ETV Bharat / state

ಕುಡಿಯುವ ನೀರಿಗೆ ಆಗ್ರಹಿಸಿ ಮಹಾನಗರ ಪಾಲಿಕೆಗೆ ಜನರ ಮುತ್ತಿಗೆ

author img

By

Published : Jun 13, 2019, 11:45 AM IST

ನಗರದ ಮರಳೂರು ದಿಣ್ಣೆ, ಜನತಾ ಕಾಲೋನಿ ನಿವಾಸಿಗಳು ಇಂದು ಏಕಾಏಕಿ ಖಾಲಿ ಕೊಡಗಳನ್ನು ಹಿಡಿದು, ನೀರು ಕೊಡಿ ಎಂದು ಘೋಷಣೆ ಹಾಕುತ್ತಾ ತುಮಕೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ್ದರು.

ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ ಪ್ರತಿಭಟನಾ ಕಾರರು

ತುಮಕೂರು: ಕುಡಿಯುವ ನೀರನ್ನು ಸರಿಯಾಗಿ ಪೂರೈಸದ ಕಾರಣ 28 ಹಾಗೂ 29 ನೇ ವಾರ್ಡಿನ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು, ಮಹಾನಗರ ಪಾಲಿಕೆ ಮುಂದೆ ನೀರು ಕೊಡಿ ಎಂದು ಘೋಷಣೆ ಕೂಗಿದರು. ಸುಮಾರು 200ಕ್ಕೂ ಹೆಚ್ಚು ಜನರು ಪಾಲಿಕೆಗೆ ಮುತ್ತಿಗೆ ಹಾಕಿದರು.

ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ನಗರದ ಮರಳೂರು ದಿಣ್ಣೆ, ಜನತಾ ಕಾಲೋನಿ ನಿವಾಸಿಗಳು ಇಂದು ಏಕಾಏಕಿ ತುಮಕೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು. ನೀರು ಕೊಡದೆ ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಳೆದ ಎರಡು ತಿಂಗಳಿನಿಂದ ಇದೇ ಸಮಸ್ಯೆ ಕಾಡುತ್ತಿದೆ. ಕಾರ್ಪೊರೇಟರ್​ಗೆ ಫೋನ್​ ಮಾಡಿದ್ರೆ, ಅವರು ರಿಸೀವ್ ಮಾಡುವುದಿಲ್ಲ. ಇನ್ನು ಆಯುಕ್ತರಿಗೆ ಕರೆ ಮಾಡಿದರೆ ಅವರು ಸಹ ಪ್ರತಿಕ್ರಿಯಿಸುವುದಿಲ್ಲ ಎಂದು ದೂರಿದರು.

ನಮಗೆ ಕುಡಿಯಲು ನೀರು ಸಿಗುತ್ತಿಲ್ಲ, ಹೀಗಾದರೆ ನಮ್ಮ ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಎಂದು ವಾರ್ಡ್​ ನಿವಾಸಿಗಳು ಮಹಾನಗರಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ತುಮಕೂರು: ಕುಡಿಯುವ ನೀರನ್ನು ಸರಿಯಾಗಿ ಪೂರೈಸದ ಕಾರಣ 28 ಹಾಗೂ 29 ನೇ ವಾರ್ಡಿನ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು, ಮಹಾನಗರ ಪಾಲಿಕೆ ಮುಂದೆ ನೀರು ಕೊಡಿ ಎಂದು ಘೋಷಣೆ ಕೂಗಿದರು. ಸುಮಾರು 200ಕ್ಕೂ ಹೆಚ್ಚು ಜನರು ಪಾಲಿಕೆಗೆ ಮುತ್ತಿಗೆ ಹಾಕಿದರು.

ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ನಗರದ ಮರಳೂರು ದಿಣ್ಣೆ, ಜನತಾ ಕಾಲೋನಿ ನಿವಾಸಿಗಳು ಇಂದು ಏಕಾಏಕಿ ತುಮಕೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು. ನೀರು ಕೊಡದೆ ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಳೆದ ಎರಡು ತಿಂಗಳಿನಿಂದ ಇದೇ ಸಮಸ್ಯೆ ಕಾಡುತ್ತಿದೆ. ಕಾರ್ಪೊರೇಟರ್​ಗೆ ಫೋನ್​ ಮಾಡಿದ್ರೆ, ಅವರು ರಿಸೀವ್ ಮಾಡುವುದಿಲ್ಲ. ಇನ್ನು ಆಯುಕ್ತರಿಗೆ ಕರೆ ಮಾಡಿದರೆ ಅವರು ಸಹ ಪ್ರತಿಕ್ರಿಯಿಸುವುದಿಲ್ಲ ಎಂದು ದೂರಿದರು.

ನಮಗೆ ಕುಡಿಯಲು ನೀರು ಸಿಗುತ್ತಿಲ್ಲ, ಹೀಗಾದರೆ ನಮ್ಮ ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಎಂದು ವಾರ್ಡ್​ ನಿವಾಸಿಗಳು ಮಹಾನಗರಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

Intro:ತುಮಕೂರು: ಮಹಾನಗರ ಪಾಲಿಕೆ ಮುಂದೆ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಇದ್ದಕ್ಕಿದ್ದಂತೆ ಜಮಾವಣೆಯಾದರು, ಅಯ್ಯೋ ಇದ್ದಕ್ಕಿದ್ದಂತೆ ಯಾಕಪ್ಪಾ ಇಷ್ಟೊಂದು ಜನ ಬಂದರೂ ಅಂತ ಗೊತ್ತಾ? ಕುಡಿಯುವ ನೀರನ್ನು ಸರಿಯಾಗಿ ಬಿಡದ ಕಾರಣ 28 ಹಾಗೂ 29 ನೇ ವಾರ್ಡಿನ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು, ಮಹಾನಗರಪಾಲಿಕೆಯ ಮುಂದೆ ನೀರು ಕೊಡಿ ಎಂದು ಘೋಷಣೆ ಹಾಕುತ್ತಾ ಅಧಿಕಾರಿಗಳನ್ನು ಒತ್ತಾಯಿಸಿದರು.


Body:ನಗರದ ಮರಳೂರು ದಿಣ್ಣೆ, ಜನತಾ ಕಾಲೋನಿ ನಿವಾಸಿಗಳು ಇಂದು ಏಕಾಏಕಿ ತುಮಕೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು.
ನೀರು ಕೊಡದೆ ಇಲ್ಲಿಂದ ಹೋಗುವುದಿಲ್ಲ, ಕಳೆದ ಎರಡು ತಿಂಗಳಿನಿಂದ ಇದೇ ಸಮಸ್ಯೆ ಕಾಡುತ್ತಿದೆ. ಕಾರ್ಪೊರೇಟರ್ ಗೆ ಕಾಲ್ ಮಾಡಿದರೆ, ಅವರು ಫೋನ್ ರಿಸೀವ್ ಮಾಡುವುದಿಲ್ಲ. ಇನ್ನೂ ಆಯುಕ್ತರಿಗೆ ಕರೆ ಮಾಡಿದರೆ ಅವರು ಸಹ ಪ್ರತಿಕ್ರಿಯಿಸುವುದಿಲ್ಲ.
ಹೀಗಾಗಿ ನಮಗೆ ಕುಡಿಯಲು ನೀರು ಸಿಗುತ್ತಿಲ್ಲ, ಹೀಗಾದರೆ ನಮ್ಮ ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಎಂದು ವಾರ್ಡ್ನ ನಿವಾಸಿಗಳು ಮಹಾನಗರಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿದರು.


Conclusion:ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.