ಉಡುಪಿ: ಮೀನುಗಾರರ ತುಂಡಾದ ಬಲೆಗೆ ಸಿಲುಕಿ ದಡಕ್ಕೆ ಬಂದು ಬಿದ್ದಿದ್ದ ಕಡಲಾಮೆಯನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಕುಂದಾಪುರದ ಗಂಗೊಳ್ಳಿಯ ಕಂಚಿಗೋಡು ಕಡಲ ತೀರದಲ್ಲಿ ತುಂಡಾದ ಬಲೆಗೆ ಸಿಲುಕಿ, ಕಡಲ ದಡದಲ್ಲಿ ಬಿದ್ದು ಆಮೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಬಲೆಯನ್ನು ಕತ್ತರಿಸಿ ಕಡಲಾಮೆಯನ್ನು ರಕ್ಷಿಸಿ ಪುನಃ ಕಡಲಿಗೆ ಬಿಟ್ಟಿದ್ದಾರೆ.
ಈ ಹಿಂದೆ ಕೂಡ ಹಲವಾರು ಬಾರಿ ಕಡಲಾಮೆ ತುಂಡಾದ ಬಲೆಗೆ ಸಿಲುಕಿ ದಡ ಸೇರಿದ್ದ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆಯಾಗುತ್ತಿರುವುದರ ಕುರಿತು ಕಡಲಾಮೆ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.