ETV Bharat / state

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ 'ಮಿಷನ್ ಸಾಹಸಿ' ಉದ್ಘಾಟನೆ - ತುಮಕೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶಿಸಿ ಗಮನ ಸೆಳೆದರು.

Mission Sahasi inauguration,ತುಮಕೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ 'ಮಿಷನ್ ಸಾಹಸಿ' ಉದ್ಘಾಟನೆ
author img

By

Published : Nov 29, 2019, 1:03 PM IST

ತುಮಕೂರು: ಮಹಿಳೆಯರಲ್ಲಿ ಧೈರ್ಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿನೂತನವಾದ 'ಮಿಷನ್ ಸಾಹಸಿ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ 'ಮಿಷನ್ ಸಾಹಸಿ' ಉದ್ಘಾಟನೆ

ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನುರಿತ ಕರಾಟೆ ಪಟುಗಳಿಂದ ತರಬೇತಿ ಪಡೆದಿದ್ದ ಕರಾಟೆಯ ಪ್ರದರ್ಶನ ಮಾಡಿದರು. ಜೊತೆಗೆ ವಿದ್ಯಾರ್ಥಿನಿಯರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬಗೆ, ಯಾರು ಇರದ ಜನನಿಬಿಡ ಪ್ರದೇಶಗಳಲ್ಲಿ ಹಲ್ಲೆಗೆ ಮುಂದಾಗುವ ಪುರುಷರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಮಾರ್ಗದರ್ಶನ ನೀಡಲಾಯಿತು. ಇದೇ ವೇಳೆ ಕರಾಟೆ ಕರಗತಗೊಳಿಸಿಕೊಂಡಿರುವ ಕೆಲ ಕರಾಟೆ ಪಟುಗಳು ತಮ್ಮ ಸಾಹಸಮಯ ಕಲೆ ಪ್ರದರ್ಶಿಸುವ ಮೂಲಕ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ಕಾರ್ಯಕ್ರಮಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಾ ಕುಮಾರಿ ಆಗಮಿಸಿ ಉದ್ಘಾಟನೆ ನೆರವೇರಿಸಿದರು. ಅನಂತರ ಅವರು ಮಾತನಾಡಿ, ಮಹಿಳೆಯರನ್ನು ಭಾರತಮಾತೆಯ ಸ್ವರೂಪವೆಂಬಂತೆ ಕಾಣಲಾಗುತ್ತದೆ. ಹೆಣ್ಣನ್ನು ದೇವರೆಂದು ಕಾಣುವ, ಗೌರವಿಸುವ ದೇಶ ನಮ್ಮ ಭಾರತದೇಶ ಎಂದು ಹೇಳಿದರು.

ಇನ್ನೂ ಇದೇ ವೇಳೆ ತಮ್ಮ ಮಾತನಾಡಿದ ಎಬಿವಿಪಿಯ ಜಿಲ್ಲಾ ಸಂಚಾಲಕ ಅಪ್ಪು ಪಾಟೀಲ್, ಮಹಿಳೆಯರು ಏಕಾಂಗಿಯಾಗಿ ನಿರ್ಭಯದಿಂದ ಓಡಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗೆ ತಿಳಿಸುವ ನಿಟ್ಟಿನಲ್ಲಿ 'ಮಿಷನ್ ಸಾಹಸಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತುಮಕೂರು: ಮಹಿಳೆಯರಲ್ಲಿ ಧೈರ್ಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿನೂತನವಾದ 'ಮಿಷನ್ ಸಾಹಸಿ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ 'ಮಿಷನ್ ಸಾಹಸಿ' ಉದ್ಘಾಟನೆ

ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನುರಿತ ಕರಾಟೆ ಪಟುಗಳಿಂದ ತರಬೇತಿ ಪಡೆದಿದ್ದ ಕರಾಟೆಯ ಪ್ರದರ್ಶನ ಮಾಡಿದರು. ಜೊತೆಗೆ ವಿದ್ಯಾರ್ಥಿನಿಯರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬಗೆ, ಯಾರು ಇರದ ಜನನಿಬಿಡ ಪ್ರದೇಶಗಳಲ್ಲಿ ಹಲ್ಲೆಗೆ ಮುಂದಾಗುವ ಪುರುಷರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಮಾರ್ಗದರ್ಶನ ನೀಡಲಾಯಿತು. ಇದೇ ವೇಳೆ ಕರಾಟೆ ಕರಗತಗೊಳಿಸಿಕೊಂಡಿರುವ ಕೆಲ ಕರಾಟೆ ಪಟುಗಳು ತಮ್ಮ ಸಾಹಸಮಯ ಕಲೆ ಪ್ರದರ್ಶಿಸುವ ಮೂಲಕ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ಕಾರ್ಯಕ್ರಮಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಾ ಕುಮಾರಿ ಆಗಮಿಸಿ ಉದ್ಘಾಟನೆ ನೆರವೇರಿಸಿದರು. ಅನಂತರ ಅವರು ಮಾತನಾಡಿ, ಮಹಿಳೆಯರನ್ನು ಭಾರತಮಾತೆಯ ಸ್ವರೂಪವೆಂಬಂತೆ ಕಾಣಲಾಗುತ್ತದೆ. ಹೆಣ್ಣನ್ನು ದೇವರೆಂದು ಕಾಣುವ, ಗೌರವಿಸುವ ದೇಶ ನಮ್ಮ ಭಾರತದೇಶ ಎಂದು ಹೇಳಿದರು.

