ETV Bharat / state

'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ'... ಕುಡುಬಿ ಜನಾಂಗದ ಜೊತೆ ದಿನ ಕಳೆದ ಉಡುಪಿ ಡಿಸಿ

ರಾಜ್ಯ ಸರ್ಕಾರ ಆರಂಭಿಸಿರುವ 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ನಾಲ್ಕೂರು ಗ್ರಾಮವನ್ನು ಪೈಲಟ್ ಯೋಜನೆಗೆ ರಾಜ್ಯ ಸರ್ಕಾರ ಆಯ್ದುಕೊಂಡಿದ್ದು, ಜಿಲ್ಲಾಧಿಕಾರಿ ಜಗದೀಶ್ ಸಂಪೂರ್ಣ ದಿನ ಗ್ರಾಮದಲ್ಲಿ ಕುಳಿತು ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಷ್ಟಗಳನ್ನು ಬಗೆಹರಿಸಿದರು. ಡೀಮ್ಡ್ ಫಾರೆಸ್ಟ್ & ಆರ್ಟಿಸಿ -ಪಿಂಚಣಿ ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜಿಲ್ಲಾಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

author img

By

Published : Jan 31, 2021, 5:03 PM IST

udupi-dc-village-stay
ಉಡುಪಿ ಡಿಸಿ

ಉಡುಪಿ: ಆಡಳಿತ ಯಂತ್ರವನ್ನು ಗ್ರಾಮಸ್ಥರ ಮನೆಬಾಗಿಲಿಗೆ ಕೊಂಡೊಯ್ಯುವ ಅಪರೂಪದ ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ಚಾಲನೆ ದೊರೆತಿದೆ. 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಪೈಲಟ್ ಯೋಜನೆಯಾಗಿ ಜಿಲ್ಲೆಯಲ್ಲಿ ಆರಂಭವಾಗಿದ್ದು, ಕುಡುಬಿ ಜನಾಂಗದವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ನಡೆಸಿದರು.

ಕುಡುಬಿ ಜನಾಂಗದ ಜೊತೆ ದಿನ ಕಳೆದ ಉಡುಪಿ ಡಿಸಿ

ಕರಾವಳಿಯ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿ ಕುಡುಬಿ ಜನಾಂಗವೂ ಒಂದು. ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಜನಾಂಗಕ್ಕೆ ಇವತ್ತಿಗೂ ಸರಕಾರದ ಸವಲತ್ತುಗಳು ತಲುಪಿಲ್ಲ. ಈ ಜನಾಂಗದವರು ಉಡುಪಿ ಜಿಲ್ಲೆಯ ನಾಲ್ಕೂರು- ನಂಚಾರು ಮುಂತಾದ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ರಾಜ್ಯ ಸರ್ಕಾರ ಆರಂಭಿಸಿರುವ 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ನಾಲ್ಕೂರು ಗ್ರಾಮವನ್ನು ಪೈಲಟ್ ಯೋಜನೆಗೆ ರಾಜ್ಯ ಸರ್ಕಾರ ಆಯ್ದುಕೊಂಡಿದ್ದು, ಜಿಲ್ಲಾಧಿಕಾರಿ ಜಗದೀಶ್ ಸಂಪೂರ್ಣ ದಿನ ಗ್ರಾಮದಲ್ಲಿ ಕುಳಿತು ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಷ್ಟಗಳನ್ನು ಬಗೆಹರಿಸಿದರು. ಡೀಮ್ಡ್ ಫಾರೆಸ್ಟ್ & ಆರ್ಟಿಸಿ -ಪಿಂಚಣಿ ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜಿಲ್ಲಾಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

