ETV Bharat / state

ಕಡಿಮೆ ದರದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಭಿನ್ನ ICU ಘಟಕ

ಒಂಬತ್ತು ಬೆಡ್​​ಗಳ ಐಸಿಯು ಐಸೊಲೇಷನ್ ವಿಶೇಷ ವಾರ್ಡ್​ನ ಮಾದರಿಯನ್ನು ತುಮಕೂರಿನಲ್ಲಿ ಇಂದು ಅನಾವರಣ ಮಾಡಲಾಗಿದೆ.

author img

By

Published : Jul 19, 2020, 5:42 PM IST

ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣ
ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣ

ತುಮಕೂರು: ಒಂಬತ್ತು ಬೆಡ್​​ಗಳ ಐಸಿಯು ಐಸೊಲೇಷನ್ ವಿಶೇಷ ವಾರ್ಡ್​ನ ಮಾದರಿಯನ್ನು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು.

ವರ್ಟೆಕ್ಸ್​​ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೇಯಸ್ ಎನರ್ಜಿ ಆ್ಯಂಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 30x40 ವಿಸ್ತೀರ್ಣದ ಖಾಲಿ ಜಾಗದಲ್ಲಿ ಈ ವಾರ್ಡ್​ ಅನ್ನು 3 ದಿನದಲ್ಲಿ ನಿರ್ಮಿಸಬಹುದಾಗಿದೆ. ವಿಶೇಷ ಐಸಿಯುನಲ್ಲಿ ಒಬ್ಬ ಸೋಂಕಿತನಿಗೆ ದಿನಕ್ಕೆ ಕನಿಷ್ಠ 8 ಸಾವಿರ ರೂ. ಖರ್ಚು ಆಗಲಿದೆ. ಇದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ 25 ಸಾವಿರ ರೂ.ಬಿಲ್ ಮಾಡಲಾಗುತ್ತಿದೆ. ಈ ಮಾದರಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಒಂಬತ್ತು ಬೆಡ್​​ಗಳ ಐಸಿಯು ಐಸೋಲೇಷನ್ ವಿಶೇಷ ವಾರ್ಡ್​ನ ಮಾದರಿ ಅನಾವರಣ

ಐಸಿಯು ಬಳಕೆ 20 ವರ್ಷಗಳ ಅವಧಿಯದ್ದಾಗಿದೆ. ಕೋವಿಡ್ ಸೋಂಕು ನಿರ್ಮೂಲನೆ ನಂತರವೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳಾಗಿ ಇದನ್ನು ಬಳಸಿಕೊಳ್ಳಬಹುದು. ಅಲ್ಲದೇ ಮುಂದಿನ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್ ರೂಪದಲ್ಲಿಯೂ ಇದನ್ನು ರೈತರಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿಡಲು ನೀಡಬಹುದಾಗಿದೆ.

ಈ ರೀತಿಯ ಕಡಿಮೆ ದರದಲ್ಲಿ ಐಸಿಯು ಘಟಕಗಳಲ್ಲಿ ದಾಖಲಾಗುವ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸ್ವಾಗತಾರ್ಹ. ಸರ್ಕಾರ ಇದನ್ನು ಪರಿಗಣಿಸಿ ಗ್ರಾಮೀಣ ಪ್ರದೇಶದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಬೇಕು ಎಂದು ಶಾಸಕ ಗೌರಿಶಂಕರ್ ಒತ್ತಾಯಿಸಿದ್ದಾರೆ.

ತುಮಕೂರು: ಒಂಬತ್ತು ಬೆಡ್​​ಗಳ ಐಸಿಯು ಐಸೊಲೇಷನ್ ವಿಶೇಷ ವಾರ್ಡ್​ನ ಮಾದರಿಯನ್ನು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು.

ವರ್ಟೆಕ್ಸ್​​ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೇಯಸ್ ಎನರ್ಜಿ ಆ್ಯಂಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 30x40 ವಿಸ್ತೀರ್ಣದ ಖಾಲಿ ಜಾಗದಲ್ಲಿ ಈ ವಾರ್ಡ್​ ಅನ್ನು 3 ದಿನದಲ್ಲಿ ನಿರ್ಮಿಸಬಹುದಾಗಿದೆ. ವಿಶೇಷ ಐಸಿಯುನಲ್ಲಿ ಒಬ್ಬ ಸೋಂಕಿತನಿಗೆ ದಿನಕ್ಕೆ ಕನಿಷ್ಠ 8 ಸಾವಿರ ರೂ. ಖರ್ಚು ಆಗಲಿದೆ. ಇದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ 25 ಸಾವಿರ ರೂ.ಬಿಲ್ ಮಾಡಲಾಗುತ್ತಿದೆ. ಈ ಮಾದರಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಒಂಬತ್ತು ಬೆಡ್​​ಗಳ ಐಸಿಯು ಐಸೋಲೇಷನ್ ವಿಶೇಷ ವಾರ್ಡ್​ನ ಮಾದರಿ ಅನಾವರಣ

ಐಸಿಯು ಬಳಕೆ 20 ವರ್ಷಗಳ ಅವಧಿಯದ್ದಾಗಿದೆ. ಕೋವಿಡ್ ಸೋಂಕು ನಿರ್ಮೂಲನೆ ನಂತರವೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳಾಗಿ ಇದನ್ನು ಬಳಸಿಕೊಳ್ಳಬಹುದು. ಅಲ್ಲದೇ ಮುಂದಿನ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್ ರೂಪದಲ್ಲಿಯೂ ಇದನ್ನು ರೈತರಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿಡಲು ನೀಡಬಹುದಾಗಿದೆ.

ಈ ರೀತಿಯ ಕಡಿಮೆ ದರದಲ್ಲಿ ಐಸಿಯು ಘಟಕಗಳಲ್ಲಿ ದಾಖಲಾಗುವ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸ್ವಾಗತಾರ್ಹ. ಸರ್ಕಾರ ಇದನ್ನು ಪರಿಗಣಿಸಿ ಗ್ರಾಮೀಣ ಪ್ರದೇಶದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಬೇಕು ಎಂದು ಶಾಸಕ ಗೌರಿಶಂಕರ್ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.