ETV Bharat / state

ರಾಮನಗರ: ಕೇಬಲ್ ಕಳ್ಳತನ‌ ಮಾಡುತ್ತಿದ್ದ ಗ್ಯಾಂಗ್​ ಅಂದರ್​

ರಾಮನಗರ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಬಳಿಯ ಕೋರ್ ಕೇಬಲ್ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

author img

By

Published : Jun 8, 2021, 1:53 AM IST

6-arrested-in-cable-theft-case-at-ramanagara
ರಾಮನಗರದಲ್ಲಿ ಕೇಬಲ್ ಕಳ್ಳತನ‌ ನಡೆಸುತ್ತಿದ್ದ ಗ್ಯಾಂಗ್​ ಅಂದರ್​

ಕಾರವಾರ: ಕೋರ್ ಕೇಬಲ್ ಕದ್ದು ಸುಟ್ಟು ಅದರಲ್ಲಿನ ತಂದಿ ತೆಗೆಯುತ್ತಿದ್ದ ಗ್ಯಾಂಗ್​ವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಉತ್ತರಕನ್ನಡ ಜಿಲ್ಲೆಯ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.

ರಾಮನಗರ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಬಳಿಯ ಕೋರ್ ಕೇಬಲ್ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ಗೋಕಾಕ್​ದ ರೈಲ್ವೆ ಉದ್ಯೋಗಿ ಯಲ್ಲಪ್ಪ, ದಾಂಡೇಲಿ ಗಾಂಧಿನಗರದ ಅಜಯ್, ಸೋನು, ಜಿತೇಂದ್ರ, ದೀಪಕ್ ಹಾಗೂ ಜಗನು ಎಂಬುವವರನ್ನು ಬಂಧಿಸಿದ್ದಾರೆ. ಸುಮಾರು 15 ಲಕ್ಷ ರೂ. ಮೌಲ್ಯದ ಕೇಬಲ್​ ಕಳ್ಳತನ ಮಾಡಿದ್ದು, ಆರೋಪಿಗಳಿಂದ ಒಟ್ಟು 470 ಕೆ.ಜಿ ಕೇಬಲ್ ಸುಟ್ಟು ತೆಗೆದ ತಾಮ್ರದ ತಂತಿ ವಶಪಡಿಕೊಳ್ಳಲಾಗಿದೆ.

6 arrested in Cable theft case at ramanagara
ಕೇಬಲ್ ಕಳ್ಳತನ‌ ನಡೆಸುತ್ತಿದ್ದ ಗ್ಯಾಂಗ್​ ಅಂದರ್​

ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಡೇಲಿ ಡಿವೈಎಸ್​​ಪಿ ಕೆ.ಎಲ್. ಗಣೇಶ್ ಮಾರ್ಗದರ್ಶನದಲ್ಲಿ ರಾಮನಗರ ಪೊಲೀಸ್ ಠಾಣೆಯ ಪಿಎಸ್​​ಐ ಕಿರಣಕುಮಾರ್​ ಪಾಟೀಲ್ ಹಾಗೂ ಪಿಎಸ್​ಐ ಎಲ್.ಎಲ್ ಪೂಜಾರಿ ಮತ್ತು ಪೊಲೀಸ್ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ: ಕಾಂಗ್ರೆಸ್ ರೈತ ಸಂಜೀವಿನಿ ಆ್ಯಂಬುಲೆನ್ಸ್​ ಸೇವೆಗೆ ಡಿಕೆಶಿ ಚಾಲನೆ

ಕಾರವಾರ: ಕೋರ್ ಕೇಬಲ್ ಕದ್ದು ಸುಟ್ಟು ಅದರಲ್ಲಿನ ತಂದಿ ತೆಗೆಯುತ್ತಿದ್ದ ಗ್ಯಾಂಗ್​ವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಉತ್ತರಕನ್ನಡ ಜಿಲ್ಲೆಯ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.

ರಾಮನಗರ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಬಳಿಯ ಕೋರ್ ಕೇಬಲ್ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ಗೋಕಾಕ್​ದ ರೈಲ್ವೆ ಉದ್ಯೋಗಿ ಯಲ್ಲಪ್ಪ, ದಾಂಡೇಲಿ ಗಾಂಧಿನಗರದ ಅಜಯ್, ಸೋನು, ಜಿತೇಂದ್ರ, ದೀಪಕ್ ಹಾಗೂ ಜಗನು ಎಂಬುವವರನ್ನು ಬಂಧಿಸಿದ್ದಾರೆ. ಸುಮಾರು 15 ಲಕ್ಷ ರೂ. ಮೌಲ್ಯದ ಕೇಬಲ್​ ಕಳ್ಳತನ ಮಾಡಿದ್ದು, ಆರೋಪಿಗಳಿಂದ ಒಟ್ಟು 470 ಕೆ.ಜಿ ಕೇಬಲ್ ಸುಟ್ಟು ತೆಗೆದ ತಾಮ್ರದ ತಂತಿ ವಶಪಡಿಕೊಳ್ಳಲಾಗಿದೆ.

6 arrested in Cable theft case at ramanagara
ಕೇಬಲ್ ಕಳ್ಳತನ‌ ನಡೆಸುತ್ತಿದ್ದ ಗ್ಯಾಂಗ್​ ಅಂದರ್​

ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಡೇಲಿ ಡಿವೈಎಸ್​​ಪಿ ಕೆ.ಎಲ್. ಗಣೇಶ್ ಮಾರ್ಗದರ್ಶನದಲ್ಲಿ ರಾಮನಗರ ಪೊಲೀಸ್ ಠಾಣೆಯ ಪಿಎಸ್​​ಐ ಕಿರಣಕುಮಾರ್​ ಪಾಟೀಲ್ ಹಾಗೂ ಪಿಎಸ್​ಐ ಎಲ್.ಎಲ್ ಪೂಜಾರಿ ಮತ್ತು ಪೊಲೀಸ್ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ: ಕಾಂಗ್ರೆಸ್ ರೈತ ಸಂಜೀವಿನಿ ಆ್ಯಂಬುಲೆನ್ಸ್​ ಸೇವೆಗೆ ಡಿಕೆಶಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.