ETV Bharat / state

ಸೆಂಟ್​ ಮೇರಿಸ್​ ದ್ವೀಪದಲ್ಲಿ ಅನುಮಾನಾಸ್ಪದ ಆಗಂತುಕ...? ಹೆಚ್ಚಿದ ಆತಂಕ - ಸೆಂಟ್​ ಮೇರಿಸ್​ ದ್ವೀಪದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆ ಸುದ್ದಿ

ಸುಪ್ರಸಿದ್ಧ ಮಲ್ಪೆಯಲ್ಲಿರುವ ಸೇಂಟ್​​ ಮೇರಿಸ್​​​​ ದ್ವೀಪದಲ್ಲಿ ಕೆಲ ಆಗಂತುಕರು ಕಾಣಿಸಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

suspicious-amateurs-on-udupi-st-marys-island
ಸೆಂಟ್​ ಮೇರಿಸ್​ ದ್ವೀಪ
author img

By

Published : Nov 26, 2019, 8:27 AM IST

Updated : Nov 26, 2019, 9:54 AM IST

ಉಡುಪಿ : ಸೈಂಟ್ ಮೆರೀಸ್ ದ್ವೀಪ ಭೂ ಲೋಕದ ಮೇಲಿನ ಸ್ವರ್ಗ ಅಂತಾನೇ ಹೆಸರುವಾಸಿ. ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ದಂಡು ದಂಡಾಗಿ ಬರ್ತಾರೆ. ಸಂಜೆ ನಾಲ್ಕೂವರೆ ಮೇಲೆ ಈ ದ್ವೀಪಕ್ಕೆ ಯಾರ ಪ್ರವೇಶವೂ ಕೂಡಾ ಇರೋದಿಲ್ಲ. ಆದರೆ ನಿನ್ನೆ ಮುಂಜಾನೆ ಒಬ್ಬ ಯುವತಿ ಹಾಗೂ ಮೂವರು ಯುವಕರು ಕಾಣಿಸಿಕೊಂಡಿದ್ದು, ಅಲ್ಲಿನ ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಅನುಮಾನಗೊಂಡ ಮೀನುಗಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಈ ವಿದೇಶಿ ಪ್ರಜೆಗಳನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಗೋವಾದಿಂದ ಮಲ್ಪೆಗೆ ಜಸ್ಟೀನ್, ಶೀಜಾ, ಜೋಸ್ ಹಾಗೂ ಹರೀಶ್ ಎಂಬುವರು ಪ್ರವಾಸ ಬಂದಿದ್ದರು. ಇವರನ್ನು ವಾಪಸ್​​​ ಕರೆತರಬೇಕಾದ ಬೋಟ್ ಅಲ್ಲಿಯೇ ಬಿಟ್ಟು ಬಂದಿದ್ದು, ಅವಾಂತರಕ್ಕೆ ಕಾರಣವಾಗಿತ್ತು. ಇವರನ್ನು ವಾಪಸ್​​ ಕರೆತರಬೇಕಿದ್ದ ಬೋಟ್​ ಅವರನ್ನು ಅಲ್ಲಿಯೇ ಬಿಟ್ಟು ಬಂದಿತ್ತು ಅನ್ನೋದು ಮೇಲ್ನೊಟಕ್ಕೆ ಕಂಡುಬಂದಿದೆ.

