ಉಡುಪಿ: ಜಿಲ್ಲೆಯ ಕುತ್ಯಾರಿನಲ್ಲಿ ನಡೆಯುತ್ತಿರುವ ಸಹಸ್ರಮಾನ ನವಕುಂಡ ಮಹಾಯಾಗ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗಿಯಾದ್ರು.
ಶ್ರೀ ಮಹಾಗಣಪತಿ ಅಥರ್ವಶೀರ್ಷ ಯಾಗಕ್ಕೆ ಸಂಕಲ್ಪ ನೆರವೇರಿಸಿ ಸುದರ್ಶನ ಹೋಮದಲ್ಲಿ ಭಾಗಿಯಾದ್ರು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಹಾಯಾಗ ನಡೆಯುತ್ತಿದ್ದು, ಲೋಕಕಲ್ಯಾಣ, ಪ್ರಕೃತಿ ವಿಕೋಪ ಪರಿಹಾರಕ್ಕೆ ಈ ಯಾಗದಿಂದ ಮಹತ್ವದ ಫಲ ಪ್ರಾಪ್ತಿಯಾಗಲಿದೆಯಂತೆ.
ಕೇಂಜ ಶ್ರೀಧರ ತಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಯಾಗ ಗೋ ಪೂಜೆಯನ್ನು ಸಿಎಂ ಬಿಎಸ್ವೈ ನೆರವೇರಿಸಿದರು. ಇನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಈ ಮಹಾಯಾಗದಲ್ಲಿ ಭಾಗಿಯಾದ್ರು.