ETV Bharat / state

ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಫ್‌​ಐಆರ್​ ದಾಖಲು

'ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಕೆಎಂಸಿ ಮತ್ತು ಮಂಗಳೂರಿನ ಫೊರೆನ್ಸಿಕ್ ತಜ್ಞರು ಸಹ ಇದ್ದಾರೆ' ಎಂದು ಐಜಿಪಿ ದೇವ ಜ್ಯೋತಿ ರೇ ತಿಳಿಸಿದರು.

author img

By

Published : Apr 13, 2022, 3:16 PM IST

Updated : Apr 13, 2022, 3:47 PM IST

ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಪ್​ಐಆರ್​ ದಾಖಲು ಮಾಡಿದ್ದೇವೆ ಎಂದ  ಐಜಿಪಿ ಜ್ಯೋತಿ ರೇ
ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಪ್​ಐಆರ್​ ದಾಖಲು ಮಾಡಿದ್ದೇವೆ ಎಂದ ಐಜಿಪಿ ಜ್ಯೋತಿ ರೇ

ಉಡುಪಿ: 'ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ಮೇಲೆ ಎಫ್​ಐಆರ್ ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆ ಕೆಲಹೊತ್ತಿನ ಹಿಂದೆ ಆರಂಭವಾಗಿದೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡ್ತಿದ್ದೇವೆ. ಸಾಂದರ್ಭಿಕ ಸ್ಥಳದಲ್ಲಿದ್ದಂತಹ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೊರೆನ್ಸಿಕ್ ತಜ್ಞರು ಸಹ ಇದ್ದಾರೆ' ಎಂದು ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಗುತ್ತಿಗೆದಾರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.


'ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 3 ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ಎಲ್ಲಾ ರೀತಿಯಲ್ಲೂ ಸೂಕ್ತ ತನಿಖೆ ಮಾಡುತ್ತೇವೆ' ಎಂದರು.

ಇದನ್ನೂ ಓದಿ: ಬಳ್ಳಾರಿ: ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರು ಸಾವು

ಉಡುಪಿ: 'ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ಮೇಲೆ ಎಫ್​ಐಆರ್ ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆ ಕೆಲಹೊತ್ತಿನ ಹಿಂದೆ ಆರಂಭವಾಗಿದೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡ್ತಿದ್ದೇವೆ. ಸಾಂದರ್ಭಿಕ ಸ್ಥಳದಲ್ಲಿದ್ದಂತಹ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೊರೆನ್ಸಿಕ್ ತಜ್ಞರು ಸಹ ಇದ್ದಾರೆ' ಎಂದು ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಗುತ್ತಿಗೆದಾರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.


'ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 3 ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ಎಲ್ಲಾ ರೀತಿಯಲ್ಲೂ ಸೂಕ್ತ ತನಿಖೆ ಮಾಡುತ್ತೇವೆ' ಎಂದರು.

ಇದನ್ನೂ ಓದಿ: ಬಳ್ಳಾರಿ: ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರು ಸಾವು

Last Updated : Apr 13, 2022, 3:47 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.