ETV Bharat / state

ತುಮಕೂರು ಪಾಲಿಕೆ ತುರ್ತು ಸಭೆ: ಕುಡಿಯುವ ನೀರಿನ ಸಮಸ್ಯೆಯ ಕರಾಳ ಮುಖ ಪ್ರದರ್ಶನ - undefined

ಶನಿವಾರ ತುಮಕೂರು ಮಹಾನಗರ ಪಾಲಿಕೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

ತುಮಕೂರು ಪಾಲಿಕೆ ತುರ್ತು ಸಭೆ
author img

By

Published : Jun 16, 2019, 7:57 AM IST

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ತುಮಕೂರು ಪಾಲಿಕೆ ತುರ್ತು ಸಭೆ

ಪಾಲಿಕೆಯ 35 ವಾರ್ಡ್​ಗಳಲ್ಲಿಯೂ ನೀರಿನ ಸಮಸ್ಯೆ ಮಿತಿ ಮೀರಿದೆ. ಕೇವಲ ನೀರಿನ ಸಮಸ್ಯೆ ಪರಿಹರಿಸುವ ಟೆಂಡರ್ ಮಾಡುತ್ತ ಕುಳಿತರೆ ಜನ ನಮ್ಮನ್ನು ಬಯ್ಯುತ್ತಾರೆ ಅಧಿಕಾರಿಗಳು ಇದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು 11ನೇ ವಾರ್ಡ್ ಸದಸ್ಯ ಮನು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೇಯರ್ ಲಲಿತ ರಮೇಶ್, ಇದುವರೆಗೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ, ಆಯುಕ್ತರ ಗಮನಕ್ಕೆ ತರಲಾಗಿತ್ತು. ಅವರು ಆ ಸಂದರ್ಭದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

4 ನೇ ವಾರ್ಡ್ ನ ಸದಸ್ಯ ದೀಪಶ್ರೀ ತಮ್ಮ ವಾರ್ಡಿನಲ್ಲಿ ಬೋರ್ವೆಲ್ ನಲ್ಲಿ ಬರುತ್ತಿದ್ದ ಕೊಳಚೆ ನೀರನ್ನು ತಂದು ಪ್ರದರ್ಶಿಸಿದರು. ಕಳೆದ ಕೆಲವು ದಿನಗಳಿಂದ ಆಯಿಲ್ ಮಿಲ್ ರಸ್ತೆಯ ಕೊಳವೆ ಬಾವಿಯಲ್ಲಿ ತ್ಯಾಜ್ಯ ನೀರು ಬರುತ್ತಿದೆ. ನೀರನ್ನು ಕುಡಿದರೆ ಜನರು ಅನಾರೋಗ್ಯ ಪೀಡಿತರಾಗುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಮೇಶ್, ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆರೆಗಳಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಯಾವ ವಾರದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ಮಾಡಿ ಕ್ರಮ ಕೈಗೊಳ್ಳಬೇಕು. ಒಂದು ಲೀಟರ್ ಶುದ್ಧ ನೀರು ಪಡೆಯಬೇಕಾದರೆ ಎರಡು ಲೀಟರ್ ತ್ಯಾಜ್ಯ ನೀರು ಬರುತ್ತದೆ. ಅದನ್ನ ಕೂಡ ಸಮರ್ಥವಾಗಿ ಬಳಸಬೇಕೆಂದು ಸಲಹೆ ನೀಡಿದರು.

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ತುಮಕೂರು ಪಾಲಿಕೆ ತುರ್ತು ಸಭೆ

ಪಾಲಿಕೆಯ 35 ವಾರ್ಡ್​ಗಳಲ್ಲಿಯೂ ನೀರಿನ ಸಮಸ್ಯೆ ಮಿತಿ ಮೀರಿದೆ. ಕೇವಲ ನೀರಿನ ಸಮಸ್ಯೆ ಪರಿಹರಿಸುವ ಟೆಂಡರ್ ಮಾಡುತ್ತ ಕುಳಿತರೆ ಜನ ನಮ್ಮನ್ನು ಬಯ್ಯುತ್ತಾರೆ ಅಧಿಕಾರಿಗಳು ಇದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು 11ನೇ ವಾರ್ಡ್ ಸದಸ್ಯ ಮನು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೇಯರ್ ಲಲಿತ ರಮೇಶ್, ಇದುವರೆಗೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ, ಆಯುಕ್ತರ ಗಮನಕ್ಕೆ ತರಲಾಗಿತ್ತು. ಅವರು ಆ ಸಂದರ್ಭದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

4 ನೇ ವಾರ್ಡ್ ನ ಸದಸ್ಯ ದೀಪಶ್ರೀ ತಮ್ಮ ವಾರ್ಡಿನಲ್ಲಿ ಬೋರ್ವೆಲ್ ನಲ್ಲಿ ಬರುತ್ತಿದ್ದ ಕೊಳಚೆ ನೀರನ್ನು ತಂದು ಪ್ರದರ್ಶಿಸಿದರು. ಕಳೆದ ಕೆಲವು ದಿನಗಳಿಂದ ಆಯಿಲ್ ಮಿಲ್ ರಸ್ತೆಯ ಕೊಳವೆ ಬಾವಿಯಲ್ಲಿ ತ್ಯಾಜ್ಯ ನೀರು ಬರುತ್ತಿದೆ. ನೀರನ್ನು ಕುಡಿದರೆ ಜನರು ಅನಾರೋಗ್ಯ ಪೀಡಿತರಾಗುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಮೇಶ್, ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆರೆಗಳಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಯಾವ ವಾರದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ಮಾಡಿ ಕ್ರಮ ಕೈಗೊಳ್ಳಬೇಕು. ಒಂದು ಲೀಟರ್ ಶುದ್ಧ ನೀರು ಪಡೆಯಬೇಕಾದರೆ ಎರಡು ಲೀಟರ್ ತ್ಯಾಜ್ಯ ನೀರು ಬರುತ್ತದೆ. ಅದನ್ನ ಕೂಡ ಸಮರ್ಥವಾಗಿ ಬಳಸಬೇಕೆಂದು ಸಲಹೆ ನೀಡಿದರು.