ಇನ್ನೂ ಇದೇ ವೇಳೆ ತಮ್ಮ ಮಾತನಾಡಿದ ಎಬಿವಿಪಿಯ ಜಿಲ್ಲಾ ಸಂಚಾಲಕ ಅಪ್ಪು ಪಾಟೀಲ್, ಮಹಿಳೆಯರು ಏಕಾಂಗಿಯಾಗಿ ನಿರ್ಭಯದಿಂದ ಓಡಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗೆ ತಿಳಿಸುವ ನಿಟ್ಟಿನಲ್ಲಿ 'ಮಿಷನ್ ಸಾಹಸಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Intro:ತುಮಕೂರು: ಮಹಿಳೆ ಸಮಾಜದ ಕಣ್ಣು, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆ ಪಾತ್ರ ಮಹತ್ವದ್ದು, ಆದರೆ ಮಹಿಳೆಯನ್ನು ಸಮಾಜ ತುಚ್ಚವಾಗಿ ಕಾಣುತ್ತಿದೆ, ನಿರಂತರ ದೌರ್ಜನ್ಯ ನಡೆಯುತ್ತಿದೆ, ಹಿಂದಿನಿಂದಲೂ ತುಳಿತಕ್ಕೆ ಒಳಗಾಗುತ್ತಿದ್ದು, ರಕ್ಷಣೆಗಾಗಿ ಮತ್ತೊಬ್ಬರನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಲ್ಲಿ ಧೈರ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿನೂತನವಾದ ಮಿಷನ್ ಸಾಹಸಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.


Body:ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೆಲವು ದಿನಗಳಿಂದ ತಾವು ತರಬೇತಿ ಪಡೆದಿದ್ದ ಕರಾಟೆಯನ್ನು ಒಂದೇ ಪ್ರದೇಶದಲ್ಲಿ ಪ್ರದರ್ಶಿಸುತ್ತಿದ್ದ ದೃಶ್ಯ ಕಾಣಲು ಸೊಗಸಾಗಿತ್ತು, ನುರಿತ ಕರಾಟೆ ಪಟುಗಳಿಂದ ಕಲಿತ ಇವರು ತಮ್ಮನ್ನು ತಾವೇ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ, ಅದರಲ್ಲೂ ಒಂಟಿಯಾಗಿ ಹೊರಗಡೆ ಓಡಾಡುವ ಸಂದರ್ಭದಲ್ಲಿ ಯಾರು ಇರದಂತಹ ಜನನಿಬಿಡ ಪ್ರದೇಶಗಳಲ್ಲಿ ಹಲ್ಲೆಗೆ ಮುಂದಾಗುವ ಪುರುಷರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಮಾರ್ಗದರ್ಶನ ನೀಡಲಾಯಿತು.
ಕರಾಟೆ ಕರಗತಗೊಳಿಸಿಕೊಂಡಿರುವ ಕೆಲ ಕರಾಟೆ ಪಟುಗಳು ತಮ್ಮ ಸಾಹಸಮಯ ಕಲೆ ಪ್ರದರ್ಶಿಸುವ ಮೂಲಕ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು. ದಂಡ ಸರಪಳಿ ಹಿಡಿದು ತಿರುಗಿಸುವುದು, ಬಿದಿರಿನ ದಂಡ ಹಿಡಿದು ವೇಗವಾಗಿ ತಿರುಗಿಸುವುದು, ಒಂದೇ ಬಾರಿಗೆ ಕಲ್ಲುಗಳನ್ನು ಇಬ್ಬಾಗ ಮಾಡುವ ದೃಶ್ಯ ನೋಡುಗರ ಗಮನಸೆಳೆಯಿತು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಸಾಹಸಿ ಕಾರ್ಯಕ್ರಮಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಾ ಕುಮಾರಿ ಉದ್ಘಾಟಿಸಿ ಮಾತನಾಡಿ ಮಹಿಳೆಯರಿಗೆ ಭಾರತಮಾತೆಯ ಗೌರವ ಸ್ಥಾನ ನೀಡಿದೆ, ಸ್ತ್ರೀ ಸಮಾಜದಲ್ಲಿ ಮಾನ್ಯಳು, ಸ್ತ್ರೀ ಜನ್ಮ ಪಡೆದವಳು ಧನ್ಯಳು ಎಂದು ಹೇಳಬಹುದು ಹೆಣ್ಣನ್ನು ದೇವರೆಂದು ಕಾಣುವ, ಗೌರವಿಸುವ ದೇಶ ನಮ್ಮ ಭಾರತದೇಶ ಎಂದು ಹೇಳಿದರು.
ಬೈಟ್: ಲಲಿತ ಕುಮಾರಿ, ಉಪ ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ.
ಸಮಾಜದಲ್ಲಿ ದಿನೇದಿನೇ ಮಹಿಳೆಯರು ಏಕಾಂಗಿಯಾಗಿ ಓಡಾಡುವುದು ಕಷ್ಟವಾಗುತ್ತಿದೆ, ಹೀಗಾಗಿ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಿಷನ್ ಸಾಹಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿಯ ಜಿಲ್ಲಾ ಸಂಚಾಲಕ ಅಪ್ಪು ಪಾಟೀಲ್ ತಿಳಿಸಿದರು.
ಬೈಟ್: ಅಪ್ಪು ಪಾಟೀಲ್, ಜಿಲ್ಲಾ ಸಂಚಾಲಕ, ಎಬಿವಿಪಿ.


Conclusion:ಒಟ್ಟಾರೆ ತುಮಕೂರು ನಗರದಲ್ಲಿ ಹೆಣ್ಣುಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳುವ ಕಲೆ ತಿಳಿಸಿಕೊಡುವ ಮೂಲಕ ಎಬಿವಿಪಿ ಉತ್ತಮ ಕಾರ್ಯ ಮಾಡಿದೆ, ಮುಂದೆ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂಬುದು ಎಲ್ಲರ ಆಶಯ.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.