ETV Bharat / state

ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ ಆರ್​​​ಎಸ್​​ಎಸ್​​​ ಗಣವೇಷಧಾರಿಗಳು - ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ಆರ್​​​ಎಸ್​​ಎಸ್​​ ಸ್ವಯಂ ಸೇವಕರು ಗಣ ವೇಷಧಾರಿಗಳಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ್ದಾರೆ.

ಪಥಸಂಚಲನ ನಡೆಸಿದ ಎನ್​​ಎಸ್​​ಎಸ್​​​ ಗಣವೇಷಧಾರಿಗಳು
author img

By

Published : Oct 19, 2019, 2:16 AM IST

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರು ಗಣ ವೇಷಧಾರಿಗಳಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ್ದಾರೆ.

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತುಮಕೂರು ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಶಿಬಿರ ನಡೆಯಿತು. ಈ ಶಿಬಿರದ ಕಡೆಯ ದಿನವಾದ ನಿನ್ನೆ ಪಟ್ಟಣದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.

ಪಥಸಂಚಲನ ನಡೆಸಿದ ಆರ್​​​ಎಸ್​​ಎಸ್​​​ ಗಣವೇಷಧಾರಿಗಳು

ಎಂ.ಪಿ.ಎಸ್ ಶಾಲಾ ಆವರಣದಲ್ಲಿ ಸಂಘದ ಪ್ಯಾಂಟ್, ಬೆಲ್ಟ್, ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು 200ಕ್ಕೂ ಹೆಚ್ಚು ಗಣವೇಷಧಾರಿಗಳು ಸಮಾವೇಶಗೊಂಡರು. ನಂತರ ಧ್ವಜಾರೋಹಣ ನಡೆದು ಧ್ವಜವಂದನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥಸಂಚಲನ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲು ಶುರುವಾಯಿತು. ಶಿಸ್ತಿನ ಸಿಪಾಯಿಗಳಂತಿದ್ದ ಗಣವೇಷಧಾರಿಗಳು ಸುರಿಯುವ ಮಳೆಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡರು.

ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಭಾರತಮಾತಾ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯ ಮೇಳ ಗಮನಸೆಳೆಯಿತು. ಸಾರ್ವಜನಿಕರು ಭಾರತಮಾತೆಯ ಭಾವಚಿತ್ರ, ಭಗವಧ್ವಜ ಹಾಗೂ ಸ್ವಯಂಸೇವಕರ ಮೇಲೆ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪಥಸಂಚಲನದ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರು ಗಣ ವೇಷಧಾರಿಗಳಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ್ದಾರೆ.

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತುಮಕೂರು ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಶಿಬಿರ ನಡೆಯಿತು. ಈ ಶಿಬಿರದ ಕಡೆಯ ದಿನವಾದ ನಿನ್ನೆ ಪಟ್ಟಣದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.

ಪಥಸಂಚಲನ ನಡೆಸಿದ ಆರ್​​​ಎಸ್​​ಎಸ್​​​ ಗಣವೇಷಧಾರಿಗಳು

ಎಂ.ಪಿ.ಎಸ್ ಶಾಲಾ ಆವರಣದಲ್ಲಿ ಸಂಘದ ಪ್ಯಾಂಟ್, ಬೆಲ್ಟ್, ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು 200ಕ್ಕೂ ಹೆಚ್ಚು ಗಣವೇಷಧಾರಿಗಳು ಸಮಾವೇಶಗೊಂಡರು. ನಂತರ ಧ್ವಜಾರೋಹಣ ನಡೆದು ಧ್ವಜವಂದನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥಸಂಚಲನ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲು ಶುರುವಾಯಿತು. ಶಿಸ್ತಿನ ಸಿಪಾಯಿಗಳಂತಿದ್ದ ಗಣವೇಷಧಾರಿಗಳು ಸುರಿಯುವ ಮಳೆಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡರು.

ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಭಾರತಮಾತಾ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯ ಮೇಳ ಗಮನಸೆಳೆಯಿತು. ಸಾರ್ವಜನಿಕರು ಭಾರತಮಾತೆಯ ಭಾವಚಿತ್ರ, ಭಗವಧ್ವಜ ಹಾಗೂ ಸ್ವಯಂಸೇವಕರ ಮೇಲೆ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪಥಸಂಚಲನದ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Intro:Body:ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ ಗಣವೇಷಧಾರಿಗಳು.....

ತುಮಕೂರು :
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರು ಗಣ ವೇಷಧಾರಿಗಳಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ನಡೆಸಿದ್ದು ವಿಶೇಷವಾಗಿತ್ತು

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತುಮಕೂರು ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಶಿಬಿರ ನಡೆಯಿತು. ಕಡೆಯ ದಿನವಾದ ಶುಕ್ರವಾರ ಪಟ್ಟಣದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನ 3 ಗಂಟೆಗೆ ಎಂ.ಪಿ.ಎಸ್ ಶಾಲಾ ಆವರಣದಲ್ಲಿ ಸಂಘದ ಪ್ಯಾಂಟ್,ಬೆಲ್ಟ್,ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು 200ಕ್ಕೂ ಹೆಚ್ಚು ಗಣವೇಷಧಾರಿಗಳು ಸಮಾವೇಶಗೊಂಡರು. ನಂತರ ಧ್ವಜಾರೋಹಣ ನಡೆದು ಧ್ವಜವಂದನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥಸಂಚಲನ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲು ಶುರುವಾಯಿತು.ಶಿಸ್ತಿನ ಸಿಪಾಯಿಗಳಂತಿದ್ದ ಗಣವೇಷಧಾರಿಗಳು ಸುರಿಯುವ ಮಳೆಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡರು.
ಪಟ್ಟಣದ ಡಾ.ರಾಜಕುಮಾರ್ ರಸ್ತೆ, ಬ್ರಾಹ್ಮಣರ ಬೀದಿ,ಲಿಂಗಾಯಿತರ ಬೀದಿ,ರಾಮಗೋಪಾಲ್ ಸರ್ಕಲ್ ಮೂಲಕ ಹಾದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಪಸ್ ಎಂಪಿಎಸ್ ಶಾಲಾ ಆವರಣಕ್ಕೆ ಬಂದು ಸೇರಿದರು.

ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಭಾರತಮಾತಾ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯ ಮೇಳ ಗಮನಸೆಳೆಯಿತು.

ಪಥಸಂಚಲನದುದ್ದಕ್ಕೂ ಸಾರ್ವಜನಿಕರು ಭಾರತಮಾತೆಯ ಭಾವಚಿತ್ರ,ಭಗವಧ್ವಜ ಹಾಗೂ ಸ್ವಯಂಸೇವಕರ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಮಾರ್ಗದುದ್ದಕ್ಕೂ ನಿಂತಿದ್ದ ಸಾರ್ವಜನಿಕರು ಪಥಸಂಚಲನದ ಶಿಸ್ತನ್ನು ಕಣ್ತುಂಬಿಕೊಂಡರು.

ಪಥಸಂಚಲನದ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.