ETV Bharat / state

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್ : ತಪ್ಪಿದ ದೊಡ್ಡ ದುರಂತ

ಶಾರ್ಟ್​ ಸರ್ಕ್ಯೂಟ್​​ ಉಂಟಾದಾಗ ಲಾಕ್​ಡೌನ್​ನಿಂದಾಗಿ ಜನ ಸಂಚಾರ ಇರಲಿಲ್ಲ. ತುರ್ತು ಆ್ಯಂಬುಲೆನ್ಸ್ ಸೇವೆಯಲ್ಲಿ ನಿರತರಾಗಿದ್ದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಘಟನೆಯ ಬಗ್ಗೆ ಮೆಸ್ಕಾಂ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

author img

By

Published : Jul 12, 2020, 10:28 PM IST

power short circuit in udupi
ವಿದ್ಯುತ್​ ಶಾರ್ಟ್​ ಸೆರ್ಕ್ಯೂಟ್

ಉಡುಪಿ : ನಗರದ ಮಾರುಥಿ ವೀಥಿಕಾ ಬಳಿ ವಿದ್ಯುತ್ ಕಂಬದಲ್ಲಿ ಶಾರ್ಟ್​ ಸರ್ಕ್ಯೂಟ್​​ ಉಂಟಾಗಿ ಕಂಬದ ವೈರ್​ಗಳು ಹೊತ್ತಿ ಉರಿದ ಘಟನೆ ನಡೆದಿದೆ.

ಶಾರ್ಟ್​ ಸರ್ಕ್ಯೂಟ್​​ ಉಂಟಾದಾಗ ಲಾಕ್​ಡೌನ್​ನಿಂದಾಗಿ ಜನ ಸಂಚಾರ ಇರಲಿಲ್ಲ. ತುರ್ತು ಆ್ಯಂಬುಲೆನ್ಸ್ ಸೇವೆಯಲ್ಲಿ ನಿರತರಾಗಿದ್ದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಘಟನೆಯ ಬಗ್ಗೆ ಮೆಸ್ಕಾಂ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ವಿದ್ಯುತ್​ ಶಾರ್ಟ್​ ಸೆರ್ಕ್ಯೂಟ್

ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇನ್ನು ಶಾರ್ಟ್​ ಸೆರ್ಕ್ಯೂಟ್​​ ಉಂಟಾದ ಸ್ಥಳದ ಸನಿಹದಲ್ಲಿದ್ದ ವಾಣಿಜ್ಯ ಸಂಕೀರ್ಣದಲ್ಲಿ ಬಹಳಷ್ಟು ಮಳಿಗೆಗಳಿದ್ದವು. ನಾಗರಿಕ ಸಮಿತಿಯ ಕಾರ್ಯಕರ್ತರ ಸಮಯ ಪ್ರಜ್ಞೆ ಮತ್ತು ಇಲಾಖೆ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದಾಗಿ ದೊಡ್ಡ ಮಟ್ಟದ ಅಗ್ನಿ ದುರಂತ ತಪ್ಪಿದಂತಾಗಿದೆ.

ಉಡುಪಿ : ನಗರದ ಮಾರುಥಿ ವೀಥಿಕಾ ಬಳಿ ವಿದ್ಯುತ್ ಕಂಬದಲ್ಲಿ ಶಾರ್ಟ್​ ಸರ್ಕ್ಯೂಟ್​​ ಉಂಟಾಗಿ ಕಂಬದ ವೈರ್​ಗಳು ಹೊತ್ತಿ ಉರಿದ ಘಟನೆ ನಡೆದಿದೆ.

ಶಾರ್ಟ್​ ಸರ್ಕ್ಯೂಟ್​​ ಉಂಟಾದಾಗ ಲಾಕ್​ಡೌನ್​ನಿಂದಾಗಿ ಜನ ಸಂಚಾರ ಇರಲಿಲ್ಲ. ತುರ್ತು ಆ್ಯಂಬುಲೆನ್ಸ್ ಸೇವೆಯಲ್ಲಿ ನಿರತರಾಗಿದ್ದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಘಟನೆಯ ಬಗ್ಗೆ ಮೆಸ್ಕಾಂ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ವಿದ್ಯುತ್​ ಶಾರ್ಟ್​ ಸೆರ್ಕ್ಯೂಟ್

ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇನ್ನು ಶಾರ್ಟ್​ ಸೆರ್ಕ್ಯೂಟ್​​ ಉಂಟಾದ ಸ್ಥಳದ ಸನಿಹದಲ್ಲಿದ್ದ ವಾಣಿಜ್ಯ ಸಂಕೀರ್ಣದಲ್ಲಿ ಬಹಳಷ್ಟು ಮಳಿಗೆಗಳಿದ್ದವು. ನಾಗರಿಕ ಸಮಿತಿಯ ಕಾರ್ಯಕರ್ತರ ಸಮಯ ಪ್ರಜ್ಞೆ ಮತ್ತು ಇಲಾಖೆ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದಾಗಿ ದೊಡ್ಡ ಮಟ್ಟದ ಅಗ್ನಿ ದುರಂತ ತಪ್ಪಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.