ETV Bharat / state

ನಿಂತಿದ್ದ ಆಟೋ,ಬೈಕ್​​ಗೆ ಗುದ್ದಿದ ಕಾರು: ಕಾರು ಚಾಲಕನ ಪರಿಸ್ಥಿತಿ ಹೇಗಿತ್ತು ಗೊತ್ತೇ? - Auto driver save

ಭಟ್ಕಳದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತಿದ್ದ ಆಟೋ, ಬೈಕ್​​ಗೆ ಕಾರೊಂದು ಡಿಕ್ಕಿ ಹೊಡೆದಿದೆ.

Auto, bike met an accident
ಸಿ.ಸಿ.ಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ
author img

By

Published : Dec 4, 2019, 7:58 PM IST

ಭಟ್ಕಳ: ತಾಲೂಕಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತಿದ್ದ ಆಟೋ, ಬೈಕ್​​ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಆಟೋ ಚಾಲಕ ದೇವೇಂದ್ರ ನಾಯ್ಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಬಾಡಿಗೆಗಾಗಿ ಕಾಯುತ್ತಾ ಆಟೋದಲ್ಲಿ ಕುಳಿತಿದ್ದ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಕಾರೊಂದು ಚಲಿಸುತ್ತಿತ್ತು. ಈ ವೇಳೆ ಕಾರು ಏಕಾಏಕಿ ಆಟೋಗೆ ಡಿಕ್ಕಿ ಹೊಡೆದಿದೆ.

ಸಿ.ಸಿ.ಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ

ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಕಾರನ್ನು ಪಕ್ಕಕ್ಕೆ ತಳ್ಳಿ ಆಟೋ ಚಾಲಕನನ್ನು ಸಾರ್ವಜನಿಕರು ಕಾಪಾಡಿದ್ದಾರೆ. ಅದು ಜನನಿಬಿಡ ಪ್ರದೇಶವಾಗಿದ್ದು ಬಸ್​ನಿಲ್ದಾಣದಲ್ಲಿ ಪ್ರಯಾಣಿಕರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟ ಹೆಚ್ಚಿರುತ್ತದೆ. ಕಾರು ಚಾಲಕನಿಗೆ ಪಾರ್ಶ್ವವಾಯು ಉಂಟಾದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದೆ ಎನ್ನಲಾಗ್ತಿದೆ.

ಆಟೋ ಚಾಲಕ ನಗರ ಠಾಣೆ ಮೆಟ್ಟಿಲೇರಿದ್ದಾರೆ. ಬಳಿಕ ಮಾತುಕತೆ ನಡೆಸಿ ಠಾಣೆಯಲ್ಲೇ ರಾಜಿ ಮಾಡಲಾಗಿದೆ. ಕಾರಿನ ಚಾಲಕ ಆಟೋ ಹಾಗೂ ಬೈಕ್​​ಗೆ ಆದ ನಷ್ಟಕ್ಕೆ ಪರಿಹಾರ ನೀಡಿದ್ದಾರೆ.

ಭಟ್ಕಳ: ತಾಲೂಕಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತಿದ್ದ ಆಟೋ, ಬೈಕ್​​ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಆಟೋ ಚಾಲಕ ದೇವೇಂದ್ರ ನಾಯ್ಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಬಾಡಿಗೆಗಾಗಿ ಕಾಯುತ್ತಾ ಆಟೋದಲ್ಲಿ ಕುಳಿತಿದ್ದ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಕಾರೊಂದು ಚಲಿಸುತ್ತಿತ್ತು. ಈ ವೇಳೆ ಕಾರು ಏಕಾಏಕಿ ಆಟೋಗೆ ಡಿಕ್ಕಿ ಹೊಡೆದಿದೆ.

ಸಿ.ಸಿ.ಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ

ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಕಾರನ್ನು ಪಕ್ಕಕ್ಕೆ ತಳ್ಳಿ ಆಟೋ ಚಾಲಕನನ್ನು ಸಾರ್ವಜನಿಕರು ಕಾಪಾಡಿದ್ದಾರೆ. ಅದು ಜನನಿಬಿಡ ಪ್ರದೇಶವಾಗಿದ್ದು ಬಸ್​ನಿಲ್ದಾಣದಲ್ಲಿ ಪ್ರಯಾಣಿಕರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟ ಹೆಚ್ಚಿರುತ್ತದೆ. ಕಾರು ಚಾಲಕನಿಗೆ ಪಾರ್ಶ್ವವಾಯು ಉಂಟಾದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದೆ ಎನ್ನಲಾಗ್ತಿದೆ.

ಆಟೋ ಚಾಲಕ ನಗರ ಠಾಣೆ ಮೆಟ್ಟಿಲೇರಿದ್ದಾರೆ. ಬಳಿಕ ಮಾತುಕತೆ ನಡೆಸಿ ಠಾಣೆಯಲ್ಲೇ ರಾಜಿ ಮಾಡಲಾಗಿದೆ. ಕಾರಿನ ಚಾಲಕ ಆಟೋ ಹಾಗೂ ಬೈಕ್​​ಗೆ ಆದ ನಷ್ಟಕ್ಕೆ ಪರಿಹಾರ ನೀಡಿದ್ದಾರೆ.

