ETV Bharat / state

ಸಮುದ್ರ ತೀರದಲ್ಲಿ ನವ ದಂಪತಿ: ಹನಿಮೂನ್​ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ..!

author img

By

Published : Dec 8, 2020, 4:40 AM IST

Updated : Dec 8, 2020, 9:43 PM IST

ಮದುವೆಯಾದ ನಂತರ ಹನಿಮೂನ್​ಗೆ ಎಲ್ಲಿ ಹೋಗೋಣ ಎನ್ನುವವರ ನಡುವೆ, ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಪೊರಕೆ ಹಾಗೂ ಚೀಲ ಹಿಡಿದು ಸಮುದ್ರ ತೀರದಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

Couple Cleared Plastic from beach
ಹನಿಮೂನ್​ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ

ಉಡುಪಿ: ಮದುವೆಯಾದ ನಂತರ ನವ ದಂಪತಿ ಮಧುಚಂದ್ರದ ಕುರಿತು ಹತ್ತಾರು ಕನಸನ್ನು ಹೊತ್ತಿರುತ್ತಾರೆ. ಎಲ್ಲಿ ಹೋಗಿ ಹನಿಮೂನ್ ಮಾಡಿಕೊಳ್ಳುವುದು ಎಂದು ಮೊದಲೇ ಯೋಚಿಸಿರ್ತಾರೆ. ಆದರೆ ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್​ಗೆ ಹೋಗೋದು ಬಿಟ್ಟು, ಪೊರಕೆ ಹಾಗೂ ಚೀಲ ಹಿಡಿದು ಸಮುದ್ರ ತೀರದಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ನವೆಂಬರ್ 18 ರಂದು ಹಸೆಮಣೆ ಏರಿರುವ ಉಡುಪಿಯ ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ, ಹನಿಮೂನನ್ನು ಮುಂದೂಡಿ 7 ದಿನ ಸೋಮೇಶ್ವರ ಬೀಚನ್ನು ಸ್ವಚ್ಛ ಮಾಡಿದ್ದಾರೆ. ಕಳೆದ 7 ದಿನಗಳಲ್ಲಿ 700 ಕೆ.ಜಿ. ಕಸ ಮತ್ತು 500 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ತಮ್ಮ ಹುಟ್ಟೂರಾದ ಬೈಂದೂರಿನ ಸೋಮೇಶ್ವರದ ಕಡಲ ತೀರದ ಭಾಗವನ್ನು ಸ್ವಚ್ಛಗೊಳಿಸಲು ಅನುದೀಪ್ ಪಣತೊಟ್ಟಿದ್ದು, ದಂಪತಿಯಿಂದ ಆರಂಭವಾದ ಕೆಲಸ ಈಗ ಹತ್ತಾರು ಜನರ ನೇತೃತ್ವದಲ್ಲಿ ಮುಂದುವರೆಯುತ್ತಿದೆ.

ಹನಿಮೂನ್​ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ

ಡಿಜಿಟಲ್ ಮಾರ್ಕೆಟಿಂಗ್​ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ, ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷಾ ಕಾಂಚನ್ ಅವರನ್ನು ತಮ್ಮ ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದಾರೆ. ವಿಶೇಷ ಅಂದ್ರೆ ಇವರಿಬ್ಬರೂ ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡಲೇಬೇಕು ಎಂಬ ಪಣ ತೊಟ್ಟು ಈ ಸಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.

Couple Cleared Plastic from beach
ಸ್ವಚ್ಛತಾ ನಿರತರಾದ ಗುಂಪು

ಇಬ್ಬರಿಂದ ಆರಂಭವಾದ ಈ ಸ್ವಚ್ಛತಾ ಕಾರ್ಯಕ್ಕೆ ಈಗ ಹತ್ತಾರು ಜನರು ಸೇರಿಕೊಂಡಿದ್ದಾರೆ. ಹತ್ತಾರು ಸಮಾಜಮುಖಿ ಸಂಘಟನೆಗಳು ಕೈಜೋಡಿಸಿವೆ. ಸೋಮೇಶ್ವರದಲ್ಲಿ ಹಸನ್ ಮತ್ತು ತಂಡ ಮಂಜುನಾಥ್ ಶೆಟ್ಟಿ ಮತ್ತು ಬಳಗ ಈ ದಂಪತಿ ಜೊತೆ ಬೀಚ್ ಸ್ವಚ್ಛತೆಗೆ ಸಾಥ್ ನೀಡಿವೆ. ಈ ಅಭಿಯಾನವನ್ನು ಮಲ್ಪೆ, ಮರವಂತೆ, ಕಾಪು ಮತ್ತು ತಣ್ಣೀರುಬಾವಿ ಬೀಚ್​ಗಳಲ್ಲಿ ಮುಂದುವರೆಸುವ ಇಚ್ಛೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

Couple Cleared Plastic from beach
ದಂಪತಿಗೆ ಹಲವಾರು ಜನರು ಸಾಥ್

ತಮ್ಮ ಮದುವೆಯ ಮಧುರ ಕ್ಷಣಗಳನ್ನು ಜೀವನದಲ್ಲಿ ಅವಿಸ್ಮರಣೀಯ ಘಳಿಗೆಯಾಗಿಸುವುದರ ಜೊತೆಗೆ, ಈ ದಂಪತಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಎಲ್ಲರಿಗೂ ಮಾದರಿಯಾಗಿರುವ ಈ ನವ ದಂಪತಿಗೆ ಒಂದು ಸಲಾಂ ಹೇಳಲೇಬೇಕು.