Intro:ತುಮಕೂರು ಮಹಾನಗರ ಪಾಲಿಕೆ ತುರ್ತು ಸಭೆ....
ಕುಡಿಯುವ ನೀರಿನ ಸಮಸ್ಯೆಯ ಕರಾಳ ಮುಖ ಪ್ರದರ್ಶಿಸಿದ ಸದಸ್ಯರು....

ತುಮಕೂರು
ತುಮಕೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ತುರ್ತು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ 35 ವಾರ್ಡ್ ಗಳಲ್ಲಿಯೂ ನೀರಿನ ಸಮಸ್ಯೆ ಮಿತಿಮೀರಿದೆ. ಕೇವಲ ನೀರಿನ ಸಮಸ್ಯೆ ಪರಿಹರಿಸುವ ಟೆಂಡರ್ ಮಾಡುತ್ತ ಕುಳಿತರೆ ಜನ ನಮ್ಮನ್ನು ಬಯ್ಯುತ್ತಾರೆ ಅಧಿಕಾರಿಗಳು ಇದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು 11ನೇ ವಾರ್ಡ್ ಸದಸ್ಯ ಮನು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಮೇಯರ್ ಲಲಿತ ರಮೇಶ್ , ಇದುವರೆಗೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಆಯುಕ್ತರ ಗಮನಕ್ಕೆ ತರಲಾಗಿತ್ತು. ಅವರು ಆ ಸಂದರ್ಭದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

ಪಾಲಿಕೆ ಸದಸ್ಯ ನಯಾಜ್ ಅಹಮದ್ ಮಾತನಾಡಿ, 35 ವಾರ್ಡ್ಗಳಲ್ಲಿ ಹೊಸದಾಗಿ ನಲ್ಲಿಗಳ ಸಂಪರ್ಕವನ್ನು ಕೊಡುತ್ತಿಲ್ಲ ಜನರಿಗೆ ನಾವು ಏನು ಉತ್ತರ ಕೊಡಬೇಕು. ಹೊಸದಾಗಿ ನಲ್ಲಿ ಸಂಪರ್ಕಕ್ಕಾಗಿ ನಿಗದಿಪಡಿಸಿರುವ ಹಣವನ್ನು ಪಡೆದು ನಲ್ಲಿ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

4 ನೇ ವಾರ್ಡ್ ನ ಸದಸ್ಯ ದೀಪಶ್ರೀ ತಮ್ಮ ವಾರ್ಡಿನಲ್ಲಿ ಬೋರ್ವೆಲ್ ನಲ್ಲಿ ಬರುತ್ತಿದ್ದ ಕೊಳಚೆ ನೀರನ್ನು ತಂದು ಪ್ರದರ್ಶಿಸಿದರು. ಕಳೆದ ಕೆಲವು ದಿನಗಳಿಂದ ಆಯಿಲ್ ಮಿಲ್ ರಸ್ತೆಯ ಕೊಳವೆಬಾವಿಯಲ್ಲಿ ಯುಜಿಡಿ ತ್ಯಾಜ್ಯ ನೀರು ಬರುತ್ತಿದೆ . ನೀರನ್ನು ಕುಡಿದರೆ ಜನರು ಅನಾರೋಗ್ಯ ಪೀಡಿತರಾಗುತ್ತಾರೆ. ಈ ರೀತಿಯಾದ ಅನಾರೋಗ್ಯಕರ ವಾತಾವರಣಕ್ಕೆ ಯಾರು ಹೊಣೆಗಾರರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ನಾಯಕ ಬಿಜೆಪಿಯ ಪಾಲಿಕೆ ಸದಸ್ಯ ರಮೇಶ್, ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆರೆಗಳಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಯಾವ ವಾರದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ಮಾಡಿ ಕ್ರಮ ಕೈಗೊಳ್ಳಬೇಕು ಒಂದು ಲೀಟರ್ ಶುದ್ಧ ನೀರು ಪಡೆಯಬೇಕಾದರೆ ಎರಡು ಲೀಟರ್ ತ್ಯಾಜ್ಯ ನೀರು ಬರುತ್ತದೆ ಅದನ್ನು ಕೂಡ ಸಮರ್ಥವಾಗಿ ಬಳಸಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿದ್ದ ಪಾಲಿಕೆ ಆಯುಕ್ತ ಟಿ ಭೂ ಬಾಲನ್ ಮಾತನಾಡಿ, ಸದ್ಯದಲ್ಲಿಯೇ ಸಭೆ ನಡೆಸಿ ರೀ ಬೋರ್ ಮತ್ತು ಹೊಸ ಬೋರ್ವೆಲ್ ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ ಅಥವಾ ಟ್ಯಾಂಕರ್ ಮೂಲಕ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ನೂತನ ಸಂಸದ ಜಿ ಎಸ್ ಬಸವರಾಜು, ಉಪಮೇಯರ್ ರೂಪಶ್ರೀ ಹಾಜರಿದ್ದರು.



Body:ತುಮಕೂರು


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.