ETV Bharat / state

ಅತಿರೇಕದ ಜಗಳ : ಬೆಂಕಿಯಲ್ಲಿ ಸುಟ್ಟು ಕರಕಲಾದ ಅತ್ತೆ-ಸೊಸೆ

author img

By

Published : Dec 7, 2019, 8:04 PM IST

Updated : Dec 7, 2019, 11:05 PM IST

ಅತ್ತೆ, ಸೊಸೆ ಜಗಳವಾಡುತ್ತಿದ್ದ ವೇಳೆ ಮೈಮೇಲೆ ಟಿನ್ನರ್ (ಪೇಂಟಿಂಗ್ ಮಾಡಲು ಬಳಸುವ ತೈಲ) ಸುರಿದುಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರೂ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.

two-women-burned-in-tumkuru
ಬೆಂಕಿಯಲ್ಲಿ ಸುಟ್ಟು ಕರಕಲಾದ ಅತ್ತೆ-ಸೊಸೆ

ತುಮಕೂರು : ಕ್ಷುಲಕ ಕಾರಣಕ್ಕೆ ಅತ್ತೆ, ಸೊಸೆ ಜಗಳವಾಡುತ್ತಿದ್ದ ವೇಳೆ ಮೈಮೇಲೆ ಟಿನ್ನರ್ ಸುರಿದುಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರೂ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.

ಪಾರ್ವತಮ್ಮ(75), ರಾಜೇಶ್ವರಿ (45) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಸುಮಾರು 11 ಗಂಟೆ ಸಂದರ್ಭದಲ್ಲಿ ಅತ್ತೆಸೊಸೆ ಮಧ್ಯೆ ಪರಸ್ಪರ ಗಲಾಟೆಯಾಗಿದೆ. ನಿತ್ಯ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ರಾಜೇಶ್ವರಿ ಗಂಡ ಶಿವಕುಮಾರ್​ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಶಿವಕುಮಾರ್​ ಮನೆಯಿಂದ ಹೊರಹೋದ ನಂತರ ಸೊಸೆ ಮತ್ತು ಅತ್ತೆ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಪರೀತಕ್ಕೆ ಹೋಗಿದೆ.

ಬೆಂಕಿಯಲ್ಲಿ ಸುಟ್ಟು ಕರಕಲಾದ ಅತ್ತೆ-ಸೊಸೆ

ಪಕ್ಕದ ಮನೆಯವರು ಗಲಾಟೆ ಬಿಡಿಸಲು ಹೋದ್ರು ಸಹ ಅತ್ತೆ ಸೊಸೆ ಕೇಳಲಿಲ್ಲ, ಗಲಾಟೆ ಮುಂದುವರೆಸಿದ್ದರು. ಅದ್ರೆ ಸ್ವಲ್ಪ ಸಮಯದ ನಂತರ ಮನೆಯ ಕಿಟಕಿ ಬಾಗಿಲುಗಳಿಂದ ಹೊಗೆ ಬಂದಾಗ ಜನರು ಗಾಬರಿಗೊಂಡು, ಬಾಗಿಲು ಬಡಿದಿದ್ದಾರೆ. ಆದರೆ ಬಾಗಿಲು ತೆರೆದಿಲ್ಲ. ನಂತರ ಅನುಮಾನಗೊಂಡ ಸ್ಥಳೀಯರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಇಬ್ಬರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರು.

ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರೂ ಕೂಡಾ ಅಷ್ಟೊತ್ತಿಗಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಜಿಲ್ಲಾ ಶವಾಗಾರಕ್ಕೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು : ಕ್ಷುಲಕ ಕಾರಣಕ್ಕೆ ಅತ್ತೆ, ಸೊಸೆ ಜಗಳವಾಡುತ್ತಿದ್ದ ವೇಳೆ ಮೈಮೇಲೆ ಟಿನ್ನರ್ ಸುರಿದುಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರೂ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.

ಪಾರ್ವತಮ್ಮ(75), ರಾಜೇಶ್ವರಿ (45) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಸುಮಾರು 11 ಗಂಟೆ ಸಂದರ್ಭದಲ್ಲಿ ಅತ್ತೆಸೊಸೆ ಮಧ್ಯೆ ಪರಸ್ಪರ ಗಲಾಟೆಯಾಗಿದೆ. ನಿತ್ಯ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ರಾಜೇಶ್ವರಿ ಗಂಡ ಶಿವಕುಮಾರ್​ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಶಿವಕುಮಾರ್​ ಮನೆಯಿಂದ ಹೊರಹೋದ ನಂತರ ಸೊಸೆ ಮತ್ತು ಅತ್ತೆ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಪರೀತಕ್ಕೆ ಹೋಗಿದೆ.

