕ್ಕಪಕ್ಕದ ಮನೆಯವರು ತಿಳಿಸಿದ್ದು, ಹುಲಿ ದಾಳಿಯ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಪಟ್ಟ ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪಶು ವೈದ್ಯ ಡಾ. ಮಿಥುನ ಹಾಗೂ ಸಿಬ್ಬಂದಿಗಳು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ: ಕೋಣಾರ ವ್ಯಾಪ್ತಿಯಲ್ಲಿ ಈಗಾಗಲೇ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡು ಹಂದಿ, ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯೂ ಹೆಚ್ಚಿನ ನಿಗಾ ಇಡಬೇಕಾಗಿದೆ. ಕಾಡು ಪ್ರಾಣಿಗಳಿಂದ ಹೈನುಗಾರಿಕೆ, ಕೃಷಿ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ದುಸ್ಥರವಾಗಿದೆ.

Intro:ಭಟ್ಕಳ: ಮನೆಯ ಕೊಟ್ಟಿಗೆಯಿಂದ ಮೇವಲು ಹೋದ ಕರುವೊಂದರ ಮೇಲೆ ಹುಲಿಯೂ ಏಕಾಏಕಿ ದಾಳಿ ನಡೆಸಿ ಸಾಯಿಸಿರುವ ಘಟನೆಯೂ ಬುಧವಾರದಂದು ತಡರಾತ್ರಿ ಭಟ್ಕಳದ ಹೆರೂರಿನ ಸೇತುವೆಯ ಬಳಿ ರಕ್ತಸಿತ್ತವಾಗಿದ್ದ ವರದಿಯಾಗಿರುವದು ತಡವಾಗಿ ಬೆಳಕಿಗೆ ಬಂದಿದೆ.Body:ಸಾವನ್ನಪ್ಪಿದ ಕರು ಹೆರೂರಿನ ಗಣೇಶ ಹೆಬ್ಬಾರ ಎಂಬುವವರ ಮನೆಯವರದ್ದು ಎಂದು ತಿಳಿದು ಬಂದಿದೆ. ಬುಧವಾರದಂದು ಬೆಳಿಗ್ಗೆ ಮೇವಿಗೆ ಬಿಟ್ಟಿದ್ದ ಕರು ರಾತ್ರಿಯಾದರು ಮನೆಗೆ ವಾಪಸ್ಸು ಬಂದಿಲ್ಲವಾಗಿದ್ದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿ ರಾತ್ರಿಯಾದ ಹಿನ್ನೆಲೆ ಮನೆಗೆ ವಾಪಸ್ಸು ತೆರಳಿದ್ದಾರೆ. ಮುಂಜಾನೆ ಕರು ಸತ್ತು ಬಿದ್ದ ಸ್ಥಳದ ಅಕ್ಕಪಕ್ಕದ ಮನೆಯವರು ಕರುವಿನ ಮೇಲೆ ಹುಲಿಯೇ ದಾಳಿ ಮಾಡಿರಬಹುದೆಂದು ಮನೆ ಮಂದಿಗೆ ತಿಳಿಸಿದ್ದಾರೆ.



ಈ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಪಟ್ಟ ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಹಾಗೂ ಸ್ಥಳಕ್ಕೆ ಬಂದ ಪಶು ವೈದ್ಯ ಡಾ. ಮಿಥುನ ಹಾಗೂ ಸಿಬ್ಬಂದಿಗಳು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಹುಲಿ, ಚಿರತೆಯ ಓಡಾಟ: ಇಲ್ಲಿನ ಮಾರುಕೇರಿ, ಕೋಣಾರ ವ್ಯಾಪ್ತಿಯೂ ದಟ್ಟ ಕಾಡು ಪ್ರದೇಶವಿದ್ದ ಹಿನ್ನೆಲೆ ಕೆಲವೊಮ್ಮೆ ಹುಲಿ ಚಿರತೆಗಳು ಆಗಾಗ ಜನರಿಗೆ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿರುವ ಬಗ್ಗೆ ಕೇಳಿ ಬಂದಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿನ ಕೋಣಾರ ವ್ಯಾಪ್ತಿಯ ದೇವಸ್ಥಾನದ ಬಳಿ ಸಾಕಷ್ಟು ಜನರಿಗೆ ಚಿರತೆ ಇರುವದು ಕಂಡು ಬಂದಿದ್ದು, ಇನ್ನು ಕೋಣಾರ ಬಿಟ್ರುಬೈಲು ಎಂಬಲ್ಲಿ ಮನೆಯ ಪಕ್ಕದ ಕೊಟ್ಟಿಗೆಯೊಳಗೆ ಹುಲಿ ನುಗ್ಗಿ ದನದ ಮೇಲೆ ದಾಳಿ ನಡೆಸಿ ಸಾಯಿಸಿದೆ ಎಂಬ ಮಾತುಗಳು ಈಗ ಒಂದೊಂದಾಗಿ ಕೇಳಿ ಬರುತ್ತಿದೆ.