ಉಡುಪಿ: ಮದುವೆಯಾದ ನಂತರ ನವ ದಂಪತಿ ಮಧುಚಂದ್ರದ ಕುರಿತು ಹತ್ತಾರು ಕನಸನ್ನು ಹೊತ್ತಿರುತ್ತಾರೆ. ಎಲ್ಲಿ ಹೋಗಿ ಹನಿಮೂನ್ ಮಾಡಿಕೊಳ್ಳುವುದು ಎಂದು ಮೊದಲೇ ಯೋಚಿಸಿರ್ತಾರೆ. ಆದರೆ ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್​ಗೆ ಹೋಗೋದು ಬಿಟ್ಟು, ಪೊರಕೆ ಹಾಗೂ ಚೀಲ ಹಿಡಿದು ಸಮುದ್ರ ತೀರದಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ನವೆಂಬರ್ 18 ರಂದು ಹಸೆಮಣೆ ಏರಿರುವ ಉಡುಪಿಯ ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ, ಹನಿಮೂನನ್ನು ಮುಂದೂಡಿ 7 ದಿನ ಸೋಮೇಶ್ವರ ಬೀಚನ್ನು ಸ್ವಚ್ಛ ಮಾಡಿದ್ದಾರೆ. ಕಳೆದ 7 ದಿನಗಳಲ್ಲಿ 700 ಕೆ.ಜಿ. ಕಸ ಮತ್ತು 500 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ತಮ್ಮ ಹುಟ್ಟೂರಾದ ಬೈಂದೂರಿನ ಸೋಮೇಶ್ವರದ ಕಡಲ ತೀರದ ಭಾಗವನ್ನು ಸ್ವಚ್ಛಗೊಳಿಸಲು ಅನುದೀಪ್ ಪಣತೊಟ್ಟಿದ್ದು, ದಂಪತಿಯಿಂದ ಆರಂಭವಾದ ಕೆಲಸ ಈಗ ಹತ್ತಾರು ಜನರ ನೇತೃತ್ವದಲ್ಲಿ ಮುಂದುವರೆಯುತ್ತಿದೆ.

ಹನಿಮೂನ್​ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ

ಡಿಜಿಟಲ್ ಮಾರ್ಕೆಟಿಂಗ್​ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ, ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷಾ ಕಾಂಚನ್ ಅವರನ್ನು ತಮ್ಮ ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದಾರೆ. ವಿಶೇಷ ಅಂದ್ರೆ ಇವರಿಬ್ಬರೂ ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡಲೇಬೇಕು ಎಂಬ ಪಣ ತೊಟ್ಟು ಈ ಸಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.

Couple Cleared Plastic from beach
ಸ್ವಚ್ಛತಾ ನಿರತರಾದ ಗುಂಪು

ಇಬ್ಬರಿಂದ ಆರಂಭವಾದ ಈ ಸ್ವಚ್ಛತಾ ಕಾರ್ಯಕ್ಕೆ ಈಗ ಹತ್ತಾರು ಜನರು ಸೇರಿಕೊಂಡಿದ್ದಾರೆ. ಹತ್ತಾರು ಸಮಾಜಮುಖಿ ಸಂಘಟನೆಗಳು ಕೈಜೋಡಿಸಿವೆ. ಸೋಮೇಶ್ವರದಲ್ಲಿ ಹಸನ್ ಮತ್ತು ತಂಡ ಮಂಜುನಾಥ್ ಶೆಟ್ಟಿ ಮತ್ತು ಬಳಗ ಈ ದಂಪತಿ ಜೊತೆ ಬೀಚ್ ಸ್ವಚ್ಛತೆಗೆ ಸಾಥ್ ನೀಡಿವೆ. ಈ ಅಭಿಯಾನವನ್ನು ಮಲ್ಪೆ, ಮರವಂತೆ, ಕಾಪು ಮತ್ತು ತಣ್ಣೀರುಬಾವಿ ಬೀಚ್​ಗಳಲ್ಲಿ ಮುಂದುವರೆಸುವ ಇಚ್ಛೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

Couple Cleared Plastic from beach
ದಂಪತಿಗೆ ಹಲವಾರು ಜನರು ಸಾಥ್

ತಮ್ಮ ಮದುವೆಯ ಮಧುರ ಕ್ಷಣಗಳನ್ನು ಜೀವನದಲ್ಲಿ ಅವಿಸ್ಮರಣೀಯ ಘಳಿಗೆಯಾಗಿಸುವುದರ ಜೊತೆಗೆ, ಈ ದಂಪತಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಎಲ್ಲರಿಗೂ ಮಾದರಿಯಾಗಿರುವ ಈ ನವ ದಂಪತಿಗೆ ಒಂದು ಸಲಾಂ ಹೇಳಲೇಬೇಕು.

Last Updated : Dec 8, 2020, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.