ಆದರೆ, ಇವರ ನಡೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ದ್ವೀಪದಲ್ಲಿ ಬಂದರು ಕಚೇರಿಯ ಮೊಬೈಲ್ ಸಂಖ್ಯೆ ನಮೂದಿಸಿದ್ದರೂ ಇವರು ಸಂಪರ್ಕಿಸದೇ ಇದ್ದ ಉದ್ದೇಶವೇನು ಅನ್ನೋದು ತನಿಖೆಯಾಗಬೇಕಿದೆ. ದ್ವೀಪದೊಳಗಿನ ಅನೇಕ ಸ್ವತ್ತುಗಳಿಗೂ ಇವರು ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ದ್ವೀಪ ಪ್ರವೇಶಿಸಿದ ಮತ್ತು ಅಲ್ಲಿಂದ ವಾಪಸ್​ ಆದ ಪ್ರವಾಸಿಗರ ಪರಿಶೀಲನೆ ಇನ್ನು ಮುಂದಾದರೂ ಆಗಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಉಡುಪಿ : ಸೈಂಟ್ ಮೆರೀಸ್ ದ್ವೀಪ ಭೂ ಲೋಕದ ಮೇಲಿನ ಸ್ವರ್ಗ ಅಂತಾನೇ ಹೆಸರುವಾಸಿ. ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ದಂಡು ದಂಡಾಗಿ ಬರ್ತಾರೆ. ಸಂಜೆ ನಾಲ್ಕೂವರೆ ಮೇಲೆ ಈ ದ್ವೀಪಕ್ಕೆ ಯಾರ ಪ್ರವೇಶವೂ ಕೂಡಾ ಇರೋದಿಲ್ಲ. ಆದರೆ ನಿನ್ನೆ ಮುಂಜಾನೆ ಒಬ್ಬ ಯುವತಿ ಹಾಗೂ ಮೂವರು ಯುವಕರು ಕಾಣಿಸಿಕೊಂಡಿದ್ದು, ಅಲ್ಲಿನ ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಅನುಮಾನಗೊಂಡ ಮೀನುಗಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಈ ವಿದೇಶಿ ಪ್ರಜೆಗಳನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಗೋವಾದಿಂದ ಮಲ್ಪೆಗೆ ಜಸ್ಟೀನ್, ಶೀಜಾ, ಜೋಸ್ ಹಾಗೂ ಹರೀಶ್ ಎಂಬುವರು ಪ್ರವಾಸ ಬಂದಿದ್ದರು. ಇವರನ್ನು ವಾಪಸ್​​​ ಕರೆತರಬೇಕಾದ ಬೋಟ್ ಅಲ್ಲಿಯೇ ಬಿಟ್ಟು ಬಂದಿದ್ದು, ಅವಾಂತರಕ್ಕೆ ಕಾರಣವಾಗಿತ್ತು. ಇವರನ್ನು ವಾಪಸ್​​ ಕರೆತರಬೇಕಿದ್ದ ಬೋಟ್​ ಅವರನ್ನು ಅಲ್ಲಿಯೇ ಬಿಟ್ಟು ಬಂದಿತ್ತು ಅನ್ನೋದು ಮೇಲ್ನೊಟಕ್ಕೆ ಕಂಡುಬಂದಿದೆ.

ಆದರೆ, ಇವರ ನಡೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ದ್ವೀಪದಲ್ಲಿ ಬಂದರು ಕಚೇರಿಯ ಮೊಬೈಲ್ ಸಂಖ್ಯೆ ನಮೂದಿಸಿದ್ದರೂ ಇವರು ಸಂಪರ್ಕಿಸದೇ ಇದ್ದ ಉದ್ದೇಶವೇನು ಅನ್ನೋದು ತನಿಖೆಯಾಗಬೇಕಿದೆ. ದ್ವೀಪದೊಳಗಿನ ಅನೇಕ ಸ್ವತ್ತುಗಳಿಗೂ ಇವರು ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ದ್ವೀಪ ಪ್ರವೇಶಿಸಿದ ಮತ್ತು ಅಲ್ಲಿಂದ ವಾಪಸ್​ ಆದ ಪ್ರವಾಸಿಗರ ಪರಿಶೀಲನೆ ಇನ್ನು ಮುಂದಾದರೂ ಆಗಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Intro:Udp_ST.Marys Island_Day Out_pkg_24