ಬೆಂಕಿಯಲ್ಲಿ ಸುಟ್ಟು ಕರಕಲಾದ ಅತ್ತೆ-ಸೊಸೆ

ಪಕ್ಕದ ಮನೆಯವರು ಗಲಾಟೆ ಬಿಡಿಸಲು ಹೋದ್ರು ಸಹ ಅತ್ತೆ ಸೊಸೆ ಕೇಳಲಿಲ್ಲ, ಗಲಾಟೆ ಮುಂದುವರೆಸಿದ್ದರು. ಅದ್ರೆ ಸ್ವಲ್ಪ ಸಮಯದ ನಂತರ ಮನೆಯ ಕಿಟಕಿ ಬಾಗಿಲುಗಳಿಂದ ಹೊಗೆ ಬಂದಾಗ ಜನರು ಗಾಬರಿಗೊಂಡು, ಬಾಗಿಲು ಬಡಿದಿದ್ದಾರೆ. ಆದರೆ ಬಾಗಿಲು ತೆರೆದಿಲ್ಲ. ನಂತರ ಅನುಮಾನಗೊಂಡ ಸ್ಥಳೀಯರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಇಬ್ಬರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರು.

ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರೂ ಕೂಡಾ ಅಷ್ಟೊತ್ತಿಗಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಜಿಲ್ಲಾ ಶವಾಗಾರಕ್ಕೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro: ಬೆಂಕಿಯಲ್ಲಿ ಸುಟ್ಟು ಕರಕಲಾದ ಅತ್ತೆ-ಸೊಸೆ.......

ತುಮಕೂರು
ಕ್ಷುಲಕ ಕಾರಣಕ್ಕೆ ಅತ್ತೆ-ಸೊಸೆ ಜಗಳವಾಡುತ್ತಿದ್ದ ವೇಳೆ ಮೈಮೇಲೆ ಟಿನ್ನರ್ (ಪೇಂಟಿಂಗ್ ಮಾಡಲು ಬಳಸುವ ತೈಲ) ಸುರಿದುಕೊಂಡು ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರೂ ಸುಟ್ಟು ಕರಕಲಾಗಿರುವ ಘಟನೆ ತುಮಕೂರು ತಾಲ್ಲೂಕು ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಪಾರ್ವತಮ್ಮ(75), ರಾಜೇಶ್ವರಿ (45) ಮೃತ ದುರ್ದೈವಿಗಳಾಗಿದ್ದಾರೆ. ಇದು ಬೆಳಗಿ ಸುಮಾರು 11 ಗಂಟೆ ಸಂದರ್ಭದಲ್ಲಿ ಘಟನೆ ನಡೆದಿದೆ. ಅತ್ತೆ-ಸೊಸೆ ಇಬ್ಬರು ಮನೆಯೊಳಗೆ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ನಿತ್ಯ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿದೆ ಸಾಮಾನ್ಯವಾಗಿತ್ತು. ಇಂದು ಬೆಳಗ್ಗೆ ಪೇಂಟಿಂಗ್ ಕೆಲಸ ಮಾಡುವ ರಾಜೇಶ್ವರಿ ಅವರ ಗಂಡ ಶಿವಕುಮಾರ್ ಮನೆಯಿಂದ ಹೊರಗೆ ಹೋಗಿದ್ದರು. ಆನಂತರ ಸೊಸೆ ರಾಜೇಶ್ವರಿ ಮತ್ತು ಅತ್ತೆ ಪಾರ್ವತಮ್ಮ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಪಕ್ಕದ ಮನೆಯವರು ಹೋಗಿ ಗಲಾಟೆ ಬಿಡಿಸುವ ಕುರಿತು ತೆರಳಿದ್ದರು. ಆದರೆ ಅತ್ತೆ ಮತ್ತು ಸೊಸೆ ಇದಕ್ಕೆ ಸ್ಪಂದಿಸಲಿಲ್ಲ. ಗಲಾಟೆ ಮುಂದುವರಿದಿತ್ತು ಒಂದು ಹಂತದಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳಿಂದ ಹೊಗೆ ಬರಲಾರಂಭಿಸಿತು. ಜನರು ಕೂಡ ಗಾಬರಿಗೊಂಡು ಬಾಗಿಲು ಬಡಿದಾಗ ತೆಗೆಯಲಿಲ್ಲ ನಂತರ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಇಬ್ಬರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರು. ಸ್ಥಳೀಯರು ಒಳನುಗ್ಗಿ ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರೂ ಅಷ್ಟೊತ್ತಿಗಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳಕ್ಕೆ ಬಂದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಜಿಲ್ಲಾ ಶವಾಗಾರಕ್ಕೆ ಸಾಗಿಸಿದರು.
ಬೈಟ್: ಸಂದೀಪ್, ಸ್ಥಳೀಯರು...(ಹಸಿರು ಶರ್ಟ್ ಧರಿಸಿದ್ದಾರೆ....)
ಬೈಟ್: ಮೂರ್ತಪ್ಪ, ಸ್ಥಳೀಯರು....(ಹೆಗಲ ಮೇಲೆ ಟವಲ್ ಹಾಕಿದ್ದಾರೆ....)


Body:ತುಮಕೂರು


Conclusion:
Last Updated : Dec 7, 2019, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.