ETV Bharat / state

ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ನೀಡಲು ಅನಂತ್​ಕುಮಾರ್ ಹೆಗಡೆ ಋಣ ಕೇಳಿದ್ದರು: ಗಜಾನನ ನಾಯ್ಕ - undefined

ಮೂರ್ನಾಲ್ಕು ದಶಕಗಳ ಕಾಲ ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದ ಕೇಂದ್ರ ಸರ್ಕಾರ, ಕೊನೆಗೂ ವರ್ಷದ ಹಿಂದೆ ಪರಿಹಾರ ನೀಡಿದೆ. ಈ ಬಗ್ಗೆ ಈಗ ಹೊಸ ವಿಚಾರವೊಂದು ಬೆಳಕಿಗೆ ಬಂದಿದ್ದು, ಸೀಬರ್ಡ್ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ವಿ ನಾಯ್ಕ, ಪತ್ರಿಕಾಗೋಷ್ಟಿಯಲ್ಲಿ ವಿಚಾರವೊಂದನ್ನ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಜಾನನ ವಿ ನಾಯ್ಕ
author img

By

Published : Apr 20, 2019, 6:08 AM IST

ಕಾರವಾರ: ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಸಂಸದ ಅನಂತ್​ಕುಮಾರ್ ಹೆಗಡೆಯನ್ನು ಭೇಟಿ ಮಾಡಿದ ನಿರಾಶ್ರಿತ ಸಂಘಟನೆಯವರ ಬಳಿ, ಅನಂತ್​ಕುಮಾರ್ ಋಣ ಕೇಳಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೀಬರ್ಡ್ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ವಿ ನಾಯ್ಕ, ಸೀಬರ್ಡ್ ನಿರಾಶ್ರಿತರಿಗೆ 28ಎ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿತ್ತು. ಆದರೆ ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದರೂ ಸಾಧ್ಯವಾಗದೆ ಅರ್ಜಿಗಳು ವಾಪಸಾಗುತ್ತಿದ್ದವು. ಈ ವೇಳೆ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್ ಹೆಗಡೆ ಬಳಿ ತೆರಳಿ ಸೀಬರ್ಟ್ ಪರಿಹಾರ ಬಾರದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ತಿಳಿಸಿದ್ದೆವು. ಅಲ್ಲದೆ ರಕ್ಷಣಾ ಇಲಾಖೆಗೆ ಈ ಬಗ್ಗೆ ತಿಳಿಸಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದೆವು. ಈ ವೇಳೆ ಸಚಿವರು ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ ಪರಿಹಾರ ಒದಗಿಸಿಕೊಡುತ್ತೇವೆ. ಇದಕ್ಕೆ ನಮಗೆ ಯಾವ ರೀತಿ ಋಣ ತೀರಿಸುತ್ತೀರಿ ಎಂದು ಕೇಳಿದ್ದರು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಜಾನನ ವಿ ನಾಯ್ಕ

ನಾವು ಪರಿಹಾರ ದೊರೆತಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ, ಅವರ ಪರವಾಗಿ ನಿರಾಶ್ರಿತರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿದ್ದೆವು. ಇದಕ್ಕೆ ಒಪ್ಪಿದ ಅವರು ಪರಿಹಾರ ಒದಗಿಸಿಕೊಟ್ಟಿದ್ದಾರೆ. ನಾವು ಕೂಡ ಕಳೆದ ಬಾರಿ ಬಿಜೆಪಿ ಪರ ಪ್ರಚಾರ ನಡೆಸಿದ್ದೇವೆ ಎಂದು ಅವರು ಹೇಳಿದರು.

ಇನ್ನು ಕೆಲ ಪ್ರಕರಣಗಳು ತಾಂತ್ರಿಕ ಕಾರಣದಿಂದ ಬಾಕಿ ಇದ್ದು, ಮೊನ್ನೆ ಕಾರವಾರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹರಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಅವರ ಬಳಿ ನಾವು ನಿರಾಶ್ರಿತ ಕುಟುಂಬಗಳು, ಮನೆಗೊಂದು ನೌಕರಿ ಹಾಗೂ ವೃದ್ಧರಿಗೆ ಪಿಂಚಣಿ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದೇವೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು.

