ETV Bharat / state

ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ.. ಉಡುಪಿ ತಲುಪಿದ ಯುವಕನ ಉದ್ದೇಶವೇನು? - ಸೈಕಲ್ ಪ್ರಯಾಣ

ತಂದೆ ಉಪಯೋಗಿಸುತ್ತಿದ್ದ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿಯಿಂದ ಲಡಾಕ್​ಗೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್, ಈಗಾಗಲೇ 850 ಕಿಲೋ ಮೀಟರ್ ಕ್ರಮಿಸಿ ಉಡುಪಿ‌ ತಲುಪಿದ್ದಾನೆ.

Cycle ride from Kanyakumari to Ladakh
ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ...ಉಡುಪಿ ತಲುಪಿದ ಯುವಕನ ಉದ್ದೇಶವೇನು?
author img

By

Published : Jan 12, 2021, 9:10 AM IST

Updated : Jan 12, 2021, 9:19 AM IST

ಉಡುಪಿ: ರೈತನೋರ್ವನ ಪುತ್ರ ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ಆರೋಗ್ಯಕ್ಕಾಗಿ ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ ಆರಂಭಿಸಿದ್ದು, ಇದೀಗ ಉಡುಪಿ ತಲುಪಿದ್ದಾನೆ.

ಕೇರಳ ಮೂಲದ ಬಡ ಕುಟುಂಬದ ದ್ವಿತೀಯ ಬಿ.ಇ. ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್​​ವರೆಗೆ ರೈತರಿಗೆ ಬೆಂಬಲ ನೀಡಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.

ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ

ತಂದೆ ಉಪಯೋಗಿಸುತ್ತಿದ್ದ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್​ಗೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್, ಈಗಾಗಲೇ 850 ಕಿಲೋ ಮೀಟರ್ ಕ್ರಮಿಸಿ ಉಡುಪಿ‌ ತಲುಪಿದ್ದಾನೆ. ಸಮಾಜಸೇವಕ ಕೃಷ್ಣಮೂರ್ತಿ ಕಿನ್ನಿಮೂಲ್ಕಿ ಮತ್ತು ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಂಜಯ್ ಅವರನ್ನು ಉಡುಪಿಯಲ್ಲಿ ಸಮ್ಮಾನಿಸಿ ಸೈಕಲ್ ಯಾತ್ರೆಗೆ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಜ. 16ರಿಂದ ಕೊರೊನಾ ವ್ಯಾಕ್ಸಿನೇಷನ್‌ ಕಿಕ್ ಸ್ಟಾರ್ಟ್: ರಾಜ್ಯಕ್ಕೆ ಎಷ್ಟು ಬಾಟಲ್ಸ್​ ವ್ಯಾಕ್ಸಿನ್ ಬರಲಿದೆ?

ಏನಾದರು ಸಾಧನೆ ಮಾಡುವ ಛಲ ಮತ್ತು ದೇಶದ ಬೆನ್ನೆಲುಬಾಗಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಈ ಸೈಕಲ್​​ ಯಾತ್ರೆ ಮಾಡುತ್ತಿದ್ದು, ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಕೂಡಾ ಇದೆಯಂತೆ. ಸಂಜಯ್ ಯಾತ್ರೆ ಡಿಸೆಂಬರ್​​ನಲ್ಲಿ ಆರಂಭಗೊಂಡಿದ್ದು, ಫೆಬ್ರವರಿಯ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಹೊಂದಿದ್ದಾನೆ. 3,805 ಕಿಲೋ ಮೀಟರ್ ಉದ್ದ ಈ ಪಯಣ ಇರಲಿದೆ.

ಉಡುಪಿ: ರೈತನೋರ್ವನ ಪುತ್ರ ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ಆರೋಗ್ಯಕ್ಕಾಗಿ ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ ಆರಂಭಿಸಿದ್ದು, ಇದೀಗ ಉಡುಪಿ ತಲುಪಿದ್ದಾನೆ.

ಕೇರಳ ಮೂಲದ ಬಡ ಕುಟುಂಬದ ದ್ವಿತೀಯ ಬಿ.ಇ. ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್​​ವರೆಗೆ ರೈತರಿಗೆ ಬೆಂಬಲ ನೀಡಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.

ಕನ್ಯಾಕುಮಾರಿಯಿಂದ ಲಡಾಕ್​​ಗೆ ಸೈಕಲ್ ಪ್ರಯಾಣ

ತಂದೆ ಉಪಯೋಗಿಸುತ್ತಿದ್ದ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್​ಗೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್, ಈಗಾಗಲೇ 850 ಕಿಲೋ ಮೀಟರ್ ಕ್ರಮಿಸಿ ಉಡುಪಿ‌ ತಲುಪಿದ್ದಾನೆ. ಸಮಾಜಸೇವಕ ಕೃಷ್ಣಮೂರ್ತಿ ಕಿನ್ನಿಮೂಲ್ಕಿ ಮತ್ತು ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಂಜಯ್ ಅವರನ್ನು ಉಡುಪಿಯಲ್ಲಿ ಸಮ್ಮಾನಿಸಿ ಸೈಕಲ್ ಯಾತ್ರೆಗೆ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಜ. 16ರಿಂದ ಕೊರೊನಾ ವ್ಯಾಕ್ಸಿನೇಷನ್‌ ಕಿಕ್ ಸ್ಟಾರ್ಟ್: ರಾಜ್ಯಕ್ಕೆ ಎಷ್ಟು ಬಾಟಲ್ಸ್​ ವ್ಯಾಕ್ಸಿನ್ ಬರಲಿದೆ?

ಏನಾದರು ಸಾಧನೆ ಮಾಡುವ ಛಲ ಮತ್ತು ದೇಶದ ಬೆನ್ನೆಲುಬಾಗಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಈ ಸೈಕಲ್​​ ಯಾತ್ರೆ ಮಾಡುತ್ತಿದ್ದು, ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಕೂಡಾ ಇದೆಯಂತೆ. ಸಂಜಯ್ ಯಾತ್ರೆ ಡಿಸೆಂಬರ್​​ನಲ್ಲಿ ಆರಂಭಗೊಂಡಿದ್ದು, ಫೆಬ್ರವರಿಯ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಹೊಂದಿದ್ದಾನೆ. 3,805 ಕಿಲೋ ಮೀಟರ್ ಉದ್ದ ಈ ಪಯಣ ಇರಲಿದೆ.

Last Updated : Jan 12, 2021, 9:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.