ಭಟ್ಕಳ: ಹಳೆ ಬಸ್ ನಿಲ್ದಾಣದ ಸಮೀಪದ ಹಳೆಯ ನಾಗಬನ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಅನ್ಯಕೋಮಿನವರ ತಕರಾರಿತ್ತು. ಹಾಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯವನ್ನು ಕೊನೆಗೂ ಪೂರ್ಣಗೊಳಿಸಲಾಯಿತು.
ತಾಲೂಕಿನಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿರುವ ನಾಗಬನದ ತಡೆಗೋಡೆ ನಿರ್ಮಾಣ ಮಾಡುವ ವಿಷಯದಲ್ಲಿ ಶುಕ್ರವಾರ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದವು. ತಾಲೂಕಾಡಳಿತ, ಪೊಲೀಸ್ ಇಲಾಖೆ, ಶಾಸಕ ಸುನೀಲ ನಾಯ್ಕ ಹಾಗೂ ತಂಜೀಮ್ ಮುಖಂಡರನ್ನು ಒಳಗೊಂಡಂತೆ ಸಭೆ ಕರೆದು ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇಷ್ಟಕ್ಕೆ ಈ ವಿಚಾರ ಮುಗಿಯದೆ ತಾಲೂಕಾಡಳಿತ, ಪೊಲೀಸ್ ಇಲಾಖೆ ರಾತ್ರಿ 10.30ರ ಸುಮಾರಿಗೆ ಮತ್ತೆ ತಂಜೀಮ್ ಮುಖಂಡರೊಂದಿಗೆ ಸಭೆ, ಮಾತುಕತೆ ನಡೆಸಿ ಕಾಂಪೌಂಡ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಶನಿವಾರದಂದು ಮುಂಜಾನೆಯಿಂದ ಕಾಮಗಾರಿ ಆರಂಭಿಸಲಾಯಿತು.
10-12 ಮಂದಿ ಕೆಲಸಗಾರೊಂದಿಗೆ ಕೆಲಸ ಆರಂಭಗೊಂಡಿದ್ದು, ರಾತ್ರಿ ಕಾಮಗಾರಿ ಪೂರ್ಣವಾಯಿತು.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಚಿಣ್ಣರಿಗೆ ವಿಶೇಷ ಮಾದರಿಯ ಶಿಕ್ಷಣ: ಇಡೀ ಗ್ರಾಮವೇ ಪಾಠಶಾಲೆ, ಮನೆಗೋಡೆಗಳೇ ಕಪ್ಪುಹಲಗೆ