ಓದಿ-'ನಾಳಿನ ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ': ಸಿದ್ದರಾಮಯ್ಯ

ಇಷ್ಟಕ್ಕೂ ಕುಡುಬಿ ಜನಾಂಗ ತನ್ನ ಅಪರೂಪದ ಜನಪದ ಮತ್ತು ಕೃಷಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕಷ್ಟ ಕೇಳಲು ಬಂದ ಜಿಲ್ಲಾಧಿಕಾರಿಗಳ ಮುಂದೆ ನೋವನ್ನೆಲ್ಲಾ ತೋಡಿಕೊಂಡು, ನಂತರ ಗುಮ್ಟೆಯ ನಾದವನ್ನು ಹೊರಹೊಮ್ಮಿಸಿ, ಹೋಳಿ ಹಬ್ಬದ ಸಂಭ್ರಮವನ್ನು ತೋರಿಸಿದರು. ಅಲ್ಲದೆ, ತಾವೇ ಬೆಳೆದ ಬಸಳೆ ಸೊಪ್ಪು, ಸೌತೆ ಮುಂತಾದ ತರಕಾರಿಗಳನ್ನು ಅಧಿಕಾರಿಗಳಿಗೆ ಕೊಟ್ಟು ಕೃತಜ್ಞತೆ ಸಲ್ಲಿಸಿದರು.

ಅಕ್ರಮ ಕಲ್ಲುಕ್ವಾರಿಗಳ ತವರು ಎಂಬ ಕುಖ್ಯಾತಿ

ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿದ ನಾಲ್ಕೂರು ಗ್ರಾಮ ಉಡುಪಿ ಜಿಲ್ಲೆಯ ಕಲ್ಲುಕ್ವಾರಿಗಳ ತವರು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಕ್ರಮ ಕಲ್ಲು ಕ್ವಾರಿಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿರುವಾಗಲೇ ಜಿಲ್ಲಾಧಿಕಾರಿಗಳು ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿದ್ದು ಗಮನಾರ್ಹವಾಗಿದೆ. ಸಕ್ರಮ ಕ್ವಾರಿಗಳಿಗೆ ಅಡ್ಡಿ ಇಲ್ಲ ಅಕ್ರಮ ಕ್ವಾರಿಗಳಿಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

ಕುಡುಬಿ ಜನಾಂಗದ ಮನೆಗಳಿಗೆ ಭೇಟಿ ಮಾಡಿದ ಜಿಲ್ಲಾಧಿಕಾರಿಗಳು ಜನರೊಂದಿಗೆ ಕುಳಿತು ಊಟ ಸವಿದರು. ಉಡುಪಿಯ ಪೈಲಟ್ ಪ್ರಾಜೆಕ್ಟ್ ಸಕ್ಸಸ್ ಆದರೆ ರಾಜ್ಯಕ್ಕೆ ಮಾದರಿಯಾಗುತ್ತದೆ. ರಾಜ್ಯ ಸರಕಾರದ ಅಪೂರ್ವ ಕಾರ್ಯಕ್ರಮವನ್ನು ಜಾರಿಗೊಳಿಸಿದ ಕೀರ್ತಿ ಉಡುಪಿ ಜಿಲ್ಲೆಗೆ ದೊರೆತಿದೆ.

ಉಡುಪಿ: ಆಡಳಿತ ಯಂತ್ರವನ್ನು ಗ್ರಾಮಸ್ಥರ ಮನೆಬಾಗಿಲಿಗೆ ಕೊಂಡೊಯ್ಯುವ ಅಪರೂಪದ ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ಚಾಲನೆ ದೊರೆತಿದೆ. 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಪೈಲಟ್ ಯೋಜನೆಯಾಗಿ ಜಿಲ್ಲೆಯಲ್ಲಿ ಆರಂಭವಾಗಿದ್ದು, ಕುಡುಬಿ ಜನಾಂಗದವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ನಡೆಸಿದರು.

