ETV Bharat / state

ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಕೆಂದರೆ ನನ್ನ ಶವದ ಮೇಲೆ ಹೋಗಿ : ಸಬ್​ ಇನ್ಸ್​ಪೆಕ್ಟರ್​ - ತುಮಕೂರು ಸುದ್ದಿ

ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಕೆಂದರೆ ನನ್ನ ಶವದ ಮೇಲೆ ಹೋಗಿ ಎಂದು ಸಬ್​ ಇನ್ಸ್​ಪೆಕ್ಟರ್​ವೊಬ್ಬರು ಹೇಳಿದ್ದಾರೆ..

Quarrel between police and protester in Tumkur, Tumkur rain news, Tumkur news, Tumkur District administration news, ತುಮಕೂರಿನಲ್ಲಿ ಪೊಲೀಸ್​​ ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ, ತುಮಕೂರು ಮಳೆ ಸುದ್ದಿ, ತುಮಕೂರು ಸುದ್ದಿ, ತುಮಕೂರು ಜಿಲ್ಲಾಡಳಿತ ಸುದ್ದಿ,
ಸಬ್​ ಇನ್ಸ್​ಪೆಕ್ಟರ್​ ಹೇಳಿಕೆ
author img

By

Published : Apr 15, 2022, 11:10 AM IST

ತುಮಕೂರು : ಜಿಲ್ಲಾಧಿಕಾರಿ ಕಚೇರಿಯೆದುರು ವಸತಿ ಹಾಗೂ ಭೂಮಿ ಕಲ್ಪಿಸುವಂತೆ ಒತ್ತಾಯಿಸಿ ನಾಗವಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ರಾತ್ರಿ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ಅವಕಾಶ ನೀಡದ ಪ್ರಸಂಗ ನಡೆಯಿತು. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ನನ್ನ ಶವದ ಮೇಲೆ ಜಿಲ್ಲಾಧಿಕಾರಿಯೊಳಗೆ ಹೋಗಬೇಕು.. ಸಬ್​ ಇನ್ಸ್​ಪೆಕ್ಟರ್​ ಹೇಳಿಕೊಂಡಿರುವುದು..

ಸ್ಥಳದಲ್ಲಿದ್ದ ಸಬ್ ಇನ್ಸ್​ಪೆಕ್ಟರ್​ ನವೀನ ಅವರು, ನಾನೊಬ್ಬ ಕೇವಲ ಸೆಕ್ಯೂರಿಟಿ ಗಾರ್ಡ್ ಆಗಿ ದೇಶವನ್ನು ಪಾಲನೆ ಮಾಡುತ್ತಿದ್ದೇನೆ. ನೀವುಗಳು ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಲು ಯತ್ನಿಸಬೇಕು ಎಂದರೆ ನನ್ನ ಶವದ ಮೇಲೆ ಹೋಗಬೇಕು ಎಂದು ನುಡಿದರು.

ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ

ಇದರಿಂದ ಕಕ್ಕಾಬಿಕ್ಕಿಯಾದ ಪ್ರತಿಭಟನಾಕಾರರು, ಪೊಲೀಸರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಾವು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸುವುದಿಲ್ಲ. ನೀವು ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಡಿ ಎಂದರೆ ನಾವು ಹೋಗುವುದಿಲ್ಲ ಎಂದು ಸಮಾಧಾನ ಪಡಿಸಿದರು.

ತುಮಕೂರು : ಜಿಲ್ಲಾಧಿಕಾರಿ ಕಚೇರಿಯೆದುರು ವಸತಿ ಹಾಗೂ ಭೂಮಿ ಕಲ್ಪಿಸುವಂತೆ ಒತ್ತಾಯಿಸಿ ನಾಗವಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ರಾತ್ರಿ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ಅವಕಾಶ ನೀಡದ ಪ್ರಸಂಗ ನಡೆಯಿತು. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ನನ್ನ ಶವದ ಮೇಲೆ ಜಿಲ್ಲಾಧಿಕಾರಿಯೊಳಗೆ ಹೋಗಬೇಕು.. ಸಬ್​ ಇನ್ಸ್​ಪೆಕ್ಟರ್​ ಹೇಳಿಕೊಂಡಿರುವುದು..

ಸ್ಥಳದಲ್ಲಿದ್ದ ಸಬ್ ಇನ್ಸ್​ಪೆಕ್ಟರ್​ ನವೀನ ಅವರು, ನಾನೊಬ್ಬ ಕೇವಲ ಸೆಕ್ಯೂರಿಟಿ ಗಾರ್ಡ್ ಆಗಿ ದೇಶವನ್ನು ಪಾಲನೆ ಮಾಡುತ್ತಿದ್ದೇನೆ. ನೀವುಗಳು ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಲು ಯತ್ನಿಸಬೇಕು ಎಂದರೆ ನನ್ನ ಶವದ ಮೇಲೆ ಹೋಗಬೇಕು ಎಂದು ನುಡಿದರು.

ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ

ಇದರಿಂದ ಕಕ್ಕಾಬಿಕ್ಕಿಯಾದ ಪ್ರತಿಭಟನಾಕಾರರು, ಪೊಲೀಸರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಾವು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸುವುದಿಲ್ಲ. ನೀವು ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಡಿ ಎಂದರೆ ನಾವು ಹೋಗುವುದಿಲ್ಲ ಎಂದು ಸಮಾಧಾನ ಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.