ಕಾರವಾರ: ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಸಂಸದ ಅನಂತ್​ಕುಮಾರ್ ಹೆಗಡೆಯನ್ನು ಭೇಟಿ ಮಾಡಿದ ನಿರಾಶ್ರಿತ ಸಂಘಟನೆಯವರ ಬಳಿ, ಅನಂತ್​ಕುಮಾರ್ ಋಣ ಕೇಳಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೀಬರ್ಡ್ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ವಿ ನಾಯ್ಕ, ಸೀಬರ್ಡ್ ನಿರಾಶ್ರಿತರಿಗೆ 28ಎ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿತ್ತು. ಆದರೆ ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದರೂ ಸಾಧ್ಯವಾಗದೆ ಅರ್ಜಿಗಳು ವಾಪಸಾಗುತ್ತಿದ್ದವು. ಈ ವೇಳೆ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್ ಹೆಗಡೆ ಬಳಿ ತೆರಳಿ ಸೀಬರ್ಟ್ ಪರಿಹಾರ ಬಾರದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ತಿಳಿಸಿದ್ದೆವು. ಅಲ್ಲದೆ ರಕ್ಷಣಾ ಇಲಾಖೆಗೆ ಈ ಬಗ್ಗೆ ತಿಳಿಸಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದೆವು. ಈ ವೇಳೆ ಸಚಿವರು ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ ಪರಿಹಾರ ಒದಗಿಸಿಕೊಡುತ್ತೇವೆ. ಇದಕ್ಕೆ ನಮಗೆ ಯಾವ ರೀತಿ ಋಣ ತೀರಿಸುತ್ತೀರಿ ಎಂದು ಕೇಳಿದ್ದರು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಜಾನನ ವಿ ನಾಯ್ಕ

ನಾವು ಪರಿಹಾರ ದೊರೆತಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ, ಅವರ ಪರವಾಗಿ ನಿರಾಶ್ರಿತರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿದ್ದೆವು. ಇದಕ್ಕೆ ಒಪ್ಪಿದ ಅವರು ಪರಿಹಾರ ಒದಗಿಸಿಕೊಟ್ಟಿದ್ದಾರೆ. ನಾವು ಕೂಡ ಕಳೆದ ಬಾರಿ ಬಿಜೆಪಿ ಪರ ಪ್ರಚಾರ ನಡೆಸಿದ್ದೇವೆ ಎಂದು ಅವರು ಹೇಳಿದರು.

ಇನ್ನು ಕೆಲ ಪ್ರಕರಣಗಳು ತಾಂತ್ರಿಕ ಕಾರಣದಿಂದ ಬಾಕಿ ಇದ್ದು, ಮೊನ್ನೆ ಕಾರವಾರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹರಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಅವರ ಬಳಿ ನಾವು ನಿರಾಶ್ರಿತ ಕುಟುಂಬಗಳು, ಮನೆಗೊಂದು ನೌಕರಿ ಹಾಗೂ ವೃದ್ಧರಿಗೆ ಪಿಂಚಣಿ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದೇವೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು.

