ETV Bharat / state

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭ ಮುನ್ಸೂಚನೆ: ಘಮಗುಟ್ಟುತ್ತಿದೆ ಬೆಲ್ಲ..!

ಮುಂದೆ ಸಕ್ಕರೆ ಕಾರ್ಖಾನೆ ಆರಂಭವಾದಾಗ ಕಬ್ಬಿನ ಕೊರತೆ ಎದುರಾಗಬಾರದು ಎಂಬ ಕಾರಣದಿಂದಾಗಿ ಈಗಿನಿಂದಲೇ ಕಬ್ಬು ಬೆಳೆಗೆ ರೈತರು ಉತ್ಸಾಹ ತೋರಬೇಕೆಂದು ಸಕ್ಕರೆ ಕಾರ್ಖಾನೆ ಅಂಗಳದಲ್ಲೇ ಶುದ್ಧ ಬೆಲ್ಲ ತಯಾರಿಸುವ ಆಲೆಮನೆ ತೆರೆದಿದೆ.

author img

By

Published : Feb 16, 2021, 8:36 PM IST

brahmavar-sugar-factory-board-started-alemane-unit
ಆಲೆಮನೆ ಘಟಕ ತೆರೆದ ಮಂಡಳಿ

ಉಡುಪಿ: ಇಲ್ಲಿನ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ಆಶಾಭಾವನೆ ಹೊಂದಿದ್ದ ರೈತರಿಗೆ ಆಲೆಮನೆ ಘಟಕ ತೆರೆದಿರುವುದು ಸಂತಸ ಮೂಡಿಸಿದೆ. ಸಕ್ಕರೆ ಕಾರ್ಖಾನೆ ಬಾಗಿಲು ಹಾಕಿದ ಬಳಿಕ ಕಬ್ಬು ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಾ ಸಾಗಿತ್ತು.

ಆದರೆ ಈಗ 18 ವರ್ಷದಿಂದ ಬಂದ್ ಆಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ನಿರೀಕ್ಷೆ ಹೆಚ್ಚಾಗಿದ್ದು, ಇದಕ್ಕೆ ಪೂರಕ ತಯಾರಿ ಎನ್ನುವಂತೆ ಆಡಳಿತ ಮಂಡಳಿ ಆಲೆಮನೆ ಘಟಕ ಆರಂಭಿಸಿರುವುದು ಸಂತಸ ಮೂಡಿಸಿದೆ.

ಆಲೆಮನೆ ಘಟಕ ತೆರೆದ ಮಂಡಳಿ

ಮುಂದೆ ಸಕ್ಕರೆ ಕಾರ್ಖಾನೆ ಆರಂಭವಾದಾಗ ಕಬ್ಬಿನ ಕೊರತೆ ಎದುರಾಗಬಾರದು ಎಂಬ ಕಾರಣದಿಂದಾಗಿ ಈಗಿನಿಂದಲೇ ಕಬ್ಬು ಬೆಳೆಗೆ ರೈತರು ಉತ್ಸಾಹ ತೋರಬೇಕೆಂದು ಸಕ್ಕರೆ ಕಾರ್ಖಾನೆ ಅಂಗಳದಲ್ಲೇ ಶುದ್ಧ ಬೆಲ್ಲ ತಯಾರಿಸುವ ಆಲೆಮನೆ ತೆರೆದಿದೆ. ಈ ಆಲೆಮನೆಗೆ ಸ್ಥಳೀಯ ರೈತರೇ ಕಬ್ಬು ಒದಗಿಸುತ್ತಿದ್ದು, ಶುದ್ಧ ಬೆಲ್ಲ ಘಮಗುಟ್ಟುತ್ತಿದೆ.

ಶುದ್ಧ ಬೆಲ್ಲಕ್ಕೆ ಭಾರಿ ಡಿಮ್ಯಾಂಡ್ ಶುರುವಾಗಿದೆ. ನೂರಾರು ಜನರು ಆಲೆಮನೆ ನೋಡುವುದಕ್ಕೆ ಕುತೂಹಲದಿಂದ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಬಿಪಿಎಲ್​ಗೆ ಮಾನದಂಡ ರೂಪಿಸುವಾಗ ಆದಾಯ ಮಿತಿ ಬದಲಾವಣೆ ಮಾಡಿ: ಯು.ಟಿ. ಖಾದರ್ ಒತ್ತಾಯ

ಉಡುಪಿ: ಇಲ್ಲಿನ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ಆಶಾಭಾವನೆ ಹೊಂದಿದ್ದ ರೈತರಿಗೆ ಆಲೆಮನೆ ಘಟಕ ತೆರೆದಿರುವುದು ಸಂತಸ ಮೂಡಿಸಿದೆ. ಸಕ್ಕರೆ ಕಾರ್ಖಾನೆ ಬಾಗಿಲು ಹಾಕಿದ ಬಳಿಕ ಕಬ್ಬು ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಾ ಸಾಗಿತ್ತು.

ಆದರೆ ಈಗ 18 ವರ್ಷದಿಂದ ಬಂದ್ ಆಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುವ ನಿರೀಕ್ಷೆ ಹೆಚ್ಚಾಗಿದ್ದು, ಇದಕ್ಕೆ ಪೂರಕ ತಯಾರಿ ಎನ್ನುವಂತೆ ಆಡಳಿತ ಮಂಡಳಿ ಆಲೆಮನೆ ಘಟಕ ಆರಂಭಿಸಿರುವುದು ಸಂತಸ ಮೂಡಿಸಿದೆ.

ಆಲೆಮನೆ ಘಟಕ ತೆರೆದ ಮಂಡಳಿ

ಮುಂದೆ ಸಕ್ಕರೆ ಕಾರ್ಖಾನೆ ಆರಂಭವಾದಾಗ ಕಬ್ಬಿನ ಕೊರತೆ ಎದುರಾಗಬಾರದು ಎಂಬ ಕಾರಣದಿಂದಾಗಿ ಈಗಿನಿಂದಲೇ ಕಬ್ಬು ಬೆಳೆಗೆ ರೈತರು ಉತ್ಸಾಹ ತೋರಬೇಕೆಂದು ಸಕ್ಕರೆ ಕಾರ್ಖಾನೆ ಅಂಗಳದಲ್ಲೇ ಶುದ್ಧ ಬೆಲ್ಲ ತಯಾರಿಸುವ ಆಲೆಮನೆ ತೆರೆದಿದೆ. ಈ ಆಲೆಮನೆಗೆ ಸ್ಥಳೀಯ ರೈತರೇ ಕಬ್ಬು ಒದಗಿಸುತ್ತಿದ್ದು, ಶುದ್ಧ ಬೆಲ್ಲ ಘಮಗುಟ್ಟುತ್ತಿದೆ.

ಶುದ್ಧ ಬೆಲ್ಲಕ್ಕೆ ಭಾರಿ ಡಿಮ್ಯಾಂಡ್ ಶುರುವಾಗಿದೆ. ನೂರಾರು ಜನರು ಆಲೆಮನೆ ನೋಡುವುದಕ್ಕೆ ಕುತೂಹಲದಿಂದ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಬಿಪಿಎಲ್​ಗೆ ಮಾನದಂಡ ರೂಪಿಸುವಾಗ ಆದಾಯ ಮಿತಿ ಬದಲಾವಣೆ ಮಾಡಿ: ಯು.ಟಿ. ಖಾದರ್ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.