Anchor: ಉಡುಪಿ ಜಿಲ್ಲೆ ಮಲ್ಪೆಯಲ್ಲಿರುವ ಸೈಂಟ್ ಮೆರೀಸ್ ದ್ವೀಪದಲ್ಲಿ ಇಂದು ಮುಂಜಾನೆ ನಾಲ್ವರು ಆಗಂತುಕರು ಕಾಣಿಸಿಕೊಂಡರು. ರಾತ್ರಿ ಪ್ರವೇಶ ನಿಷೇಧವಿರುವ ಕಡಲ ನಡುವಿನ ಈ ದ್ವೀಪಕ್ಕೆ ಇವರು ಬಂದಿದ್ದಾರೂ ಎಲ್ಲಿಂದ? ಆತಂಕಗೊಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಮುಂದೇನಾಯ್ತು? ಈ ಸ್ಟೋರಿ ನೋಡಿ.



V1_ ಸೈಂಟ್ ಮೆರೀಸ್ ದ್ವೀಪ, ಭೂಲೋಕದ ಮೇಲಿನ ಸ್ವರ್ಗ ಅಂತಾನೇ ಹೆಸರುವಾಸಿ. ದೇಶ ವಿದೇಶಗಳ ಪ್ರವಾಸಿಗರು ದಂಡು ದಂಡಾಗಿ ಈ ದ್ವೀಪಕ್ಕೆ ಬರ್ತಾರೆ. ಮಲ್ಪೆ ಕಡಲು ತೀರದಿಂದ ಸುಮಾರು ಏಳು ಕಿಮೀ ದೂರದಲ್ಲಿರುವ ದ್ವೀಪಕ್ಕೆ ರಾತ್ರಿಯ ವೇಳೆ ಯಾರೂ ಹೋಗುವಂತಿಲ್ಲ. ಸಂಜೆ 4.30 ರ ನಂತರ ಈ ದ್ವೀಪಕ್ಕೆ ಯಾವುದೇ ಸಂಪರ್ಕ ಇರೋದಿಲ್ಲ. ನಿಯಮಾವಳಿಗಳು ಇಷ್ಟೊಂದು ಬಿಗುವಾಗಿದ್ದರೂ ಭಾನುವಾರ ಮುಂಜಾನೆ ನಾಲ್ವರು ಆಗಂತುಕರು ಈ ದ್ವೀಪದಲ್ಲಿ ಕಾಣಿಸಿಕೊಂಡಿದ್ದಾರೆ. ಓರ್ವ ಯುವತಿ, ನಾಲ್ವರು ಯುವಕರು ಈ ತಂಡದಲ್ಲಿದ್ದು, ಬೆಳಗಿನ ಜಾವ ದ್ವೀಪದ ಸಮೀಪ ಬೋಟು ಹೋಗುತ್ತಿದ್ದಾಗ ಕಾಣಿಸಿಕೊಂಡಿದ್ದಾರೆ. ಪ್ರವೇಶ ನಿಷೇಧವಿದ್ದ ದ್ವೀಪದಲ್ಲಿ ಇವರು ರಾತ್ರಿ ಕಳೆದದ್ದು ಹೇಗೆ ಅಂತ ಸ್ಥಳೀಯರು ತಲೆ ಕೆಡಿಸಿಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಶನಿವಾರ ಪ್ರವಾಸ ಬಂದಿದ್ದ ಇವರನ್ನು ಸೈಂಟ್ ಮೆರೀಸ್ ದ್ವೀಪದಿಂದ ವಾಪಾಸು ಕರೆತರಬೇಕಾಗಿದ್ದ ಬೋಟು ಅಲ್ಲೇ ಬಿಟ್ಟು ಬಂದಿತ್ತು. ಭಯಗೊಂಡಿದ್ದ ಈ ತಂಡ ರಾತ್ರಿಯಿಡೀ ದ್ವೀಪದಲ್ಲೇ ಕಳೆದಿದ್ದಾರೆ.



