ETV Bharat / state

ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ

author img

By

Published : Oct 2, 2022, 10:51 PM IST

ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು. ಈಗ ಬಾವಿಯಲ್ಲಿ ಉಕ್ಕಿರುವ ನೀರು ಕಂದಕ ಸೃಷ್ಟಿಸಿದೆ.

ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ
ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ

ತುಮಕೂರು: ಗುಬ್ಬಿ ತಾಲೂಕಿನ ಕಡಬ ಗ್ರಾಮದ ಪೇಟೆ ಬೀದಿಯಲ್ಲಿ ರಸ್ತೆ ಮಧ್ಯೆ ದಿಢೀರ್ ಕುಸಿತ ಉಂಟಾಗಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಜೊತೆಯಲ್ಲಿ ನೀರು ಸಹ ಉಕ್ಕಿ ಬರುತ್ತಿದೆ.

ಬಹಳ ವರ್ಷದ ನಂತರದಲ್ಲಿ ತುಂಬಿ ಹರಿದ ಕಡಬ ಕೆರೆ ತುಂಬಿದೆ. ಕಂದಕ ಕಂಡ ಸ್ಥಳದಲ್ಲಿ ಈ ಹಿಂದೆ ದೊಡ್ಡ ಬಾವಿ ಇತ್ತು. ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು. ಈಗ ಬಾವಿಯಲ್ಲಿ ಉಕ್ಕಿರುವ ನೀರು ಕಂದಕ ಸೃಷ್ಟಿಸಿದೆ.

ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ

ಬಾವಿ ಜಾಗ ಸಂಪೂರ್ಣ ಕುಸಿಯುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಕುಸಿದ ಈ ಸ್ಥಳ ಕೆರೆಗೆ ಹತ್ತಿರವಾಗಿದೆ. ನೂರು ವರ್ಷದ ಹಳೆಯ ಬಾವಿ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದರೂ ಅಂತರ್ಜಲ ಉಕ್ಕಿ ಬಾವಿ ಇರುವಿಕೆ ತೋರುತ್ತಿದೆ. ಕೋಟೆ ನಡುವೆ ಇದ್ದ ಕಡಬ ಗ್ರಾಮ ಸಮೃದ್ಧವಾಗಿದ್ದ ಕಾಲದಲ್ಲಿ ಈ ಬಾವಿ ಜನರ ಜೀವ ಜಲ ನೀಡಿತ್ತು. ಈಗ ಕಡಬ ಪೇಟೆ ಬೀದಿ ಜನನಿಬಿಡ ಪ್ರದೇಶವಾಗಿದೆ. ದಿಢೀರ್ ಕುಸಿದ ರಸ್ತೆಯಲ್ಲಿ ಯಾರೂ ಓಡಾಡಿರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಕಂದಕ ನಿಧಾನವಾಗಿ ದೊಡ್ಡದಾಗಿ ನಿರ್ಮಾಣವಾಗುತ್ತಿದೆ.

ಓದಿ: ಜಾನುವಾರು ಚರ್ಮಗಂಟು ರೋಗ: ಪರಿಹಾರ ಧನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ

ತುಮಕೂರು: ಗುಬ್ಬಿ ತಾಲೂಕಿನ ಕಡಬ ಗ್ರಾಮದ ಪೇಟೆ ಬೀದಿಯಲ್ಲಿ ರಸ್ತೆ ಮಧ್ಯೆ ದಿಢೀರ್ ಕುಸಿತ ಉಂಟಾಗಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಜೊತೆಯಲ್ಲಿ ನೀರು ಸಹ ಉಕ್ಕಿ ಬರುತ್ತಿದೆ.

ಬಹಳ ವರ್ಷದ ನಂತರದಲ್ಲಿ ತುಂಬಿ ಹರಿದ ಕಡಬ ಕೆರೆ ತುಂಬಿದೆ. ಕಂದಕ ಕಂಡ ಸ್ಥಳದಲ್ಲಿ ಈ ಹಿಂದೆ ದೊಡ್ಡ ಬಾವಿ ಇತ್ತು. ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು. ಈಗ ಬಾವಿಯಲ್ಲಿ ಉಕ್ಕಿರುವ ನೀರು ಕಂದಕ ಸೃಷ್ಟಿಸಿದೆ.

ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ

ಬಾವಿ ಜಾಗ ಸಂಪೂರ್ಣ ಕುಸಿಯುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಕುಸಿದ ಈ ಸ್ಥಳ ಕೆರೆಗೆ ಹತ್ತಿರವಾಗಿದೆ. ನೂರು ವರ್ಷದ ಹಳೆಯ ಬಾವಿ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದರೂ ಅಂತರ್ಜಲ ಉಕ್ಕಿ ಬಾವಿ ಇರುವಿಕೆ ತೋರುತ್ತಿದೆ. ಕೋಟೆ ನಡುವೆ ಇದ್ದ ಕಡಬ ಗ್ರಾಮ ಸಮೃದ್ಧವಾಗಿದ್ದ ಕಾಲದಲ್ಲಿ ಈ ಬಾವಿ ಜನರ ಜೀವ ಜಲ ನೀಡಿತ್ತು. ಈಗ ಕಡಬ ಪೇಟೆ ಬೀದಿ ಜನನಿಬಿಡ ಪ್ರದೇಶವಾಗಿದೆ. ದಿಢೀರ್ ಕುಸಿದ ರಸ್ತೆಯಲ್ಲಿ ಯಾರೂ ಓಡಾಡಿರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಕಂದಕ ನಿಧಾನವಾಗಿ ದೊಡ್ಡದಾಗಿ ನಿರ್ಮಾಣವಾಗುತ್ತಿದೆ.

ಓದಿ: ಜಾನುವಾರು ಚರ್ಮಗಂಟು ರೋಗ: ಪರಿಹಾರ ಧನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.