ಕುಡುಬಿ ಜನಾಂಗದ ಜೊತೆ ದಿನ ಕಳೆದ ಉಡುಪಿ ಡಿಸಿ

ಕರಾವಳಿಯ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿ ಕುಡುಬಿ ಜನಾಂಗವೂ ಒಂದು. ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಜನಾಂಗಕ್ಕೆ ಇವತ್ತಿಗೂ ಸರಕಾರದ ಸವಲತ್ತುಗಳು ತಲುಪಿಲ್ಲ. ಈ ಜನಾಂಗದವರು ಉಡುಪಿ ಜಿಲ್ಲೆಯ ನಾಲ್ಕೂರು- ನಂಚಾರು ಮುಂತಾದ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ರಾಜ್ಯ ಸರ್ಕಾರ ಆರಂಭಿಸಿರುವ 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ನಾಲ್ಕೂರು ಗ್ರಾಮವನ್ನು ಪೈಲಟ್ ಯೋಜನೆಗೆ ರಾಜ್ಯ ಸರ್ಕಾರ ಆಯ್ದುಕೊಂಡಿದ್ದು, ಜಿಲ್ಲಾಧಿಕಾರಿ ಜಗದೀಶ್ ಸಂಪೂರ್ಣ ದಿನ ಗ್ರಾಮದಲ್ಲಿ ಕುಳಿತು ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಷ್ಟಗಳನ್ನು ಬಗೆಹರಿಸಿದರು. ಡೀಮ್ಡ್ ಫಾರೆಸ್ಟ್ & ಆರ್ಟಿಸಿ -ಪಿಂಚಣಿ ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜಿಲ್ಲಾಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

ಓದಿ-'ನಾಳಿನ ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ': ಸಿದ್ದರಾಮಯ್ಯ

ಇಷ್ಟಕ್ಕೂ ಕುಡುಬಿ ಜನಾಂಗ ತನ್ನ ಅಪರೂಪದ ಜನಪದ ಮತ್ತು ಕೃಷಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕಷ್ಟ ಕೇಳಲು ಬಂದ ಜಿಲ್ಲಾಧಿಕಾರಿಗಳ ಮುಂದೆ ನೋವನ್ನೆಲ್ಲಾ ತೋಡಿಕೊಂಡು, ನಂತರ ಗುಮ್ಟೆಯ ನಾದವನ್ನು ಹೊರಹೊಮ್ಮಿಸಿ, ಹೋಳಿ ಹಬ್ಬದ ಸಂಭ್ರಮವನ್ನು ತೋರಿಸಿದರು. ಅಲ್ಲದೆ, ತಾವೇ ಬೆಳೆದ ಬಸಳೆ ಸೊಪ್ಪು, ಸೌತೆ ಮುಂತಾದ ತರಕಾರಿಗಳನ್ನು ಅಧಿಕಾರಿಗಳಿಗೆ ಕೊಟ್ಟು ಕೃತಜ್ಞತೆ ಸಲ್ಲಿಸಿದರು.

ಅಕ್ರಮ ಕಲ್ಲುಕ್ವಾರಿಗಳ ತವರು ಎಂಬ ಕುಖ್ಯಾತಿ

ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿದ ನಾಲ್ಕೂರು ಗ್ರಾಮ ಉಡುಪಿ ಜಿಲ್ಲೆಯ ಕಲ್ಲುಕ್ವಾರಿಗಳ ತವರು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಕ್ರಮ ಕಲ್ಲು ಕ್ವಾರಿಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿರುವಾಗಲೇ ಜಿಲ್ಲಾಧಿಕಾರಿಗಳು ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿದ್ದು ಗಮನಾರ್ಹವಾಗಿದೆ. ಸಕ್ರಮ ಕ್ವಾರಿಗಳಿಗೆ ಅಡ್ಡಿ ಇಲ್ಲ ಅಕ್ರಮ ಕ್ವಾರಿಗಳಿಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

ಕುಡುಬಿ ಜನಾಂಗದ ಮನೆಗಳಿಗೆ ಭೇಟಿ ಮಾಡಿದ ಜಿಲ್ಲಾಧಿಕಾರಿಗಳು ಜನರೊಂದಿಗೆ ಕುಳಿತು ಊಟ ಸವಿದರು. ಉಡುಪಿಯ ಪೈಲಟ್ ಪ್ರಾಜೆಕ್ಟ್ ಸಕ್ಸಸ್ ಆದರೆ ರಾಜ್ಯಕ್ಕೆ ಮಾದರಿಯಾಗುತ್ತದೆ. ರಾಜ್ಯ ಸರಕಾರದ ಅಪೂರ್ವ ಕಾರ್ಯಕ್ರಮವನ್ನು ಜಾರಿಗೊಳಿಸಿದ ಕೀರ್ತಿ ಉಡುಪಿ ಜಿಲ್ಲೆಗೆ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.