Intro:ಸೀಬರ್ಡ್ ಪರಿಹಾರ ಒದಗಿಸಲು ಋಣ ಕೇಳಿದ್ದ ಅನಂತಕುಮಾರ್ ಹೆಗಡೆ...!
ಕಾರವಾರ: ಮೂರ್ನಾಲ್ಕು ದಶಕಗಳ ಕಾಲ ಸೀಬರ್ಡ್ ಹೆಚ್ಚುವರಿ ಪರಿಹಾರ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದ ಕೇಂದ್ರ‌ಸರ್ಕಾರ ಕೊನೆಗೂ ವರ್ಷದ ಹಿಂದೆ ಪರಿಹಾರ ನೀಡಿದೆ. ಆದರೆ ಈ ಪರಿಹಾರ ನೀಡಲು ಸಂಸದ ಅನಂತಕುಮಾರ್ ಹೆಗಡೆ ಭೇಟಿ ಮಾಡಿದ ನಿರಾಶ್ರಿತ ಸಂಘಟನೆಯವರ ಬಳಿ ಋಣ ಕೇಳಿದ್ದರು ಎಂಬ ವಿಷಯ ಇದೀಗ ಬೇಳಕಿಗೆ ಬಂದಿದೆ.
ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೀಬರ್ಡ್ ನಿರಾಶ್ರಿತರ ಹೋರಟ ಸಮಿತಿ ಅಧ್ಯಕ್ಷ ಗಜಾನನ ವಿ ನಾಯ್ಕ, ಸೀಬರ್ಡ್ ನಿರಾಶ್ರಿತರಿಗೆ ೨೮ಅ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಮೀನಮೇಷ ಎಣಿಸುತಿತ್ತು. ಆದರೆ ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದರು ಸಾಧ್ಯವಾಗದೆ ಅರ್ಜಿಗಳು ವಾಪಸ್ಸ್ ಆಗುತ್ತಿದ್ದವು. ಈ ವೇಳೆ ಸಂಸದರು ಹಾಗೂ ಕೇಂದ್ರ ಸಚಿವರು ಆಗಿದ್ದ ಅನಂತಕುಮಾರ್ ಹೆಗಡೆ ಬಳಿ ತೆರಳಿ ಸೀಬರ್ಟ್ ಪರಿಹಾರ ಬಾರದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ತಿಳಿಸಿದ್ದೇವು. ಅಲ್ಲದೆ ರಕ್ಷಣಾ ಇಲಾಖೆಗೆ ಈ ಬಗ್ಗೆ ತಿಳಿಸಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದೇವು ಎಂದು ಹೇಳಿದರು.
ಈ ವೇಳೆ ಸಚಿವರು ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ ಪರಿಹಾರ ಒದಗಿಸಿ ಕೊಡುತ್ತೇವೆ. ಇದಕ್ಕೆ ನಮಗೆ ಯಾವ ರಿತಿ ಋಣ ತೀರಿಸುತ್ತೀರಿ ಎಂದು ಕೇಳಿದ್ದರು. ಅದಕ್ಕೆ ನಾವು ಪರಿಹಾರ ದೊರೆತಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಯಾವುದೇ ಅಭ್ಯರ್ಥಿ ನಿಲ್ಲಿಸಿದರು ಅವರ ಪರವಾಗಿ ನಿರಾಶ್ರಿತರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿದ್ದೇವು. ಇದಕ್ಕೆ ಒಪ್ಪಿದ ಅವರು ಪರಿಹಾರ ಒದಗಿಸಿಕೊಟ್ಟಿದ್ದಾರೆ. ನಾವು ಕೂಡ ಕಳೆದ ಬಾರಿ ಬಿಜೆಪಿ ಪರ ಪ್ರಚಾರ ನಡೆಸಿದ್ದೇವೆ ಎಂದು ಅವರು ಹೇಳಿದರು.
ಇನ್ನು ಕೆಲ ಪ್ರಕರಣಗಳು ತಾಂತ್ರಿಕ ಕಾರಣದಿಂದ ಬಾಕಿ ಇದ್ದು, ಮೊನ್ನೆ ಕಾರವಾರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹರಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಅವರ ಬಳಿ ನಾವು ನಿರಾಶ್ರಿತ ಕುಟುಂಬಗಳ ಮನೆಗೊಂದು ನೌಕರಿ ಹಾಗೂ ವೃದ್ಧರಿಗೆ ಪಿಂಚಣಿ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದು, ಇದಕ್ಕೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನುಬೆಂಬಲಿಸುತ್ತಿರುವುದಾಗಿ ಹೇಳಿದರು.


Body:ಕ


Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.