ಕಾಡು ಪ್ರಾಣಿಗಳ ಹಾವಳಿ: ಕೋಣಾರ ವ್ಯಾಪ್ತಿಯಲ್ಲಿ ಈಗಾಗಲೇ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡು ಹಂದಿ, ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯೂ ಹೆಚ್ಚಿನ ನಿಗಾ ಇಡಬೇಕಾಗಿದೆ. ಕಾಡು ಪ್ರಾಣಿಗಳಿಂದ ಹೈನುಗಾರಿಕೆ, ಕೃಷಿ ನಂಬಿಕೊಂಡು ಜೀವನ ನಡೆಸುವವರಿಗೆ ದುಸ್ಥರವಾಗಿದೆ. ಈ ರೀತಿ ಜಾನುವಾರುಗಳ ಮೇಲೆ ದಾಳಿಯಾದಲ್ಲಿ ರೈತಾಪಿ, ಕೃಷಿಕರು ಜೀವನ ನಡೆಸುವುದಾದರು ಹೇಗೆ ಎಂಬುದು ಕೃಷಿಕರ ಪ್ರಶ್ನೆಯಾಗಿದೆ.



 ಡಾ.ಮಿಥುನ- ಪಶು ವೈದ್ಯಾಧಿಕಾರಿ ಮಾತನಾಡಿ ‘ಕರುವಿನ ಮರಣೋತ್ತರ ಪರೀಕ್ಷೆಯಿಂದ ದಾಳಿಯೂ ಹುಲಿ, ಚಿರತೆ ಅಥವಾ ಇನ್ಯಾವುದೇ ಕಾಡು ಪ್ರಾಣಿಯೋ ಎಂಬುದು ಇನ್ನಷ್ಟೇ ಸಾಬೀತಾಗಬೇಕಿದ್ದು, ಮೇಲ್ನೋಟಕ್ಕೆ ನಿಖರವಾಗಿ ಯಾವ ಪ್ರಾಣಿಯ ದಾಳಿ ಎಂದು ಹೇಳುವುದು ಕಷ್ಟ ಸಾಧ್ಯವಾಗಿದೆ. ಭೀಕರವಾಗಿ ಕರುವಿನ ಹಿಂಬದಿಯ ತೊಡೆ ಭಾಗಕ್ಕೆ ದಾಳಿ ಮಾಡಿದ್ದ ಪ್ರಾಣಿಯೂ ತೀವ್ರ ರಕ್ತಸಿತ್ತವಾಗಿರುವದು ಕಂಡು ಬಂದಿದೆ. ಕರುವಿನ ಮಾಲೀಕರಿಗೆ ಸರಕಾರದಿಂದ ಏನಾದರು ಪರಿಹಾರ ಸಿಗಲಿದ್ದಲ್ಲಿ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿದ್ದೇವೆ’





‘ರಾತ್ರಿ ಕರುವಿನ ದಾಳಿಯಾಗಿರುವದು ಮಾರನೇ ದಿನ ಮುಂಜಾನೆ ತಿಳಿದು ಬಂದಿದೆ. ಈ ಹಿಂದೆಯೂ ಇದೇ ರೀತಿ ದಾಳಿ ಆಗಿದ್ದು ನಮಗೆ ಬದುಕು ಸಾಗಿಸುವುದು ಕಷ್ಟವಾಗಿದೆ. ಕಳೆದ 4 ವರ್ಷದ ಹಿಂದೆ ಕಾಡು ಪ್ರಾಣಿಗಳ ದಾಳಿ ಇದ್ದರು ಯಾವುದೇ ಸಮಸ್ಯೆ ಅಥವಾ ಭಯದ ಸ್ಥಿತಿ ಇಲ್ಲವಾಗಿತ್ತು. ಆದರೆ ಇತ್ತೀಚಿಗೆ ಪ್ರಾಣಿಗಳ ಓಡಾಟ ಮನೆಯವರೆಗೆ ಬಂದಿದ್ದು ಮನೆ ಮಂದಿಯವರೆಲ್ಲ ದಾಳಿಯಿಂದ ತಪ್ಪಿಸಿಕೊಳ್ಳುವುದು ಭಯವಾಗಿದೆ.’



ಬೈಟ್ 1: ಗಣೇಶ ಹೆಬ್ಬಾರ- ಸತ್ತ ಕರುವಿನ ಮಾಲೀಕರು.(ಬಿಳಿ ಕೂದಳು. ಬಿಳಿ ಮೀಸೆ



ಬೈಟ್ 2: ಹರೀಶ ಹೆಬ್ಬಾರ್(ಕೆಂಪು ಬಣ್ಣದ ಶರ್ಟ್)

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.