ತುಮಕೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಈಗಾಗಲೇ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ನಿಯಮ ಪಾಲಿಸುವಂತೆ ತುಮಕೂರು ಜಿಲ್ಲೆಯ ಪೊಲೀಸರು ವಿಭಿನ್ನ ರೀತಿಯಲ್ಲಿ ಮನವಿ ಮಾಡುತ್ತಿದ್ದಾರೆ.
ದಿನಸಿ ಅಂಗಡಿ ಮುಂದೆ ವೃತ್ತ ರಚಿಸಿ ಅದರಲ್ಲೇ ನಿಂತು ಸಾಮಾನು ಖರೀದಿ ಮಾಡುವಂತೆ ಸಲಹೆ ಕೊಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸುತ್ತಿದ್ದಾರೆ.

ಚೇಳೂರಿನಲ್ಲಿ ಪೊಲೀಸ್ ಠಾಣೆ ಪಿಎಸ್ಐ ವಿಜಯಕುಮಾರ್ ಕೊವಿಡ್-19 ಹರಡದಂತೆ ದಿನಸಿ ಅಂಗಡಿಗಳ ಬಳಿ ಈ ರೀತಿಯ ವ್ಯವಸ್ಥೆ ಕಲ್ಪಿಸಿದ್ದಾರೆ.