ETV Bharat / state

144 ಸೆಕ್ಷನ್​ ಜಾರಿ ಇದ್ರೂ ವ್ಯಾಪಾರ : ಬಾಗಿಲು ಮುಚ್ಚಿಸಿದ ಉಡುಪಿ ನಗರಸಭೆ ಆಯುಕ್ತರು

ಕೊರೊನಾ ವೈರಸ್​ ತಡೆಗೆ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಈ ನಡುವೆ ಉಡುಪಿಯಲ್ಲಿ ಕೆಲ ಅಂಗಡಿಗಳ ಬಾಗಿಲು ತೆರೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಗರಸಭೆ ಆಯುಕ್ತರು ಎಚ್ಚರಿಕೆ ನೀಡಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದ್ದಾರೆ.

author img

By

Published : Mar 23, 2020, 7:40 PM IST

commissioner-closed-shop-due-to-144-section-in-udupi
ಉಡುಪಿ ನಗರಸಭೆ ಆಯುಕ್ತರು

ಉಡುಪಿ: ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ನಗರಸಭೆ ಆಯುಕ್ತ ಆನಂದ್​ ಕಲ್ಲೋಲಿಕರ್​ ಕೆಂಡಾಮಂಡಲರಾಗಿದ್ದರು.

ಅಂಗಡಿ ಬಾಗಿಲು ಮುಚ್ಚಿಸಿದ ಉಡುಪಿ ನಗರಸಭೆ ಆಯುಕ್ತರು

ಸ್ಥಳಕ್ಕೆ ಪೌರಾಯುಕ್ತರು ಆಗಮಿಸುತ್ತಿದ್ದಂತೆ ವ್ಯಾಪಾರಿಗಳು ದಡಬಡನೆ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಮಾತಿಗೆ ಬಗ್ಗದ ಕೆಲ ವ್ಯಾಪಾರಿಗಳ ಮೇಲೆ ಲೈಸನ್ಸ್ ರದ್ದು ಮಾಡುವುದಾಗಿ ಎಚ್ಚರಿಸಿದರು. ಅಲ್ಲದೇ ನಿತ್ಯದ ಅಗತ್ಯವಸ್ತುಗಳನ್ನು ಹೊರತುಪಡಿಸಿ ಬೇರೆಲ್ಲ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿದರು.

ಉಡುಪಿ: ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ನಗರಸಭೆ ಆಯುಕ್ತ ಆನಂದ್​ ಕಲ್ಲೋಲಿಕರ್​ ಕೆಂಡಾಮಂಡಲರಾಗಿದ್ದರು.

ಅಂಗಡಿ ಬಾಗಿಲು ಮುಚ್ಚಿಸಿದ ಉಡುಪಿ ನಗರಸಭೆ ಆಯುಕ್ತರು

ಸ್ಥಳಕ್ಕೆ ಪೌರಾಯುಕ್ತರು ಆಗಮಿಸುತ್ತಿದ್ದಂತೆ ವ್ಯಾಪಾರಿಗಳು ದಡಬಡನೆ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಮಾತಿಗೆ ಬಗ್ಗದ ಕೆಲ ವ್ಯಾಪಾರಿಗಳ ಮೇಲೆ ಲೈಸನ್ಸ್ ರದ್ದು ಮಾಡುವುದಾಗಿ ಎಚ್ಚರಿಸಿದರು. ಅಲ್ಲದೇ ನಿತ್ಯದ ಅಗತ್ಯವಸ್ತುಗಳನ್ನು ಹೊರತುಪಡಿಸಿ ಬೇರೆಲ್ಲ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.