Intro:ಭಟ್ಕಳ: ತಾಲೂಕಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪಕ್ಕದಲ್ಲಿ ಬಾಡಿಗೆಗೆ ನಿಂತಿದ್ದ ಆಟೋ ಮತ್ತು ಬೈಕವೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಆಟೋ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಖಾಸಗಿ ಕಛೇರಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿರುವದು ಎಲ್ಲೆಡೆ ವೈರಲ್ ಆಗಿದೆ.

Body:ಆಟೋ ಚಾಲಕ ದೇವೇಂದ್ರ ನಾಯ್ಕ ಎನ್ನುವವರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪಕ್ಕದಲ್ಲಿ ಬಾಡಿಗೆಗಾಗಿ ಕಾದು ತನ್ನ ಆಟೋದಲ್ಲಿ ಕುಳಿತಿದ್ದ ಸಂಧರ್ಭದಲ್ಲಿ ಹೆದ್ದಾರಿಯಲ್ಲಿ ಕಾರವಾರ ಕಡೆಯಿಂದ ಮಂಗಳುರು ಕಡೆಗೆ ಹೋಗುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಕಾರೊಂದು ಧಿಡೀರ್ ನಿಂತಿದ್ದ ಆಟೋಗೆ ಬಂದು ವೇಗದಲ್ಲಿ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾಗಿದೆ.





ತಕ್ಷಣಕ್ಕೆ ಸ್ಥಳದಲ್ಲಿನ ಜನರೆಲ್ಲರು ಬಂದು ಢಿಕ್ಕಿ ಹೊಡೆದ ಕಾರನ್ನು ಪಕ್ಕಕ್ಕೆ ಹಾಕಿ ಆಟೋ ಚಾಲಕನನ್ನು ಕಾಪಾಡಿದ್ದಾರೆ. ತೀರಾ ಜನ ನಿಬಿಡ ಪ್ರದೇಶವಾಗಿದ್ದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದ ವೇಳೆ ಜನರ ಓಡಾಟ ಸರ್ವೇ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹಾಗೂ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಟುವ ಸಮಯವಾಗಿದ್ದು, ಈ ಕಾರು ಅಪಘಾತದಿಂದ ಯಾರಿಗೂ ಸಹ ಅನಾಹುತ ಸಂಭವಿಸಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ.



ಈ ಅಪಘಾತಕ್ಕೆ ಕಾರಣ ಕಾರು ಚಲಾವಣೆ ವೇಳೆ ಕಾರು ಚಾಲಕನಿಗೆ ಪಾಶ್ರ್ವವಾಯು ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಈ ಪ್ರಕರಣವೂ ನಗರ ಠಾಣೆ ಮೆಟ್ಟಿಲೇರಿದ್ದು ಠಾಣೆಯಲ್ಲಿ ಸಾಕಷ್ಟು ಮಾತು ಕಥೆಯ ಬಳಿಕ ಪ್ರಕರಣ ರಾಜಿಯಲ್ಲಿ ಅಂತ್ಯಗೊಂಡಿದೆ. ಅಪಘಾತ ಮಾಡಿದ ಕಾರು ಚಾಲಕನು ಅಪಘಾತದಲ್ಲಿ ಹಾನಿಗೊಳಗಾದ ಆಟೋ ಹಾಗೂ ಬೈಕಗೆ ಆದ ನಷ್ಟ ಪರಿಹಾರ ಮೊತ್ತವನ್ನು ನೀಡಿದರು.



ಕಾರು ಚಾಲಕನ ತಪ್ಪಿಲ್ಲ: ಕೆಲವೊಂದು ಕಡೆ ಪಾದಚಾರಿಗಳ ಮೇಲೆ ಕಾರು ಸೇರಿದಂತೆ ದೊಡ್ಡ ವಾಹನಗಳು ನಿಯಂತ್ರಣ ತಪ್ಪಿ ಹರಿಹಾಯ್ದಿರುವ ಘಟನೆಗಳು ನಡೆದಿದ್ದು, ಇನ್ನು ಕೆಲವೊಂದು ಕಡೆ ಮೋಜು ಮಸ್ತಿ ಮಾಡುವ ಸಾಹಸಕ್ಕೆ ಹೋಗಿ ಜನರ ಜೀವಕ್ಕೆ ಕುತ್ತು ತಂದಿರುವ ಉದಾಹರಣೆ ಸಹ ಉಂಟು. ಈ ಪ್ರಕರಣದಲ್ಲಿ ಕಾರು ಚಾಲಕನಿಗೆ ಹತಾತ್ ಪಾಶ್ರ್ವವಾಯು(ಪೀಟ್ಸ)ಕ್ಕೆ ಒಳಗಾಗಿದ್ದ ಹಿನ್ನೆಲೆ ಕಾರು ನಿಯಂತ್ರಣಕ್ಕೆ ತರಲು ಆಗದೇ ಆಟೋ ರಿಕ್ಷಾ, ಬೈಕಗೆ ಗುದ್ದಿದ್ದಾರೆ. ಘಟನೆಯಲ್ಲಿ ಕಾರು ಅಪಘಾತವಾಗಿದ್ದರು ಅದೃಷ್ಠಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸದಿರುವದರಿಂದ ಕಾರು ಚಾಲಕನ ಸ್ಥಿತಿಯ ಬಗ್ಗೆ ಮಾನವೀಯತೆಯ ದೃಷ್ಠಿಯಿಂದ ಸಾರ್ವಜನಿಕರು ಮರುಗಿದರು..

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.