ETV Bharat / state

ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ.. ಜೀವದ ಹಂಗು ತೊರೆದು ರಕ್ಷಿಸಿದ ಯುವಕರು

author img

By

Published : Jul 16, 2023, 10:29 PM IST

Updated : Jul 16, 2023, 10:41 PM IST

ಅಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವಕ್ತಿಯೊಬ್ಬರನ್ನು ಯುವಕರು ರಕ್ಷಣೆ ಮಾಡಿದ್ದಾರೆ.

hindu-youths-rescued-a-man-who-fell-into-a-ditch-at-agumbe-ghat-in-shivamogga
ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ: ಜೀವದ ಹಂಗು ತೊರೆದು ರಕ್ಷಿಸಿದ ಯುವಕರು
ಕಂದಕಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

ಶಿವಮೊಗ್ಗ: ಆಗುಂಬೆಯ ಏಳನೇ ತಿರುವಿನಲ್ಲಿನ ಕಂದಕಕ್ಕೆ ಉರುಳಿಬಿದ್ದ ವ್ಯಕ್ತಿಯೊಬ್ಬರನ್ನು ಕೆಲ ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸೋಮೇಶ್ವರದ ಕಡೆಯಿಂದ ಗುಜರಿ ವ್ಯಾಪಾರಿ ಮೊಹಮ್ಮದ್ ಪಾಷಾ ಅವರು ಟೋಯಿಂಗ್ ವಾಹನದಲ್ಲಿ ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಘಾಟಿ ಹತ್ತಲಾಗದೆ ನಿಂತಿತ್ತು. ವಾಹನದಿಂದ ಕೆಳಗಿಳಿದ ಮೊಹಮ್ಮದ್ ಪಾಷಾ ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಪಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ ಕೆಳಗೆ ಬಿದ್ದಿದ್ದರು ಎಂದು ತಿಳಿದು ಬಂದಿದೆ.

ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಕೆಲ ಯುವಕರು ಮೊಹಮ್ಮದ್ ಪಾಷಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್‌ಶೀಟ್, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್ ಪಾಷಾ ಅವರನ್ನು ರಕ್ಷಿಸಿ ಮೇಲೆತ್ತಿದ್ದಾರೆ. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ.

"ಟೋಯಿಂಗ್ ವಾಹನ ಬ್ರೇಕ್​ ಫೇಲ್​ ಆಗಿ ಪಾದಚಾರಿ ಮೊಹಮ್ಮದ್ ಪಾಷಾ 20 ಕಂದಕಕ್ಕೆ ಬಿದ್ದಿದ್ದರು. ನಂತರ ಆಗುಂಬೆ ಘಾಟಿನಲ್ಲಿ ಟ್ರಾಫಿಕ್​ ಜಾಮ್​ ಆಯ್ತು. ಅವರನ್ನು ರಕ್ಷಿಸಲು ಯಾರು ಮುಂದಾಗಲಿಲ್ಲ. ನಂತರ ನಾವೆಲ್ಲ ಸೇರಿ ಅವರನ್ನು ರಕ್ಷಣೆ ಮಾಡಿದ್ದೇವೆ. ಅವರಿಗೆ ಬೆನ್ನಿಗೆ ಮತ್ತು ತಲೆಗೆ ಪೆಟ್ಟಾಗಿ ಕಾಲು ಕಟ್​ ಆಗಿದೆ. ಅವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ನಿತ್ಯಾನಂದ ಎಂಬುವರು ಹೇಳಿದರು.

ಇದನ್ನೂ ಓದಿ: ಸಮುದ್ರದ ಅಲೆಗೆ ಮಕ್ಕಳೆದುರೇ ಕೊಚ್ಚಿ ಹೋದ ಅಮ್ಮ.. ಮಮ್ಮಿ.. ಮಮ್ಮಿ.. ಎಂದು ಕಂದಮ್ಮಗಳ ಆಕ್ರಂದನ - ವಿಡಿಯೋ

ಕಂದಕಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

ಶಿವಮೊಗ್ಗ: ಆಗುಂಬೆಯ ಏಳನೇ ತಿರುವಿನಲ್ಲಿನ ಕಂದಕಕ್ಕೆ ಉರುಳಿಬಿದ್ದ ವ್ಯಕ್ತಿಯೊಬ್ಬರನ್ನು ಕೆಲ ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸೋಮೇಶ್ವರದ ಕಡೆಯಿಂದ ಗುಜರಿ ವ್ಯಾಪಾರಿ ಮೊಹಮ್ಮದ್ ಪಾಷಾ ಅವರು ಟೋಯಿಂಗ್ ವಾಹನದಲ್ಲಿ ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಘಾಟಿ ಹತ್ತಲಾಗದೆ ನಿಂತಿತ್ತು. ವಾಹನದಿಂದ ಕೆಳಗಿಳಿದ ಮೊಹಮ್ಮದ್ ಪಾಷಾ ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಪಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ ಕೆಳಗೆ ಬಿದ್ದಿದ್ದರು ಎಂದು ತಿಳಿದು ಬಂದಿದೆ.

ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಕೆಲ ಯುವಕರು ಮೊಹಮ್ಮದ್ ಪಾಷಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್‌ಶೀಟ್, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್ ಪಾಷಾ ಅವರನ್ನು ರಕ್ಷಿಸಿ ಮೇಲೆತ್ತಿದ್ದಾರೆ. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ.

"ಟೋಯಿಂಗ್ ವಾಹನ ಬ್ರೇಕ್​ ಫೇಲ್​ ಆಗಿ ಪಾದಚಾರಿ ಮೊಹಮ್ಮದ್ ಪಾಷಾ 20 ಕಂದಕಕ್ಕೆ ಬಿದ್ದಿದ್ದರು. ನಂತರ ಆಗುಂಬೆ ಘಾಟಿನಲ್ಲಿ ಟ್ರಾಫಿಕ್​ ಜಾಮ್​ ಆಯ್ತು. ಅವರನ್ನು ರಕ್ಷಿಸಲು ಯಾರು ಮುಂದಾಗಲಿಲ್ಲ. ನಂತರ ನಾವೆಲ್ಲ ಸೇರಿ ಅವರನ್ನು ರಕ್ಷಣೆ ಮಾಡಿದ್ದೇವೆ. ಅವರಿಗೆ ಬೆನ್ನಿಗೆ ಮತ್ತು ತಲೆಗೆ ಪೆಟ್ಟಾಗಿ ಕಾಲು ಕಟ್​ ಆಗಿದೆ. ಅವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ನಿತ್ಯಾನಂದ ಎಂಬುವರು ಹೇಳಿದರು.

ಇದನ್ನೂ ಓದಿ: ಸಮುದ್ರದ ಅಲೆಗೆ ಮಕ್ಕಳೆದುರೇ ಕೊಚ್ಚಿ ಹೋದ ಅಮ್ಮ.. ಮಮ್ಮಿ.. ಮಮ್ಮಿ.. ಎಂದು ಕಂದಮ್ಮಗಳ ಆಕ್ರಂದನ - ವಿಡಿಯೋ

Last Updated : Jul 16, 2023, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.