Byte_ ರವಿ, ಸ್ಥಳೀಯರು


V2_ ಸುರಕ್ಷತೆ ದೃಷ್ಟಿಯಿಂದ ಕತ್ತಲು ಕವಿದ ನಂತರ ದ್ವೀಪದೊಳಗೆ ಇರುವಂತಿಲ್ಲ. ಇದೊಂದು ಕಾನೂನುಬಾಹಿರ ಕೃತ್ಯವಾಗಿದೆ. ಬಂದರು ಪ್ರದೇಶದಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಸಂಜೆಯ ಕೊನೆಯ ಟ್ರಿಪ್ ನಲ್ಲಿ ವಾಪಾಸು ಕರೆತರುವುದು ಬೋಟಿನವರ ಜವಾಬ್ದಾರಿ. ಮಲ್ಪೆ ಅಭಿವೃದ್ಧಿ ಸಮಿತಿ ಈ ಬೋಟುಗಳ ನಿರ್ವಹಣೆ ನೋಡಿಕೊಳ್ಳುತ್ತೆ. ಬೋಟ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕೇರಳ ಮೂಲದ ಈ ನಾಲ್ವರು ಪ್ರವಾಸಿಗರು ದ್ವೀಪದಲ್ಲೇ ಬಾಕಿಯಾಗಿದ್ದರು. ಸೈಂಟ್ ಮೆರೀಸ್ ಪಕ್ಕದಲ್ಲೇ ಇನ್ನೊಂದು ಕಿರು ದ್ವೀಪವಿದ್ದು ಇವರು ಅದರೊಳಗೆ ಹೋಗಿದ್ದರು. ವಾಪಾಸು ಬರುವಾರ ನೀರಿನ ಮಟ್ಟ ಏರಿ ಭೂ ಪ್ರದೇಶಕ್ಕೆ ಬರೋದು ಸಾಧ್ಯವಾಗಲಿಲ್ಲ ಎನ್ನುತ್ತಾರೆ. ಬೋಟಿನ ಸಿಬ್ಬಂದಿಗಳಿಗೂ ಇವರು ಅಲ್ಲೇ ಉಳಿದಿರಿವುದು ತಿಳಿಯಲಿಲ್ಲ. ಕೊನೆಗೂ ಅನ್ನ, ಆಹಾರ, ನೀರು ಇಲ್ಲದೆ ಕತ್ತಲಲ್ಲೇ ದ್ವೀಪವಾಸ ಮಾಡುವಂತಾಗಿದೆ. ಗೋವಾದಿಂದ ಮಲ್ಪೆಗೆ ಈ ತಂಡ ಪ್ರವಾಸ ಬಂದಿತ್ತು, ಜಸ್ಟೀನ್, ಶೀಜಾ, ಜೋಸ್ ಹಾಗೂ ಹರೀಶ್ ಕೇರಳದಲ್ಲಿ ಹೋಂ ಸ್ಟೇ ನಡೆಸುತ್ತಾರೆ. ಸಿನಿಮಾರಂಗದ ಲಲಿತಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಾರ



V3_ ದ್ವೀಪದಲ್ಲಿ ಬಂದರು ಕಚೇರಿಯ ಮೊಬೈಲ್ ಸಂಖ್ಯೆ ನಮೂಧಿಸಿದ್ದರೂ ಇವರು ಸಂಪರ್ಕಿಸದೇ ಇದ್ದ ಉದ್ದೇಶವೇನು ಅನ್ನೋದು ತನಿಖೆಯಾಗಬೇಕಿದೆ. ದ್ವೀಪದೊಳಗಿನ ಅನೇಕ ಸ್ವತ್ತುಗಳಿಗೂ ಇವರು ಹಾನಿ ಮಾಡಿದ್ದಾರೆ.ಈ ಬಗ್ಗೆ ತನಿಖೆಯಾಗಬೇಕು. ದ್ವೀಪ ಪ್ರವೇಶಿಸಿದ ಮತ್ತು ಅಲ್ಲಿಂದ ವಾಪಾಸಾದ ಪ್ರವಾಸಿಗರ ಪರಿಶೀಲನೆ ಇನ್ನು ಮುಂದಾದರೂ ಆಗಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ.Body:SaintConclusion:Saint
Last Updated : Nov 26, 2019, 9:54 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.