ETV Bharat / state

ಉಡುಪಿಯಲ್ಲಿ ಭಾರಿ ಮಳೆ: ನೀರುಪಾಲಾದ ಬಾಲಕ - ಉಡುಪಿಯಲ್ಲಿ ಬಾಲಕ ಸಾವು

ಭಾರಿ ಮಳೆ ಹಿನ್ನೆಲೆಯಲ್ಲಿ ಬಾಲಕನೋರ್ವ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ಉಡುಪಿಯಲ್ಲಿ ನಡೆದಿದೆ.

heavy-rain-boy-fell-into-water-and-dead-in-udupi
ಉಡುಪಿಯಲ್ಲಿ ಭಾರಿ ಮಳೆಗೆ ನೀರುಪಾಲಾದ ಬಾಲಕ
author img

By

Published : Jun 13, 2020, 4:34 AM IST

ಉಡುಪಿ: ಜಿಲ್ಲೆಯಲ್ಲಿ ಈ ವರ್ಷದ ಮಳೆಗೆ ಮೊದಲ ಬಲಿಯಾದ ವರದಿಯಾಗಿದೆ. ಬಾಲಕನೋರ್ವ ಮನೆಯ ಎದುರಿನ ತೋಡಿಗೆ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಹೆಬ್ರಿ ಕಾನ್ ಬೆಟ್ಟಿನಲ್ಲಿ ನಡೆದಿದೆ.

ನೀರುಪಾಲಾದ ಬಾಲಕನ್ನು ಹೆಬ್ರಿ ಕಾನ್ ಬೆಟ್ಟಿನ ಶ್ರೀಕಾಂತ್ ಭಟ್ (9) ಎಂದು ಗುರುತಿಸಲಾಗಿದೆ. ಈತ ಭಾರಿ ಮಳೆಗೆ ಉಕ್ಕಿ ಹರಿಯುತ್ತಿದ್ದ ಮನೆಯ ಎದುರಿನ ತೋಡಿಗೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇಲ್ಲಿನ ಅಮೃತ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಕಾನ್ ಬೆಟ್ಡ್ ನಿವಾಸಿ ದಯಾನಂದ ಅವರ ಪುತ್ರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಜಿಲ್ಲೆಯಲ್ಲಿ ಈ ವರ್ಷದ ಮಳೆಗೆ ಮೊದಲ ಬಲಿಯಾದ ವರದಿಯಾಗಿದೆ. ಬಾಲಕನೋರ್ವ ಮನೆಯ ಎದುರಿನ ತೋಡಿಗೆ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಹೆಬ್ರಿ ಕಾನ್ ಬೆಟ್ಟಿನಲ್ಲಿ ನಡೆದಿದೆ.

ನೀರುಪಾಲಾದ ಬಾಲಕನ್ನು ಹೆಬ್ರಿ ಕಾನ್ ಬೆಟ್ಟಿನ ಶ್ರೀಕಾಂತ್ ಭಟ್ (9) ಎಂದು ಗುರುತಿಸಲಾಗಿದೆ. ಈತ ಭಾರಿ ಮಳೆಗೆ ಉಕ್ಕಿ ಹರಿಯುತ್ತಿದ್ದ ಮನೆಯ ಎದುರಿನ ತೋಡಿಗೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇಲ್ಲಿನ ಅಮೃತ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಕಾನ್ ಬೆಟ್ಡ್ ನಿವಾಸಿ ದಯಾನಂದ ಅವರ ಪುತ್ರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.